ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಟಾ ಪರ ಪ್ರಚಾರ ಮಾಡುತ್ತಿಲ್ಲ ಎಂದ ತೇಜಸ್ವಿನಿ ಅನಂತ ಕುಮಾರ್

|
Google Oneindia Kannada News

Recommended Video

Lok Sabha Elections 2019:ಮತ್ತೆ ಟ್ವೀಟ್ ಮಾಡಿದ ತೇಜಸ್ವಿನಿ ಹೇಳಿದ್ದೇನು?

ಬೆಂಗಳೂರು, ಏ.15: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ದಿವಂಗತ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಬದಲಿಗೆ ಯುವ ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದು ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿತ್ತು.

ಈಗ ಕ್ಷೇತ್ರದಲ್ಲಿ ನೋಟಾ ಪರ ಮತ ಚಲಾಯಿಸುವಂತೆ ತೇಜಸ್ವಿನಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಹರಡಿದೆ. ಈ ಕುರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Tejaswini ananth kumar rejects nota campaign allegation

ಆದರೆ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಖುದ್ದು ಸ್ಪಷ್ಟನೆ ನೀಡಿರುವ ತೇಜಸ್ವಿನಿ ಅನಂತ ಕುಮಾರ್ , ನೋಟಾ ಪರವಾಗಿ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಕೆಲವರು ಸುಳ್ಳುಸಿದ್ದಿ ಹಬ್ಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ತೇಜಸ್ವಿ ಸೂರ್ಯ ಪರ ಪ್ರಚಾರಕ್ಕಿಳಿದ ತೇಜಸ್ವಿನಿ ಅನಂತ್ ಕುಮಾರ್ತೇಜಸ್ವಿ ಸೂರ್ಯ ಪರ ಪ್ರಚಾರಕ್ಕಿಳಿದ ತೇಜಸ್ವಿನಿ ಅನಂತ್ ಕುಮಾರ್

ಇದು ದುರುದ್ದೇಶಪೂರ್ವಕವಾಗಿದೆ. ನನಗೆ ಬಿಜೆಪಿಗೆ ಮತ ನೀಡಿ ದೇಶ ಮೊದಲು , ಮೋದಿ ಮತ್ತೊಮ್ಮೆ ಎನ್ನುವುದು ಮುಖ್ಯವಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ತೇಜಸ್ವಿನಿ ತೇಜಸ್ವಿ ಸೂರ್ಯ ಪರ ಪ್ರಚಾರ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದವು. ಆದರೆ ಅಮಿತ್ ಶಾ, ರೋಡ್ ಶೋ ಹಾಗೂ ಇನ್ನಿತರೆ ಕಾರ್ಯಕ್ರಮಗಳಲ್ಲಿ ತೇಜಸ್ವಿನಿ ಭಾಗವಹಿಸಿ ಆ ಆರೋಪಗಳಿಗೆ ತೆರೆ ಎಳೆದಿದ್ದರು. ಈಗ ತೇಜಸ್ವಿನಿ ಅನಂತ ಕುಮಾರ್ ಹೆಸರಲ್ಲಿ ನೋಟಾ ಪರ ಮತ ಚಲಾಯಿಸುವಂತೆ ಮನವಿ ಮಾಡಿರುವ ಸಂದೇಶಗಳು ಹರಿದಾಡುತ್ತಿವೆ.

ಬಿಜೆಪಿ ನಾಯಕರು ಈ ಸಂದೇಶದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ.

English summary
Tejaswini Ananth kumar rejected the Nota campaigns allegations. She clarified her stand through Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X