ಪ್ಲಾಸ್ಟಿಕ್ ಕವರ್ನಿಂದ ಉಸಿರುಗಟ್ಟಿಸಿಕೊಂಡು ಟೆಕ್ಕಿ ಆತ್ಮಹತ್ಯೆ
ಬೆಂಗಳೂರು, ಆಗಸ್ಟ್ 8: ಟೆಕ್ಕಿ ತಾನೇ ಉಸಿರುಗಟ್ಟಿಸಿಕೊಂಡು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮಾನಸಿಕವಾಗಿ ಕುಗ್ಗಿ ಹೋಗಿದ್ದರು, ಮುಖಕ್ಕೆ ಪ್ಲಾಸ್ಟಿಕ್ ಕವರ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಈರೋಡು ಮೂಲದ ಕಾರ್ತಿಕ್ (35) ಮೃತಪಟ್ಟವರು. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಸಮೀಪ ಫ್ಲ್ಯಾಟ್ನಲ್ಲಿ ನೆಲೆಸಿದ್ದ ಅವರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ನಮ್ಮ ವ್ಯಾಪಾರ ಕಸಿಯುತ್ತಿದ್ದೀರ ಎಂದು ಟೆಕ್ಕಿ ಮೇಲೆ ಕೈಮಾಡಿದ ಆಟೋ ಚಾಲಕ
ಕಾರ್ತಿಕ್ ಡಯಾಬಿಟೀಸ್ನಿಂದ ಬಳಲುತ್ತಿದ್ದರು ಈಗ ಟಿಬಿ ರೋಗವೂ ಕೂಡ ಬಂದಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು.
ಮಂಗಳವಾರ ರಾತ್ರಿ ಊಟ ಮುಗಿಸಿ ಕಾರ್ತಿಕ್, ರೂಮಿಗೆ ಬಂದು ಲಾಕ್ ಮಾಡಿಕೊಂಡಿದ್ದರು. ಬುಧವಾರ ಬೆಳಗ್ಗೆ ಕಾರ್ತಿಕ್ ಅವರ ಪತ್ನಿ ಕಾಫಿ ಕೊಡಲು ಹೋದಾಗ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡು ಮತ್ತೊಂದು ಕೀ ಬಳಸಿ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮುಖಕ್ಕೆ ಪ್ಲಾಸ್ಟಿಕ್ ಕವರನ್ನು ಕಟ್ಟಿಕೊಂಡಿದ್ದು ಹಾಗೂ ಚಾರ್ಜರ್ವೈರ್ಗಳಿಂದ ಕೈಗಳ್ಳನ್ನು ಸುತ್ತಿಕೊಂಡಿದ್ದು ಬೆಳಕಿಗೆ ಬಂದಿದೆ.