ಸ್ಟೀಲ್ ಬ್ರಿಡ್ಜ್ ಯೋಜನೆಗೆ ಬೆಂಗಳೂರು ಉತ್ತರದ ನಾಗರಿಕರ ಜೈಕಾರ
ಬೆಂಗಳೂರು, ಜನವರಿ 5: ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಬೆಂಗಳೂರು ಉತ್ತರ ಭಾಗದ ನಾಗರಿಕರು ಜೈಕಾರ ಹಾಕಿದ್ದಾರೆ.
ಇಷ್ಟು ದಿನ ವಿವಾದಿತ ಯೋಜನೆಯಂದೆ ಕರೆಯಲಾಗುತ್ತಿದ್ದ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮರುಜೀವ ನೀಡಿದ್ದರು. ನಾಗರಿಕರ ಅಭಿಪ್ರಾಯಗಳನ್ನು ಸ್ವೀಕರಿಸಿಯೇ ಮುಂದುವರೆಯುವುದಾಗಿಯೂ ತಿಳಿಸಿದ್ದರು. ಇದೀಗ ಉಕ್ಕಿನ ಸೇತುವೆ ಯೋಜನೆಗೆ ಬೆಂಗಳೂರು ಉತ್ತರದ ನಾಗರಿಕರು ಜೈ ಹೇಳಿದ್ದಾರೆ.
ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ
ಯಲಹಂಕ, ಸಹಕಾರನಗರ, ಹೆಬ್ಬಾಳದಲ್ಲಿ ನೆಲೆಸಿರುವವರು ಈ ಯೋಜನೆಗೆ ಸಮ್ಮತಿ ಸೂಚಿಸಿದ್ದಾರೆ.ಇದರಿಂದಾಗಿ ಉತ್ತರ ಭಾಗದಿಂದ ಪ್ರಯಾಣಿಸುವವರು ಇಂಧನ ಹಾಗೂ ಸಮಯ ಎರಡನ್ನೂ ಉಳಿಸಬಹುದಾಗಿದೆ.
ಆ ಭಾಗದಿಂದ ಬೆಂಗಳೂರಿನ ಕೇಂದ್ರ ಭಾಗವನ್ನು ತಲುಪಲು ಒಂದುವರೆ ಗಂಟೆ ಬೇಕಾಗುತ್ತದೆ.ಅಷ್ಟೇ ಅಲ್ಲದೆ ಇದು ಭಾಗದವರ ತೊಂದರೆ ಮಾತ್ರವಲ್ಲ ಆ ಪ್ರದೇಶಕ್ಕೆ ಹೊರಗಡೆಯಿಂದ ಬರುವುದು ಕೂಡ ಕಷ್ಟವಾಗಿದೆ ಹೀಗಾಗಿ ಸ್ಟೀಲ್ ಬ್ರಿಡ್ಜ್ ಬೇಕು ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.