ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಲಿತಾಂಶದ ದಿನ ತೇಜಸ್ವಿ ಸೂರ್ಯಗೆ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್

|
Google Oneindia Kannada News

"ಕಠಿಣ ಪರಿಶ್ರಮ ಮತ್ತು ಸ್ವಚ್ಛ ಕೈಗಳಿಂದ 1996 ರಿಂದಲೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆದ್ದ ಅನಂತ್ ಕುಮಾರ್ ಅವರ ಪರಂಪರೆ ಮುಂದುವರಿಯಲಿ. ತೇಜಸ್ವಿ ಸೂರ್ಯ ಅವರಿಗೆ ಶುಭ ಹಾರೈಕೆ" ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ : ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಮುನ್ನಡೆ ಲೋಕಸಭಾ ಚುನಾವಣೆ : ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಮುನ್ನಡೆ

"ಬೆಂಗಳೂರು ದಕ್ಷಿಣದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆಯನ್ನು ತೆರೆದ ಅನಂತ್ ಕುಮಾರ್ ಅವರು 1996 ರಿಂದ ಸತತ ರು ಬಾರಿ ಅವರು ಈ ಕ್ಷೇತ್ರದಲ್ಲಿ ತಮ್ಮ ಕಟಿಣ ಪರಿಶ್ರಮ ಮತ್ತು ಸ್ವಚ್ಛ ಹಸ್ತದಿಂದ ಗೆಲವು ಸಾಧಿಸಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಬಿಜೆಪಿಗೆ ನನ್ನ ಶುಭ ಹಾರೈಕೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, "ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಮೇಡಂ. ನೀವು ಮತ್ತು ಅನಂತ್ ಕುಮಾರ್ ಜೀ ಅವರು ನನ್ನ ಬದುಕಿನಲ್ಲಿ ವಹಸಿದ ಮಹತ್ವದ ಪಾತ್ರಕ್ಕಾಗಿ ನನ್ನ ಧನ್ಯವಾದಗಳು. ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು. ಶ್ರೀ ಅನಂತ್ ಕುಮಾರ್ ಅವರಿಂದ ಪ್ರೇರಣೆ ಪಡೆದು ಉತ್ತಮವಾಗಿ ಕೆಲಸ ಮಾಡಲು ನನಗೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

Tejaswini Anant Kumar tweet to Bangalore South BJP candidate Tejaswi Surya.

ಬೆಂ

English summary
Tejaswini Anant Kumar tweet to Bangalore South BJP candidate Tejaswi Surya. She wished him best ahead Lok Sabha election results 2019:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X