ಮಕ್ಕಳ ಮನಸೂರೆಗೊಳ್ಳುವ ಸುಧಾ ಮೂರ್ತಿ ಅವರ ಹೊಸ ಕೃತಿ
ಬೆಂಗಳೂರು, ನವೆಂಬರ್ 29 : ಹಾವಿಗೆ ಏಕೆ ಸೀಳು ನಾಲಗೆ, ದೇವರು ಮೋಸ ಮಾಡ್ತಾರಾ, ಶಿವ ಏಕೆ ಚಂದ್ರನನ್ನು ತಲೆಯಲ್ಲಿಟ್ಟುಕೊಂಡಿದ್ದಾರೆ ಈ ರೀತಿಯ ಪ್ರಶ್ನೆಗಳು ಎಲ್ಲ ಮಕ್ಕಳಲ್ಲೂ ಸಾಮಾನ್ಯ, ಈ ರೀತಿಯ ಫ್ರಶ್ನೆಗಳಿಗೆ ಉತ್ತರ ಕೊಡಲಿದೆ ಬರಹಗಾರ್ತಿ ಸುಧಾ ಮೂರ್ತಿ ಅವರ ಹೊಸ ಪುಸ್ತಕ 'ದಿ ಮ್ಯಾನ್ ಫ್ರಮ್ ದಿ ಎಗ್ : ಅನ್ ಯೂಸುವಲ್ ಟೇಲ್ಸ್ ಅಬೌಟ್ ದಿ ಟ್ರಿನಿಟಿ'.
ಜೀವನಾನುಭದಿಂದ ಸಾಹಿತ್ಯ ಸಮೃದ್ಧಿ : ಸುಧಾಮೂರ್ತಿ
ತಮಗೆ ಬಾಲ್ಯದಲ್ಲಿ ಮೂಡುತ್ತಿದ್ದ ಅನುಮಾನಗಳ ಆಧಾರದ ಮೇಲೆಯೇ ಪುಸ್ತಕ ರಚಿಸಿರುವುದಾಗಿ ಹೇಳಿರುವ ಸುಧಾ ಮೂರ್ತಿ ಅವರು, ಬಾಲ್ಯದ ಅನುಮಾನಗಳಿಗೆ ನಾನು ಕಂಡು ಕೊಂಡ ಸತ್ಯಗಳನ್ನು, ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಪುಸ್ತಕದಲ್ಲಿ ದಾಖಲಿಸಿದ್ದೇನೆ ಎಂದಿದ್ದಾರೆ.
ಸುಧಾ ಮೂರ್ತಿ ಅವರ ಈ ಪುಸ್ತಕ ಪುರಾಣ ಕತೆಗಳ ಕುರಿತು ಅವರು ರಚಿಸಿರುವ ಎರಡನೇಯ ಪುಸ್ತಕವಾಗಿದೆ. 'ದಿ ಸರ್ಪೆಂಟ್ಸ್ ರಿವೇಂಜ್ : ಅನ್ ಯೂಸುವಲ್ ಟೇಲ್ಸ್ ಫ್ರಮ್ ದಿ ಮಹಾಭಾರತ' ಅವರ ಮೊದಲ ಪುರಾಣ ಕುರಿತಾದ ಪುಸ್ತಕ.
'ಕ್ಲಾತ್' ನೋಡಿ 'ಕ್ಲಾಸ್' ಅಳೆಯುವ ಮನಸ್ಥಿತಿ ಬದಲಾಗಬೇಕಿದೆ: ಸುಧಾಮೂರ್ತಿ
'ಪುಸ್ತಕವು ಮಕ್ಕಳನ್ನು ಮಂತ್ರಮುಗ್ದವಾಗಿಸುತ್ತದೆ ಹಾಗೂ ಉಳಿದ ಓದುಗರನ್ನು ತಮ್ಮ ಬಾಲ್ಯದೆಡೆಗೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ' ಎಂಬುದು ಪ್ರಕಾಶಕರ ವಿಶ್ವಾಸದ ನುಡಿ. (ಪಿಟಿಐ)