ಸ್ವಚ್ಛಭಾರತ್ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರಸಚಿವ ಡಿವಿಎಸ್
ಬೆಂಗಳೂರು, ಅಕ್ಟೋಬರ್ 2: ಗಾಂಧಿಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಬೆಳಗ್ಗೆ 10.30ಕ್ಕೆ ಸರ್ಕಲ್ ಮಾರಮ್ಮ ದೇವಾಲಯದ ಸರ್ಕಲ್ ನಲ್ಲಿ ಕೇಂದ್ರಸಚಿವ ಡಿ.ವಿ.ಸದಾನಂದ ಗೌಡ ಸ್ವಚ್ಛ ಭಾರತ್ ಅಭಿಯಾನದ ಲಾಂಛನ ಬಿಡುಗಡೆ ಮಾಡುವರು.
ಆ ನಂತರ 10.45ಕ್ಕೆ ದಿವಾನರ ಪಾಳ್ಯದಲ್ಲಿರುವ ಚಂದ್ರೋದಯ ಕನ್ನಡ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಗಾಂಧಿ ಜಯಂತಿ ಕಾರ್ಯಕ್ರಮದ ನಂತರ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.
ಸ್ವಚ್ಛ ಭಾರತ ಅಭಿಯಾನದ ಲಾಂಛನವನ್ನು ರೂಪಿಸಿದವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡ ವಿವಿಧ ಶಾಲೆಗಳನ್ನು ಗೌರವಿಸಲಾಗುವುದು. ವಿವಿಧ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
Comments
swacch bharat sadananda gowda gandhi jayanti bengaluru malleshwaram district news ಗಾಂಧಿ ಜಯಂತಿ ಸದಾನಂದ ಗೌಡ ಲಾಂಛನ ಬೆಂಗಳೂರು ಮಲ್ಲೇಶ್ವರ ಜಿಲ್ಲಾಸುದ್ದಿ
English summary
swacch bharath logo inauguration today at 10.30 in circle maramma temple circle, malleshwaram, bengaluru by central minister D.V.Sadananda gowda. After Gandhi jayanti celebration different projects will be inaugurated.