ತೇಜಸ್ವಿನಿಯವರ ‘ಹಂಸಯಾನ’ ಕಾದಂಬರಿಯ ಲೋಕಾರ್ಪಣೆಗೆ ಆಹ್ವಾನ
ಬೆಂಗಳೂರು, ಡಿಸೆಂಬರ್ 07: ಒನ್ಇಂಡಿಯಾ(ಈ ಹಿಂದಿನ ದಟ್ಸ್ ಕನ್ನಡ.ಕಾಂ) ವೆಬ್ ತಾಣದಲ್ಲಿ ಶಿರಸಿ ಭವನ ಅಂಕಣ ಬರೆಯುತ್ತಿದ್ದ ಶ್ರೀಮತಿ ತೇಜಸ್ವಿನಿ ಹೆಗಡೆಯವರ ಎರಡನೇ ಕಾದಂಬರಿ ಲೋಕರ್ಪಣೆಗೊಳ್ಳಲು ಸಿದ್ಧವಾಗಿದೆ.
ಜಯಶ್ರೀ ಪ್ರಕಾಶನ ಪ್ರಕಟಿಸಿರುವ 'ಹಂಸಯಾನ' ಕಾದಂಬರಿಯ ಬಿಡುಗಡೆ ಸಮಾರಂಭವನ್ನು 'ಈ ಹೊತ್ತಿಗೆ' ಬಳಗವು ಆಯೋಜಿಸಿದೆ.
ಇತ್ತೀಚಿಗೆ ಮೂಡಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ 'ಹಂಸಯಾನ' ಕಾದಂಬರಿಯ ಬಿಡುಗಡೆ ಸಮಾರಂಭವನ್ನು ನೆರವೇರಿಸಲಾಗಿತ್ತು. ಈಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಸಾಹಿತ್ಯ ಆಸಕ್ತರ ಸಮ್ಮುಖದಲ್ಲಿ ಕಾದಂಬರಿ ಬಿಡುಗಡೆಯಾಗುತ್ತಿದೆ.
ಕಾರ್ಯಕ್ರಮದ
ವಿವರ:
ಅಧ್ಯಕ್ಷತೆ:
ಡಾ.
ಸಿ.ಎನ್
ರಾಮಚಂದ್ರನ್,
ವಿಮರ್ಶಕರು
ಕೃತಿ
ಪರಿಚಯ:
ಡಾ.
ಕೆ.ಎನ್
ಗಣೇಶಯ್ಯ,
ಕಾದಂಬರಿಕಾರರು
ನಿರೂಪಣೆ: ಸಂಯುಕ್ತಾ ಪುಲಿಗಲ್
ಸ್ಥಳ:
ಕಪ್ಪಣ್ಣ
ಅಂಗಳ,
32
'ಎ'
ಮುಖ್ಯರಸ್ತೆ
ಜೆಪಿ
ನಗರ
1ನೇ
ಹಂತ
ಬೆಂಗಳೂರು,
-071
ಹಾಡುಗಾರಿಕೆ:
ಪ್ರತಿಭಾ
ಭಟ್,
ವೈಣಿಕ್
ದಿನಾಂಕ
:
16
ಡಿಸೆಂಬರ್
2017
ಸಮಯ
:
ಸಂಜೆ
5
ಗಂಟೆ
ಲಘು
ಉಪಹಾರ:
5
ಗಂಟೆಯಿಂದ
5.30
ಸ್ವಸ್ತಿ ಪ್ರಕಾಶನ, ಕುಮಟಾ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆ -2017ಯಲ್ಲಿ ತೇಜಸ್ವಿನಿ ಹೆಗಡೆ ಅವರ ಮೊದಲ ಕಾದಂಬರಿ "ಹೊರಳುದಾರಿ" ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.