ಬನ್ನೇರುಘಟ್ಟ ಉಳಿಸುವ ಅಭಿಯಾನ ಮುಂದುವರಿಸಿದೆ ಯುನೈಟೆಡ್ ಬೆಂಗಳೂರು
ಬೆಂಗಳೂರು, ಡಿಸೆಂಬರ್ 24: ಬನ್ನೇರುಘಟ್ಟ ಸುತ್ತಮುತ್ತಲ ಪ್ರದೇಶದ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡುವ ಕೇಂದ್ರ ಪರಿಸರ ಇಲಾಖೆ ನಿರ್ಧಾರವನ್ನು ವಿರೋಧಿಸಿ, 'ಬನ್ನೇರುಘಟ್ಟ ರಕ್ಷಿಸಿ' ಅಭಿಯಾನ ನಡೆಸುತ್ತಿರುವ ಯುನೈಟೆಡ್ ಬೆಂಗಳೂರು ಸಂಸ್ಥೆಯು ಬೆಂಗಳೂರಿನ ವಿವಿಎನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು.
ಪರಿಸರಸೂಕ್ಷ್ಮ ವಲಯ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು, ಕಾನೂನುಬಾಹಿರ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆಗೆ ಕೊನೆ ಹಾಡಬೇಕು, ವನ್ಯಪ್ರಾಣಿಗಳ ಪಥವನ್ನು ಹಾಳುಗೆಡವುವುದನ್ನು ತಡೆಗಟ್ಟಬೇಕು ಹಾಗೂ ಇದರಿಂದ ಉಂಟಾಗುವ ಮಾನವ-ಪ್ರಾಣಿ ಸಂಘರ್ಷವನ್ನು ತಡೆಯಬೇಕು ಎಂಬ ಬಗ್ಗೆ ನಡೆಯುತ್ತಿರುವ ಅಭಿಯಾನದ ವಿವರ ನೀಡಲಾಯಿತು.
ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯ ಪ್ರದೇಶ ಕಡಿತ!
ಇಂಥ ಮಹತ್ತರವಾದ ಉದ್ದೇಶ ಹೊಂದಿರುವ ಅಭಿಯಾನದ ಹಿಂದೆ ಕೂಡ ಘನವಾದ ಪರಿಣಾಮಗಳು ಇವೆ. ಬನ್ನೇರುಘಟ್ಟ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಉಳಿಸಿಕೊಂಡರೆ ಬೆಂಗಳೂರನ್ನು ಸಹ ಉಳಿಸಿಕೊಂಡಂತೆ ಆಗುತ್ತದೆ ಎಂದು ಉದಾಹರಣೆ ಸಹಿತವಾಗಿ ವಿವರಿಸಲಾಯಿತು. ನಿಮಗೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕಾದರೆ ಈ ಅರ್ಜಿಗೆ ಸಹಿ ಹಾಕಿ.
Students & faculty at VVN college, #Bengaluru join the call to #SaveBannerghatta#BengaluruDemands
— United Bengaluru (@unitedbengaluru) December 24, 2018
1. A larger robust ESZ & an end to illegal quarrying & mining
2. End the destruction of wildlife corridors that cause man-animal conflict
Sign petition:-https://t.co/dqZ90PES4W pic.twitter.com/rXslYpoMJs