ಕೈಗಾರಿಕೆ ಉದ್ಯಮಿಗಳಿಗೆ ಬಂಪರ್: 2 ಎಕರೆ ಕೆಐಎಡಿಬಿ ಭೂಮಿ ಗುತ್ತಿಗೆ ಅಥವಾ ಮಾರಾಟಕ್ಕೆ ನಿರ್ಧಾರ
ಬೆಂಗಳೂರು,
ಜನವರಿ
1:
ರಾಜ್ಯದಲ್ಲಿ
ಬಂಡವಾಳ
ಹೂಡಲು
ಬಯಸುವ
ಉದ್ಯಮಿಗಳು
ಹಾಗೂ
ಕೈಗಾರಿಕೋದ್ಯಮಿಗಳಿಗೆ
ಬೃಹತ್
ಮತ್ತು
ಮಧ್ಯಮ
ಕೈಗಾರಿಕೆ
ಸಚಿವ
ಮುರುಗೇಶ್
ಆರ್.ನಿರಾಣಿ
ಹೊಸ
ವರ್ಷಕ್ಕೆ
ಬಂಪರ್
ಕೊಡುಗೆ'
ನೀಡಿದ್ದಾರೆ.
ಕರ್ನಾಟಕ
ಕೈಗಾರಿಕಾ
ಪ್ರದೇಶ
ಅಭಿವೃದ್ಧಿ
ಮಂಡಳಿ
(ಕೆಐಎಡಿಬಿ)
ಮೂಲಕ
ಕೈಗಾರಿಕಾ
ಉದ್ದೇಶಗಳಿಗೆ
ಹಂಚಿಕೆಯಾದ
2
ಎಕರೆಗೂ
ಹೆಚ್ಚಿನ
ಭೂಮಿಯನ್ನು
10
ವರ್ಷಗಳ
ಅವಧಿಯ
ಭೋಗ್ಯ
ಮತ್ತು
ಮಾರಾಟ
(ಲೀಸ್
ಕಂ
ಸೇಲ್
)ಕ್ಕೆ
ನೀಡಲು
ವಾಣಿಜ್ಯ
ಮತ್ತು
ಕೈಗಾರಿಕಾ
ಇಲಾಖೆ
ನಿರ್ಧರಿಸಿದೆ.
2022ರ ಮಾರ್ಚ್ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುಂಚೆ ಭೂಮಿ ಬ್ಯಾಂಕ್
2022ರ ಹೊಸ ವರ್ಷ ಕರ್ನಾಟಕಕ್ಕೆ ಉದ್ದಿಮೆದಾರರು ಹಾಗೂ ಹೂಡಿಕೆದಾರರನ್ನು ಕೈ ಬೀಸಿ ಕರೆಯುತ್ತಿದ್ದು, ರಾಜ್ಯದಲ್ಲಿ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳಿಗೆ ಹಿಂದೆಂದೂ ಸಿಗದಷ್ಟು ಪ್ರೋತ್ಸಾಹ ಹಾಗೂ ಕೈಗಾರಿಕಾ ಸ್ನೇಹಿ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಸಚಿವ ಮುರುಗೇಶ್ ನಿರಾಣಿಯವರು ಹೊಸ ವರ್ಷದಲ್ಲಿ '10 ವರ್ಷಗಳ ಲೀಸ್ ಕಮ್ ಸೇಲ್ ಡೀಡ್' ನೂತನ ನಿಯಮವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುವ ಸಂಕಲ್ಪ ಮಾಡಿದ್ದಾರೆ.
ಹೊಸ
ನೀತಿ
ನಿಯಮಗಳನ್ನು
ರೂಪಿಸಲು
ಸಿದ್ಧತೆ:
ಕರ್ನಾಟಕದಲ್ಲಿ
ಇತ್ತೀಚೆಗೆ
ನಡೆದ
ಸಚಿವ
ಸಂಪುಟ
ಸಭೆಯಲ್ಲಿ
ಉದ್ದೇಶಿತ
ಕೆಐಎಡಿಬಿ
ಕಾಯ್ದೆಗೆ
ತಿದ್ದುಪಡಿ
ಮಾಡುವ
ಪ್ರಸ್ತಾವನೆಗೆ
ಒಪ್ಪಿಗೆ
ಸೂಚಿಸಲಾಗಿದ್ದು,
ಇನ್ನು
ಮುಂದೆ
10
ವರ್ಷಗಳವರೆಗೆ
ಕೈಗಾರಿಕಾ
ಉದ್ದೇಶಗಳಿಗೆ
ನೀಡಲಾದ
ಜಮೀನನ್ನು
ಲೀಸ್
ಕಂ
ಸೇಲ್ಗೆ
ನೀಡಲು
ಸಮ್ಮತಿಸಲಾಗಿದೆ.
ಕೆಐಎಡಿಬಿ
ಕಾಯ್ದೆಗೆ
ತಿದ್ದುಪಡಿ
ಮಾಡಿರುವುದರಿಂದ
ಬಂಡವಾಳ
ಹೂಡಿಕೆದಾರರು
ಮತ್ತು
ಕೈಗಾರಿಕೋದ್ಯಮಿಗಳು
ರಾಜ್ಯದಲ್ಲಿ
ಸುಲಲಿತ
ವಹಿವಾಟು
ನಡೆಸಲು
ಅನುಕೂಲವಾಗುವಂತೆ
ಶೀಘ್ರದಲ್ಲೇ
ಹೊಸ
ನೀತಿ
ನಿಯಮಗಳನ್ನು
ರೂಪಿಸಲಾಗುವುದು
ಎಂದು
ಸಚಿವ
ನಿರಾಣಿ
ಅವರು
ತಿಳಿಸಿದ್ದಾರೆ.
ಒಂದೆರಡು
ವಾರಗಳಲ್ಲಿ
ಪೂರ್ಣ
ಪ್ರಮಾಣದ
ಆದೇಶ:
"ಅಸ್ತಿತ್ವದಲ್ಲಿರುವ
ನೀತಿಯಿಂದಾಗಿ
ರಾಜ್ಯದಲ್ಲಿ
ಹೂಡಿಕೆ
ಮಾಡಲು
ಕೈಗಾರಿಕೆಗಳ
ಕಾಳಜಿ
ಮತ್ತು
ಅನೇಕ
ಹೂಡಿಕೆದಾರರ
ಹಿಂಜರಿಕೆ
ಪರಿಹರಿಸಿ,
ಕೆಐಎಡಿಬಿ
ಭವಿಷ್ಯದಲ್ಲಿ
ಎಲ್ಲಾ
ಜಮೀನುಗಳನ್ನು
ಖಾಸಗಿ
ಕೈಗಾರಿಕೆಗಳು
ಮತ್ತು
ಸಂಸ್ಥೆಗಳಿಗೆ
10
ವರ್ಷಗಳ
ಗುತ್ತಿಗೆ
ಮತ್ತು
ಮಾರಾಟದ
ಆಧಾರದ
ಮೇಲೆ
ಹಂಚಲಿದೆ,"
ಎಂದು
ಸಚಿವ
ಮುರುಗೇಶ್
ನಿರಾಣಿ
ತಿಳಿಸಿದ್ದಾರೆ.
"ಹೊಸ
ಯೋಜನೆಗೆ
ನಿಯಮಗಳನ್ನು
ರೂಪಿಸಲಾಗುತ್ತಿದೆ
ಮತ್ತು
ಒಂದೆರಡು
ವಾರಗಳಲ್ಲಿ
ಪೂರ್ಣ
ಪ್ರಮಾಣದ
ಸರ್ಕಾರಿ
ಆದೇಶವನ್ನು
ಹೊರಡಿಸುವ
ನಿರೀಕ್ಷೆಯಿದೆ,"
ಎಂದು
ವಿಶ್ವಾಸ
ವ್ಯಕ್ತಪಡಿಸಿದ್ದಾರೆ.
ಹಿಂದಿನ
ನಿಯಮಗಳಿಂದ
ಬಂಡವಾಳದ
ಒಳಹರಿವಿಗೆ
ಅಡ್ಡಿ:
ಬೆಳಗಾವಿಯಲ್ಲಿ
ನಡೆದ
ಸಚಿವ
ಸಂಪುಟ
ಸಭೆಗೂ
ಮೊದಲು,
ಕಳೆದ
ಆಗಸ್ಟ್
ಮತ್ತು
ಸೆಪ್ಟೆಂಬರ್ನಲ್ಲಿ
ಕೈಗಾರಿಕಾ
ಇಲಾಖೆಯ
ಹಿರಿಯ
ಅಧಿಕಾರಿಗಳು
ಮತ್ತು
ಉದ್ಯಮ
ತಜ್ಞರು
ಇದರ
ಬಗ್ಗೆ
ಚರ್ಚೆ
ನಡೆಸಲಾಗಿತ್ತು.
ಕೆಐಎಡಿಬಿಯಿಂದ
ಕೇವಲ
99
ವರ್ಷಗಳ
ಲೀಸ್
ಆಧಾರದ
ಮೇಲೆ
2
ಎಕರೆಗಿಂತ
ಹೆಚ್ಚಿನ
ಭೂಮಿ
ಮಂಜೂರು
ಮಾಡುವುದರಿಂದ
ಹಲವಾರು
ಪ್ರಮುಖ
ಖಾಸಗಿ
ಕಂಪನಿಗಳು
ಕೈಗಾರಿಕೆಗಳನ್ನು
ಸ್ಥಾಪಿಸಲು
ಹಿಂಜರಿಯುತ್ತಿದ್ದವು.
ಮಂಜೂರು
ಮಾಡಿದ
ಭೂಮಿಯನ್ನು
ಮಾರಾಟ
ಮಾಡಲು
ಎಂದಿಗೂ
ಅವಕಾಶವಿರಲಿಲ್ಲ.
"ಈ
ಹಿಂದಿನ
ಷರತ್ತಿನ
ಪ್ರಕಾರ,
ಕೈಗಾರಿಕೆಗಳಿಗೆ
ಬ್ಯಾಂಕುಗಳು
ಮತ್ತು
ಹಣಕಾಸು
ಸಂಸ್ಥೆಗಳಿಂದ
ಸಾಲ
ಮತ್ತು
ಬಂಡವಾಳದ
ಒಳಹರಿವು
ಪಡೆಯಲು
ಹಾಗೂ
ಗುತ್ತಿಗೆ
ಪಡೆದ
ಭೂಮಿಯನ್ನು
ಅಡಮಾನಗೊಳಿಸಲು
ತೊಂದರೆ
ಎದುರಾಗಿತ್ತು.ಇದರ
ಪರಿಣಾಮ
ರಾಜ್ಯದಲ್ಲಿ
ಹೂಡಿಕೆಯ
ಹರಿವಿಗೆ
ಅಡ್ಡಿಯಾಗಿದ್ದು,
ಈ
ಹಿನ್ನೆಲೆ
ಇಂತಹ
ದಿಟ್ಟ
ನಿರ್ಧಾರ
ತೆಗೆದುಕೊಳ್ಳಲಾಗಿದೆ,"ಎಂದು
ಸಚಿವರು
ವಿವರಿಸಿದ್ದಾರೆ.
ಎರಡು
ವರ್ಷಗಳ
ನಂತರ
ಮಾರಾಟ
ಪತ್ರ:
ಪ್ರಸ್ತಾವಿತ
ತಿದ್ದುಪಡಿಯ
ಮೂಲಕ,
ಯಾವುದೇ
ಕೈಗಾರಿಕಾ
ಘಟಕವು
ಭೂ
ಹಂಚಿಕೆಯ
ನಂತರ
ಎರಡು
ವರ್ಷಗಳ
ಕಾಲ
ಯಶಸ್ವಿಯಾಗಿ
ಕಾರ್ಯನಿರ್ವಹಿಸಿದರೆ,
ಅವರು
ಹತ್ತು
ವರ್ಷಗಳವರೆಗೆ
ಕಾಯದೆ
ಕೆಐಎಡಿಬಿಯಿಂದ
ಮಾರಾಟ
ಪತ್ರವನ್ನು
ಪಡೆಯಲು
ಅರ್ಹರಾಗಿತ್ತಾರೆ.
ಇಲಾಖೆಯು
ತನ್ನ
ಅಧಿಕಾರಿಗಳ
ಮೂಲಕ
ಉದ್ಯಮದ
24
ತಿಂಗಳ
ಬ್ಯಾಲೆನ್ಸ್
ಶೀಟ್
ಪರಿಶೀಲಿಸಿ
ಎಲ್ಲವೂ
ನಿಯಮ
ಬದ್ಧವಾಗಿದ್ದರೆ,
ಸೇಲ್
ಡೀಡ್
ಕೊಡಲಾಗುತ್ತದೆ.
ಇದರಿಂದ
ಯೋಜನೆಯನ್ನು
ಯಶಸ್ವಿಯಾಗಿ
ಅನುಷ್ಟಾನಗೊಳಿಸಲು
ಅನುಕೂಲವಾಗುತ್ತದೆ.
ಕೆಐಎಡಿಬಿ
ನಿಯಮಗಳ
ಪ್ರಕಾರ,
ಎಂಎಸ್ಎಂಇ
ವಲಯಗಳು
ಭೂಮಿಯನ್ನು
ಹಂಚಿಕೆ
ಮಾಡಿದ
ದಿನಾಂಕದಿಂದ
ಮೂರು
ವರ್ಷಗಳೊಳಗೆ
ಉದ್ಯಮವನ್ನು
ಸ್ಥಾಪಿಸಿ,
ಉತ್ಪಾದನೆಯನ್ನು
ಪ್ರಾರಂಭಿಸಬೇಕು.
ಬೃಹತ್
ಮತ್ತು
ಮಧ್ಯಮ
ಕೈಗಾರಿಕೆಗಳಿಗೆ
ಐದು
ವರ್ಷಗಳ
ಸಮಯವನ್ನು
ನೀಡಲಾಗಿದೆ.
"ತಿದ್ದುಪಡಿಯು
ಉದ್ಯಮದ
ವಿಸ್ತರಣೆ
ಮತ್ತು
ಇನ್ನೂ
ಹೆಚ್ಚಿನ
ಹೂಡಿಕೆಗೆ
ಪ್ರೋತ್ಸಾಹಿಸುತ್ತದೆ,
ಏಕೆಂದರೆ
ಉದ್ಯಮಿಗಳು
ಕಂಪನಿಯನ್ನು
ಯಶಸ್ವಿಯಾಗಿ
ನಡೆಸಿದ
ನಂತರ
ಮಂಜೂರು
ಮಾಡಿದ
ಭೂಮಿ
ಅವರ
ಮಾಲೀಕತ್ವದಲ್ಲಿ
ಇರುತ್ತದೆ,"
ಎಂದು
ಮುರುಗೇಶ್
ನಿರಾಣಿ
ಹೇಳಿದ್ದಾರೆ.