ಪ್ರೇಕ್ಷಕರ ಒತ್ತಾಯದ ಮೇರೆಗೆ ಪುರಹರ ನಾಟಕ ಮತ್ತೆ ರಂಗಕ್ಕೆ
ಬೆಂಗಳೂರು, ಜ.28: ಯುವ ಉತ್ಸಾಹಿ ರಂಗಕರ್ಮಿಗಳು ಸೇರಿಕೊಂಡು ಕಟ್ಟಿರುವ ಹೊಸ ತಂಡ ಆಕೃತಿ ಮೂಲಕ ಜನಮನ್ನಣೆ ಗಳಿಸಿದ ಐತಿಹಾಸಿಕ ನಾಟಕ 'ಪುರಹರ' ಮತ್ತೊಮ್ಮೆ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕಳೆದ ಮೂರು ವರ್ಷಗಳಿಂದ ನಾಟಕ ಪ್ರದರ್ಶನಕ್ಕಾಗಿ ರಂಗಪ್ರೇಮಿಗಳಿಂದ ಒತ್ತಾಯ ಕೇಳಿ ಬಂದಿತ್ತು.
ಶೈವ-ವೈಷ್ಣವ ಪಂಥ, ಮುಸ್ಲಿಮ್ ಆಡಳಿತ, ಧರ್ಮ-ಕರ್ಮ, ವೀರತ್ವ, ಆಧ್ಯಾತ್ಮ ಹೀಗೆ ಅನೇಕ ವಿಷಯಗಳ ಸುತ್ತ ಸುತ್ತುವ ಈ ನಾಟಕದ ಕಥಾ ವಸ್ತುವಿನಲ್ಲಿ ನವಿರಾದ ಪ್ರೇಮಕಥೆಯೂ ಇದೆ.
ಕಾದಂಬರಿಗಾರರಾಗಿ ಜನಪ್ರಿಯತೆ ಗಳಿಸಿರುವ ಕರ್ಮ, ನನ್ನಿ ಖ್ಯಾತಿಯ ಕರಣಂ ಪವನ್ ಪ್ರಸಾದ್ ಅವರು ರಚಿಸಿರುವ ಈ ನಾಟಕವನ್ನು ಶ್ರೀಕಂಠ ಶ್ರೌತಿ ಅವರು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. [ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]
ಮುಖ್ಯ ಪಾತ್ರದಲ್ಲಿ ಅರಬ್ ಆದಿಲ್ ಶಾ ಆಗಿ ಕರಣಂ ಪವನ್ ಪ್ರಸಾದ್ ನಟಿಸಿದ್ದರೆ, ಅವರ ಸಮನಾಗಿ ಅವಧೂತನ ಪಾತ್ರಕ್ಕೆ ವಿಜಯ್ ಜೆ ಜೋಯಿಸ್ ಜೀವ ತುಂಬಿದ್ದಾರೆ. ಉಳಿದ ಪಾತ್ರವರ್ಗ ಹಾಗೂ ನಾಟಕ ಪ್ರದರ್ಶನದ ವಿವರ ಮುಂದಿದೆ:
ರಚನೆ:
ಕರಣಂ
ಪವನ್
ಪ್ರಸಾದ್.
ನಿರ್ದೇಶನ:
ಶ್ರೀಕಂಠ
ಶ್ರೌತಿ
ಬೆಳಕು:
ಮನಸ್
ಸಂಪತ್
ಪ್ರಸಾಧನ:
ಗುರು
ಪಾತ್ರವರ್ಗ:
ಅರಬ್
ಆದಿಲ್
ಶಾ:
ಕರಣಂ
ಪವನ್
ಪ್ರಸಾದ್
ಅವಧೂತ:
ವಿಜಯ್
ಜೆ
ಜೋಯಿಸ್
ಅನಿರುದ್ಧ
ಶರ್ಮ-
ಶ್ರೇಯಸ್
ಶರ್ಮ
ಕೆಎಸ್
ಮಣಿರುದ್ಧ
ಶರ್ಮ:
ಕಾರ್ತಿಕ್
ಬಿ
ಗೌಡ
ಗರುಡಾಚಾರಿ-
ರೋಹಿತ್
ಅಶೋಕ್
ಹೆಗ್ಡೆ
ಕಾಲಭೈರವ
ಶರ್ಮ-
ಭರತ್
ವಿ
ರವ್
ವಾಸುದೇವರಾಯ-ಶಶಿಕುಮಾರ್
ಎ
ಖ್ವಾಜ
ಬಷೀರ್-ತೇಜಸ್ವಿ
ಆರ್
ಶ್ಯಾಮಸುಂದರ
-ಸಮೀರ್
ಎನ್
ಎಂ
ವಿಜಯ
ಹಾಗೂ
ತಿರುಮಲ-ಪವನ್
ಕುಮಾರ್
ವಿ
ಗಜಾನನ-
ವಾದಿರಾಜ್
ಭಾರ್ಗವ್
ಗೂಟ
ಶಂಕರ-
ರಾಕೇಶ್
ದೇವಿ-ಅದಿತಿ
ಹಂದೆ
ಸುಶೀಲಮ್ಮ-
ಅಪೂರ್ವ
ಎಂ
ನಂದಿ-ಆದರ್ಶ್
ನಾಟಕದ
ಅವಧಿ:
80
ನಿಮಿಷ
ಟಿಕೆಟ್
ಬೆಲೆ:
120
ರು
ಎಲ್ಲಿ?:
ಕೆಎಚ್
ಕಲಾಸೌಧ,
ಶ್ರೀರಾಮಾಂಜನೇಯ
ಗುಡ್ಡ
ದೇಗುಲದ
ಹಿಂಭಾಗ
ಮರಡಿ
ಸುಬ್ಬಯ್ಯ
ಚೌಲ್ಟ್ರಿ
ಹತ್ತಿರ
ಹನುಮಂತ
ನಗರ
ಬೆಂಗಳೂರು
ದಿನಾಂಕ/
ದಿನ:
ಜನವರಿ
31,
2016,
ಸಂಜೆ
7.15
ಟಿಕೆಟ್ ಬುಕ್ ಮಾಡಲು
@
BookMyShow
http://in.bookmyshow.com/bengaluru/plays/purahara/ET00037883
@
FILMYSPHERE
(20%
discount
coupon
code
for
play
PRHARA20)
https://www.filmysphere.com/purahara
ಟೆಲಿ ಬುಕ್ಕಿಂಗ್ ಗಾಗಿ: 99025 90303
(ಒನ್ಇಂಡಿಯಾ ಸುದ್ದಿ)