ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣಿಸಿ: ಡಿಸಿಎಂಗೆ ಸುರೇಶ್ ಕುಮಾರ್ ಪತ್ರ
ಬೆಂಗಳೂರು,
ಜೂ.
05:
ಈ
ಬಾರಿಯ
ದ್ವಿತೀಯ
ಪಿಯು
ಫಲಿತಾಂಶವು
ಆಯಾ
ವಿದ್ಯಾರ್ಥಿಗಳ
ಪ್ರಥಮ
ಪಿಯುಸಿ
ಹಾಗೂ
ಎಸ್ಎಸ್ಎಲ್ಸಿ
ಅಂಕಗಳನ್ನು
ಆಧರಿಸಿ
ನೀಡಲು
ಈಗಾಗಲೇ
ತೀರ್ಮಾನಿಸಲಾಗಿದೆ.
ಈ
ನಡುವೆ
ವೃತ್ತಿಪರ
ಕೋರ್ಸ್ಗೆ
ಪ್ರವೇಶಕ್ಕೆ
ಅವಕಾಶ
ನೀಡುವ
ಸಿಇಟಿ
ಪರೀಕ್ಷೆಗೆ
ಪಿಯುಸಿ
ಫಲಿತಾಂಶ
ಪರಿಗಣಿಸುವ
ಬದಲು
ಕೇವಲ
ಸಿ.ಇ.ಟಿ
ಪರೀಕ್ಷೆಗಳ
ಅಂಕಗಳನ್ನು
ಮಾತ್ರ
ರ್ಯಾಕಿಂಗ್ಗೆ
ಪರಿಗಣಿಸುವ
ನಿರ್ಧಾರ
ಕೈಗೊಳ್ಳಬೇಕು
ಎಂದು
ಒತ್ತಾಯಿಸಿ
ಪ್ರಾಥಮಿಕ
ಹಾಗೂ
ಪ್ರೌಢ
ಶಿಕ್ಷಣ
ಸಚಿವ
ಸುರೇಶ್
ಕುಮಾರ್,
ಉಪಮುಖ್ಯಮಂತ್ರಿಗಳು
ಹಾಗೂ
ಉನ್ನತ
ಶಿಕ್ಷಣ
ಸಚಿವ
ಡಾ.ಅಶ್ವತ್ಥನಾರಾಯಣ್ಗೆ
ಪತ್ರ
ಬರೆದಿದ್ದಾರೆ.
ಸುರೇಶ್
ಕುಮಾರ್
ಬರೆದಿರುವ
ಪತ್ರದಲ್ಲಿ,
ಕೋವಿಡ್
ಪ್ರಸರಣದ
ತೀವ್ರತೆ
ಹಾಗೂ
ವಿದ್ಯಾರ್ಥಿಗಳ
ಭವಿಷ್ಯದ
ಹಿತದೃಷ್ಟಿಗಳ
ನಡುವೆ
ಸಮತೋಲನ
ತರುವ
ನಿಟ್ಟಿನಲ್ಲಿ
ಜೂನ್
4
ರಂದು
ದ್ವಿತೀಯ
ಪಿಯು
ಪರೀಕ್ಷೆಗಳನ್ನು
ರದ್ದು
ಪಡಿಸುವ
ತೀರ್ಮಾನವನ್ನು
ನಾವು
ಕೈಗೊಂಡಿದ್ದೇವೆ.
ದ್ವಿತೀಯ
ಪಿಯು
ವಿದ್ಯಾರ್ಥಿಗಳನ್ನು
ಪರೀಕ್ಷೆಯಿಲ್ಲದೇ
ತೇರ್ಗಡೆ
ಮಾಡುವ
ಬಗ್ಗೆ
ಸರಿಯಾದ
ಪ್ರಕ್ರಿಯೆ
ಅನುಸರಿಸಿದ್ದೇವೆ.
ಈ
ವಿದ್ಯಾರ್ಥಿಗಳ
ಮೊದಲ
ಪಿಯುಸಿ
ಅಂಕಗಳಲ್ಲದೇ
ಎಸ್ಎಸ್ಎಲ್ಸಿ
ಫಲಿತಾಂಶವನ್ನೂ
ಪರಿಗಣಿಸಿ
ಅದಕ್ಕೆ
ಸಮನಾದ
ಸೂಕ್ತ
ಮೌಲ್ಯವನ್ನು
ಸೇರ್ಪಡಿಸಿ
ಗ್ರೇಡಿಂಗ್
ಫಲಿತಾಂಶವನ್ನು
ನೀಡಲು
ಸಹ
ನಿರ್ಧಾರ
ಕೈಗೊಂಡಿದ್ದೇವೆ.
"ಎಸ್ಎಸ್ಎಲ್ಸಿ
ಅಂಕಗಳನ್ನು
ಪರಿಗಣಿಸಿ
ದ್ವಿತೀಯ
ಪಿಯು
ಫಲಿತಾಂಶ''
ಅಲ್ಲದೇ ಯಾವುದೇ ವಿದ್ಯಾರ್ಥಿಯು ತನ್ನ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದೇ ಇದ್ದರೆ ಕ್ಲಪ್ತ ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಎಂದು ಕೂಡಾ ಘೋಷಿಸಿದ್ದೇವೆ. ಈ ಸಂದರ್ಭದಲ್ಲಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ.
ಸಾಮಾನ್ಯವಾಗಿ ದ್ವಿತೀಯ ಪಿಯು ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ಫಲಿತಾಂಶ ನೀಡಲಾಗುತ್ತದೆ. ಈ ಬಾರಿಯ ಗ್ರೇಡಿಂಗ್ ಫಲಿತಾಂಶವು ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತಪಡಿಸಿದರೂ ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಈ ನಿಟ್ಟಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸಿಇಟಿ ಪರೀಕ್ಷೆಗೆ ಗಣನೆಗೆ ತೆಗೆದುಕೊಳ್ಳುವ ಸಂದರ್ಭ ಈ ಫಲಿತಾಂಶವನ್ನು ಪ್ರಶ್ನಿಸಿ ಇನ್ನೊಮ್ಮೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ಬಾರಿಗೆ ಸೀಮಿತಗೊಂಡಂತೆ ತಮ್ಮ ಇಲಾಖೆಯು ನಡೆಸಲು ಉದ್ದೇಶಿಸಿರುವ ವೃತ್ತಿಪರ ಕೋರ್ಸ್ ದಾಖಲಾತಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಗೆ ವೇಟೇಜ್ ನೀಡುವ ಪ್ರಕ್ರಿಯೆಯನ್ನು ಕೈಬಿಟ್ಟು ಕೇವಲ ಸಿಇಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರ್ಯಾಕಿಂಗ್ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)