ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನ

|
Google Oneindia Kannada News

ನಾಟಕ : ಸಡನ್ನಾಗ್ ಸತ್ತೋದ್ರೆ?!

ರಚನೆ, ನಿರ್ದೇಶನ, ನಿರ್ಮಾಣ : ಎಂ ಎಂ ಶೈಲೇಶ್ ಕುಮಾರ್

ತಂಡ : ಸೈಡ್ ವಿಂಗ್ ಬೆಂಗ್ಳೂರು

ಸ್ಥಳ : ಕೆ ಹೆಚ್ ಕಲಾ ಸೌಧ, ಹನುಮಂತನಗರ

ಸಮಯ : ಸಂಜೆ 5 ಹಾಗೂ 7.30 (ಎರಡು ಪ್ರದರ್ಶನ)

ಜೀವನವನ್ನು ವಿವರಿಸಿ, ವರ್ಣಿಸಿ ಹಲವಾರು ಕವಿಗಳು, ಪಂಡಿತರು ತಮ್ಮದೇ ವ್ಯಾಖ್ಯಾನ ನೀಡಿ ಬರೆದಿದ್ದಾರೆ. ಎಲ್ಲರೂ ಜೀವನವನ್ನು ಅದ್ಭುತಗಳ ಸಾಲಿಗೆ ಸೇರಿಸಿ ಸಂತಸದಿಂದ ಅನುಭವಿಸಲು ಹೇಳುತ್ತಾರೆ. ಆದರೆ, ಜೀವನದ ಜಂಜಾಟಗಳಲ್ಲಿ ಸಿಲುಕ, ಯಾಂತ್ರಿಕ ಬದುಕನ್ನು ಸಾಗಿಸುತ್ತಿರುವ ಇಂದಿನ ಮನುಷ್ಯ ಜೀವನದ ಖುಷಿಯನ್ನು ಅನುಭವಿಸುವುದ ಮರೆತು, ಪ್ರತಿಷ್ಠೆ, ಸಂಪಾದನೆ ಎಂಬ ದೊಡ್ಡ ವಿಚಾರಗಳ ಹಿಂದೆ ಬಿದ್ದು ಸಣ್ಣ ಸಣ್ಣ ಸಂಗತಿಗಳಲ್ಲಿನ ಸಂತಸಗಳು ಅವನಿಗೆ ಕಾಣದಾಗಿದೆ. ಇದರ ಕುರಿತಾಗಿ ರಚಿಸಿರುವ ನಾಟಕ 'ಸಡನ್ನಾಗ್ ಸತ್ತೋದ್ರೆ?!'.

ಮಾಸ್ಟರ್ ಹಿರಣ್ಣಯ್ಯ ವೃತ್ತಿ ರಂಗಭೂಮಿಯ ಸಾರ್ವಭೌಮ: ಶಿವರಾಂಮಾಸ್ಟರ್ ಹಿರಣ್ಣಯ್ಯ ವೃತ್ತಿ ರಂಗಭೂಮಿಯ ಸಾರ್ವಭೌಮ: ಶಿವರಾಂ

'ಸಡನ್ನಾಗ್ ಸತ್ತೋದ್ರೆ?!' ನಾಟಕ ಈಗಾಗಲೇ ಪ್ರೇಕ್ಷಕರ ಪ್ರೀತಿ ಪಡೆದಿದೆ. ಬೆಂಗಳೂರಿನಲ್ಲಿ ಏಳೆಂಟು ಪ್ರದರ್ಶನ ಆಗಿರುವ ಈ ನಾಟಕದ ಎಲ್ಲ ಶೋಗಳು ಹೌಸ್ ಫುಲ್ ಆಗಿವೆ. ಇಂತಹ ಸದಭಿರುಚಿಯ ನಾಟಕ ಮೇ 18 ರಂದು ಮತ್ತೆ ಪ್ರದರ್ಶನ ಆಗುತ್ತಿದೆ.

Suddennag Sathodre kannada play will be held on May 18th

ಸಾವು ಎಂದರೆ ಅಪಶಕುನ ಎಂದು ಭಾವಿಸುವವರ ನಡುವೆ ಶೈಲೇಶ್ ಕುಮಾರ್ ಎಂ.ಎಂ. ಅವರು ಅದೇ ಸಾವನ್ನು ಉಪಯೋಗಿಸಿ, ಬದುಕನ್ನು ಸುಂದರವಾಗಿಸಿಕೊಳ್ಳುವತ್ತ ಮಾಡಬೇಕಾದ ಕೆಲಸಗಳನ್ನು ತಿಳಿಸುತ್ತಾರೆ. ಇಡೀ ನಾಟಕ ಹಾಸ್ಯಮಯವಾಗಿದ್ದು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ ಸುಳ್ಳಲ್ಲ.

Suddennag Sathodre kannada play will be held on May 18th

ಎಂದಿನಂತೆ, ನಿರ್ದೇಶಕ ಶೈಲೇಶ್ ಕುಮಾರ್ ಅವರು ಗಂಭೀರ ವಿಚಾರಗಳನ್ನು ಹಾಸ್ಯಮಯವಾಗಿ ಹೇಳುವ ತಂತ್ರವನ್ನು ಇಲ್ಲಿಯೂ ಬಳಸಿ ಯಶಸ್ವಿಯಾಗಿದ್ದಾರೆ. ಪ್ರೇಕ್ಷಕರನ್ನುನಕ್ಕು ನಗಿಸಿ, ಜೀವನದ ಮುಖ್ಯ ಸಂದೇಶವೊಂದನ್ನು ತೆಗೆದುಕೊಂಡು ಹೋಗುವ ಹಾಗೆ ಮಾಡುವ ಒಂದು ಸುಂದರ ನಾಟಕ 'ಸಡನ್ನಾಗ್ ಸತ್ತೋದ್ರೆ?!'.

English summary
'Suddennag Sathodre' kannada play will be held on May 18th in KH Kala soudha Bengaluru. The play is directed by M M Shylesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X