45 ದಿನಗಳಲ್ಲಿ ಬೆಂಗಳೂರು ಕೆರೆಗಳಿಗೆ ಮರುಜೀವ ನೀಡಲು ಹೊರಟ ಟೆಕ್ಕಿ
ಬೆಂಗಳೂರು,ಮಾರ್ಚ್ 23: ಕೇವಲ 45 ದಿನಗಳಲ್ಲಿ ಬೆಂಗಳೂರು ಕೆರೆಗಳಿಗೆ ಮರುಜೀವ ನೀಡಲು ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಪಣ ತೊಟ್ಟಿದ್ದಾರೆ. ಅವರೊಂದಿಗೆ ನೀವೂ ಕೈಜೋಡಿಸಿ.
ಬೆಂಗಳೂರಿನ ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಇದೇ ರೀತಿ ಮುಂದುವರೆದರೆ 2025ರಷ್ಟೊತ್ತಿಗೆ ಬೆಂಗಳೂರಿನ ಎಲ್ಲಾ ಕೆರೆಗಳು ನಾಶವಾಗುತ್ತವೆ.
ರಾಜ್ಯಕ್ಕೆ ಎನ್ಜಿಟಿ ಎದುರು ಭಾರಿ ಮುಖಭಂಗ: 75 ಕೋಟಿ ದಂಡ
ಬರಿದಾಗುತ್ತಿರುವ ಕೆರೆಗಳಿಗೆ ಶೀಘ್ರವೇ ಮರುಜೀವ ದೊರೆಯಲಿದೆ. ಟೆಕ್ಕಿ ಆನಂದ್ ಕೆರೆಗಳಿಗೆ ಮರುಜೀವ ನೀಡಲು ಸಿದ್ಧರಾಗಿ ನಿಂತಿದ್ದಾರೆ.ಕೆರೆಗಳು ಭೂಮಿಯ ಕಣ್ಣುಗಳಿದ್ದಂತೆ ಎಂದು ಹೇಳಿದ್ದು 2025ರೊಳಗೆ 45 ಕೆರೆಗಳನ್ನು ಪುನರುಜ್ಜೀವಗೊಳಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಅವರು ಈಗಾಗಲೇ ಒಬ್ಬರೇ ಕೆಲಸ ಆರಂಭಿಸಿದ್ದಾರೆ.ನೀವು ಕೂಡ ಅವರೊಂದಿಗೆ ಕೈಜೋಡಿಸಿದರೆ ಕೆಲಸ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. 1960ರ ವೇಳೆಗೆ ನಗರದಲ್ಲಿ 262 ಕೆರೆಗಳಿದ್ದವು ಕ್ರಮೇಣವಾಗಿ 81ಕ್ಕೆ ಇಳಿದು ಈಗ 34 ಕೆರೆಗಳು ಜೀವಂತವಾಗಿವೆ.
ಹೌದು ಬೆಂಗಳೂರಿನಲ್ಲಿ ನೈಸರ್ಗಿಕ ಸಂಪತ್ತು ಕರಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇವುಗಳ ಉದ್ಧಾರಕ್ಕೆ ಶ್ರಮಿಸುತ್ತಿರುವವ ಸಂಖ್ಯೆ ಮಾತ್ರ ವಿರಳ, ಆದರೆ ಇಲ್ಲೊಬ್ಬ ಟೆಕ್ಕಿ ಆನಂದ್ ಮಲ್ಲಿಗವಾಡ ಮಾಡು್ತತಿರುವ ಕೆಲಸ ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ.