ನಾಯಿ ಕಚ್ಚಿದ್ದನ್ನು ಪ್ರಶ್ನಿಸಿ ಒಡತಿಯಿಂದ ಕೈಕಚ್ಚಿಸಿಕೊಂಡ ಮಹಿಳೆ
ಬೆಂಗಳೂರು, ಮಾರ್ಚ್ 14: ನೀವು ಊಟ ಹಾಕುವ ನಾಯಿ ನನಗೆ ಕಚ್ಚಿದೆ ಎಂದು ದೂರು ನೀಡಲು ಹೋಗಿದ್ದ ಯುವತಿಯನ್ನು ಮನೆ ಒಡತಿಯೇ ಕಚ್ಚಿರುವ ವಿಚಿತ್ರ ಘಟನೆ ಬೆಂಗಳೂರಲ್ಲಿ ನಡೆದಿದೆ.
ಈ ಕುರಿತು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಾಗಿದೆ. ಎಚ್ಎಎಲ್ ಸಮೀಪದ ಎಲ್ಬಿಎಸ್ ನಗರದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರಲ್ಲಿ ಮತ್ತೆ ಬೀದಿ ನಾಯಿ ಹಾವಳಿ: 4 ವರ್ಷದ ಮಗು ಮೇಲೆ ದಾಳಿ
ಮೊದಲ ಘಟನೆಯಾಗಿ ಪತಿ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ನಲ್ಲಿ ಬಂದ ಇಬ್ಬರು ಸವಾರರು ಆವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ಕೆಲ ಸಮಯದ ಬಳಿಕ ಸವಾರರ ಸಹಚರರು ಬಂದು ಮತ್ತೆ ಜಗಳ ತೆಗೆದು ಕಂಬಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದರು. ಸ್ಟೇಪಿ ಚೀನ್ ದೂರು ನೀಡಿದ್ದಾರೆ.
ಅದಕ್ಕೆ ಪ್ರತಿಯಾಗಿ ಸೈಯದ್ ಎಂಬುವವರು ದೂರು ನೀಡಿದ್ದು ಅಕ್ಕನ ಮಗ ಪೈಸಲ್ ಜೊತೆಗೆ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಬೀದಿ ನಾಯಿ ಬಂದು ಕಾಲಿಗೆ ಕಚ್ಚಿತ್ತು, ಅದಕ್ಕೆ ಊಟ ಹಾಕಿ ಸಾಕಿದ್ದ ಸ್ಟೆಪಿ ಚಿನಿ ಅವರನ್ನು ಪ್ರಶ್ನೆ ಮಾಡಿದಾಗ ದೊಡ್ಡೆಯಿಂದ ಹೊಡೆದು ಕೈಗೆ ಕಚ್ಚಿದ್ದಾರೆ ಎಂದು ದೂರಿದ್ದಾರೆ.