ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದ ಮೊದಲ ರೈಲ್ವೆ ಅಪಘಾತ ನಿರ್ವಹಣಾ ಕೇಂದ್ರ ಬೆಂಗಳೂರಲ್ಲಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬೆಂಗಳೂರು ಹೊರವಲಯದ ಹೆಜ್ಜಾಲದಲ್ಲಿ ರೈಲು ಅಪಘಾತ ನಿರ್ವಹಣೆ ಕೇಂದ್ರದ ನಿರ್ಮಾಣ ಕಾಮಗಾರಿಯು ಅಂತಿಮ ಹಂತ ತಲುಪಿದ್ದು ಸೆಪ್ಟೆಂಬರ್‌ ಅಂತ್ಯದೊಳಗೆ ಕಾಮಗಾರಿ ಮುಗಿಯಲಿದೆ.

ರೈಲು ಅಪಘಾತಕ್ಕೀಡಾಗದಂತೆ ತಡೆಯುವ ಈ ಕೇಂದ್ರವು 44.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ರೈಲಿನ ಬೋಗಿಯೊಂದನ್ನು ಚಲಾಯಿಸಿ ಕೃತಕವಾಗಿ ಅಪಘಾತ ಮಾಡಿ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸುವ ವಿಧಾನದ ತರಬೇತಿ ನೀಡುವ ಸೌಲಭ್ಯ ಈ ಕೇಂದ್ರದಲ್ಲಿದೆ.

ಬೆಂಗಳೂರು-ಕೊಯಮತ್ತೂರು ನಡುವೆ ಹೊಸ ರೈಲಿಗೆ ಚಾಲನೆಬೆಂಗಳೂರು-ಕೊಯಮತ್ತೂರು ನಡುವೆ ಹೊಸ ರೈಲಿಗೆ ಚಾಲನೆ

ಕೇಂದ್ರದ ಕಾಮಗಾರಿಗಳು ಮುಗಿಯುತ್ತಾ ಬಂದಿದ್ದು, ಸೆಪ್ಟೆಂಬರ್‌ನಲ್ಲೇ ತರಬೇತಿ ಆರಂಭಿಸಬಹುದಾಗಿದೆ. ಈ ಕೇಂದ್ರ ನಗರದಿಂದ 25 ಕಿ.ಮೀ ದೂರದಲ್ಲಿದೆ. ಇದು ಭಾರತೀಯ ರೈಲ್ವೆ ಇಲಾಖೆಯ ಮೊದಲ ಅಪಘಾತ ನಿರ್ವಹಣೆ ಕೇಂದ್ರವಾಗಿದೆ. ಇತ್ತೀಚೆಗೆ ರೈಲು ಅಪಘಾತಗಳು ಹೆಚ್ಚುತ್ತಿರುವುದರಿಂದ ಸಿಬ್ಬಂದಿ೮ಗೆ ರಕ್ಷಣಾ ಕಾರ್ಯಾಚರಣೆಯ ತರಬೇತಿ ನೀಡಲಾಗುತ್ತಿದೆ.

SWR to install nations first railway accident management center in Bengaluru

ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ರೈಲು ಸಂಚಾರ ನವೆಂಬರ್‌ನಲ್ಲಿ ಆರಂಭಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ರೈಲು ಸಂಚಾರ ನವೆಂಬರ್‌ನಲ್ಲಿ ಆರಂಭ

ರೈಲ್ವೆ ಇಲಾಖೆಯ ದೇಶದ ಎಲ್ಲಾ ಭಾಗಗಳ ಸಿಬ್ಬಂದಿಯನ್ನು ತಂಡವಾಗಿ ರಚಿಸಿ ಇಲ್ಲಿಗೆ ಕಳುಹಿಸಲಾಗುತ್ತದೆ. ರೈಲು ಅಪಘಾತವಾಗಲು ಕಾರಣಗಳು, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತರಬೇತಿ ನೀಡಲಾಗುತ್ತದೆ. ಅಪಘಾತವಾದಾಗ ಅಥವಾ ಬೆಂಕಿ ಅಬಘಡ ಸಂಭವಿಸಿದಾಗ ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮ, ವೈದ್ಯಕೀಯ ಚಿಕಿತ್ಸೆ, ಜನರಿಗೆ ನೀಡುವ ಎಚ್ಚರಿಕೆ ಮೊದಲಾದವುಗಳ ಬಗ್ಗೆತರಗತಿಯಲ್ಲಿ ಪಾಠ ಮಾಡಲಾಗುತ್ತದೆ.

English summary
South Western Railway will install nation's first railway accident management center at Hejjal in Bengaluru. Work will be resumed by September first week at the cost of Rs.44.43 Crs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X