ಜನವರಿಯಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರಿಂದ ಭಾಷಣ
ಬೆಂಗಳೂರು, ಡಿ. 12: ಜನವರಿ 20 ರಿಂದ 30ರ ವರೆಗೆ 9 ದಿನಗಳ ಕಾಲ ಬೆಂಗಳೂರಿನಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನ ನಡೆಸಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಬಾಯಿ ವಾಲಾ ಭಾಷಣ ಮಾಡಲಿದ್ದು, ಬಳಿಕ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ ಎಂದಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನ ಕೈಗೊಳ್ಳಲಾಗಿದೆ.
ರಾಜ್ಯ ಸಚಿವ ಸಂಪುಟ ಸಭೆ ಎಂದರೇನು? ಎಲ್ಲಿ? ಯಾಕೆ ನಡೆಯುತ್ತದೆ?
ಡಿಕೆಶಿ ವಿರೋಧದ ನಡುವೆ ವೈದ್ಯಕೀಯ ಮಹಾವಿದ್ಯಾಲಯಕ್ಕೆ 525 ಕೋಟಿ ರೂ.ಗಳ ಬಿಡುಗಡೆ:
ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ತೀವ್ರ ವಿರೋಧದ ನಡುವೆಯೂ ರಾಜ್ಯ ಬಿಜೆಪಿ ಸರ್ಕಾರ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಳಿಸಿದ್ದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 525 ಕೋಟಿ ರೂ.ಗಳನ್ನ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಕೊಟ್ಟಿದೆ. ಹಿಂದೆ ಮೈತ್ರಿ ಸರ್ಕಾರ ಕನಕಪುರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಲು ನಿರ್ಧಾರ ಕೈಗೊಂಡಿತ್ತು. ಆದ್ರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೊದಲು ಜಿಲ್ಲಾ ಕೇಂದ್ರಗಳಿಗೆ ವೈದ್ಯಕೀಯ ಕಾಲೇಜು ಎಂದು ಯಡಿಯೂರಪ್ಪ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಕಾಲೇಜು ಸ್ಥಳಾಂತರಿಸಿದ್ದರು.
ಬಿಡಿಎ
ಅಕ್ರಮ
ಸಕ್ರಮಕ್ಕೆ
ಸಮಿತಿ
ರಚನೆ
5000
ಎಕರೆ
ಅನಧಿಕೃತ
ಕಟ್ಟಡಗಳ
ಪರಿಶೀಲನೆ
ನಡೆಸಲಿರುವ
ಸಮಿತ
ಬೆಂಗಳೂರು
ಅಭಿವೃದ್ಧಿ
ಪ್ರಾಧಿಕಾರ
ನಿರ್ಮಿಸಿರುವ
ವಿವಿಧ
ಬಡಾವಣೆಗಳಲ್ಲಿ
ಅಕ್ರಮವಾಗಿ
ನಿರ್ಮಾಣಗೊಂಡಿರುವ
ಕಟ್ಟಡಗಳನ್ನ
ಗುರುತಿಸಿ
ವರದಿ
ಕೊಡಲು
ಸಮಿತಿ
ರಚನೆ
ಮಾಡಲಾಗಿದೆ.
ಸುಮಾರು
5
ಸಾವಿರ
ಎಕರೆ
ಪ್ರದೇಶದಲ್ಲಿ
75
ಸಾವಿರ
ಅನಧಿಕೃತ
ಕಟ್ಟಡಗಳಿವೆ
ಎಂಬ
ಮಾಹಿತಿ
ಸರ್ಕಾರದ
ಬಳಿಯಿದೆ.
ಅಂತಹ
ಅಕ್ರಮ
ಕಟ್ಟಡಗಳನ್ನ
ಗುರುತಿಸಿ
ಅವುಗಳಿಗೆ
ದಂಡ
ವಿಧಿಸಿ
ಸಕ್ರಮಗೊಳಿವುದು
ಸಾಧ್ಯವಾ
ಎಂಬುದರ
ಕುರಿತು
ಸಮಿತಿ
ವರದಿ
ಕೊಡಲಿದೆ.
ಆ
ಮೇಲೆ
ಸರ್ಕಾರ
ತೀರ್ಮಾನ
ಕೈಗೊಳ್ಳಲಿದೆ.
ಸಚಿವರಾದ
ಆರ್.
ಅಶೋಕ್,
ಡಾ.
ಅಶ್ವಥ್
ನಾರಾಯಣ್,
ವಿ.
ಸೋಮಣ್ಣ,
ಎಸ್
ಸುರೇಶ್
ಕುಮಾರ್
ಸಮಿತಿಯಲ್ಲಿದ್ದಾರೆ.
ರಾಜ್ಯ
ಸಚಿವ
ಸಂಪುಟ
ಕೈಗೊಂಡ
ಇತರ
ಮಹತ್ವದ
ನಿರ್ಣಯಗಳು
ಹೀಗಿವೆ:
*
10
ಕೋಟಿ
ರೂ.ಗಳ
ವೆಚ್ಚದಲ್ಲಿ
ಅಂಗನವಾಡಿ
ಕಾರ್ಯಕರ್ತರು
ಮತ್ತು
ಸಹಾಯಕೀಯರಿಗೆ
ಸಮವವಸ್ತ್ರಕ್ಕಾಗಿ
2.56
ಲಕ್ಷ
ಸೀರೆ
ಖರೀದಿಗೆ
ತೀರ್ಮಾನ
*
ದೈಹಿಕ
ವಿಕಲ
ಚೇತನರಿಗೆ
ಯಂತ್ರಚಾಲಿತ
ದ್ವಿಚಕ್ರವಾಹನ
ಖರೀದಿಗೆ
15
ಕೋಟಿ
ರೂ.ಗಳ
ಅನುದಾನ
*
2020ರ
ವರೆಗೆ
ಭಾಗ್ಯಲಕ್ಷ್ಮಿ
ಯೋಜನೆಯಲ್ಲಿ
LIC
ಪಾಲುದಾರಿಕೆ
ಮುಂದುವರಿಸಲು
ತೀರ್ಮಾನ
*
ರಾಯಚೂರು,
ಹಾವೇರಿ,
ಮಂಡ್ಯ,
ಚಿಕ್ಕಮಗಳೂರು,
ಚಾಮರಾಜನಗರ,
ಕಲಬುರಗಿ,
ಕೋಲಾರ,
ಹಾಸನ
ಹಾಗೂ
ಧಾರವಾಡದಲ್ಲಿ
ಮಹಿಳಾ
ಕ್ರೀಡಾಪಟುಗಲಿಗೆ
ಹಾಸ್ಟೆಲ್
ನಿರ್ಮಾಣಕ್ಕೆ
15
ಕೋಟಿ
ರೂ.ಗಳ
ಬಿಡುಗಡೆ
*
ಕಲಬುರಗಿ
ಜಿಲ್ಲೆಯ
ಅಫಜಲಪುರದ
ಭೀಮಾ
ನದಿಗೆ
78
ಕೋಟಿ
ರೂ.ಗಳ
ವೆಚ್ಚದಲ್ಲಿ
ಸೇತುವೆ
ನಿರ್ಮಾಣಕ್ಕೆ
ಅನುಮೋದನೆ
*
14
ಕೋಟಿ
ರೂ.ಗಳ
ವೆಚ್ಚದಲ್ಲಿ
ಧರ್ಮಸ್ಥಳದ
ಬಳಿ
ನೇತ್ರಾವತಿ
ನದಿಗೆ
ಕಿಂಡಿ
ಅಣೆಕಟ್ಟು
ನಿರ್ಮಾಣಕ್ಕೆ
ಅನುಮೋದನೆ
*
ಬೆಂಗಳೂರಿನ
ರಾಜಾನುಕುಂಟೆ
ಬಳಿ
ಎರಡು
ಸಂಪರ್ಕ
ರಸ್ತೆ
ನಿರ್ಮಾಣಕ್ಕೆ
12
ಕೋಟಿ
ರೂ.ಗಳ
ಬಿಡುಗಡೆ
*
ಕೌಶಲ್ಯ
ಅಭಿವೃದ್ಧಿ
ಇಲಾಖೆಯಡಿ
ಕೌಶಲ್ಯ
ಮಿಷನ್
ಸ್ಥಾಪನೆಗೆ
ನಿರ್ಧಾರ
*
ಬಳ್ಳಾರಿ
ಜಿಲ್ಲೆ
ಪಾಪಿ
ನಾಯಕನಹಳ್ಳಿ
ಗಣಿ
ಬಾಧಿತ
ಗ್ರಾಮಗಳಿಗೆ
ತುಂಗಭದ್ರಾ
ನದಿಯ
ನೀರು
ಸಂಗ್ರಹಿಸಲು
ಚೆಕ್
ಡ್ಯಾಂ
ನಿರ್ಮಾಣಕ್ಕೆ
243
ಕೋಟಿ
ರೂ.ಗಳ
ವೆಚ್ಚದಲ್ಲಿ
ಕಾಮಗಾರಿಗೆ
ಅನುಮೋದನೆ
*
ಅಜೀಂ
ಪ್ರೇಂಜಿ,
ಟಾಟಾ
ಟ್ರಸ್ಟ್,
ಇನ್ಫೋಸಿಸ್
ಅರಕ್ಸಾನ್,
ಗ್ರೀನ್
ಕ್ಲೈಮೇಟ್
ಹಾಗೂ
ಎಡಿಬಿ
ದಕ್ಷಿಣ
ಪಿನಾಕಿನಿ
ನದಿ
ಪುನಶ್ಚೇತನಕ್ಕೆ
2600
ಕೋಟಿ
ಬಂಡವಾಳ
ಹೂಡಿಕೆಗೆ
ಒಪ್ಪಿಗೆ
*
ಪರಿಫರಲ್
ರಸ್ತೆಗಾಗಿ
ಜೈಕಾದಿಂದ
ಬಿಡಿಎ
ಮೂರು
ಹಂತದಲ್ಲಿ
ರಸ್ತೆ
ನಿರ್ಮಿಸಲು
ಸಂಪುಟದ
ಅನುಮತಿ.
ತುಮಕೂರು
ರಸ್ತೆಯಿಂದ
ಬಳ್ಳಾರಿ
ರಸ್ತೆಯವರೆಗೆ
1665
ಕೋಟಿ
ವೆಚ್ಚದಲ್ಲಿ
ರಸ್ತೆ
ನಿರ್ಮಾಣಕ್ಕೆ,
ಬಳ್ಳಾರಿ
ರಸ್ತೆಯಿಂದ
ಹಳೇ
ಮದ್ರಾಸ್
ರಸ್ತೆವೆರೆಗೆ
1417
ಕೋಟಿ
ರೂ,ಗಳ
ವೆಚ್ಚದಲ್ಲಿ,
ಹಳೆ
ಮದ್ರಾಸ್
ರಸ್ತೆಯಿಂದ
ಹೊಸೂರು
ರಸ್ತೆ
2453
ಕೋಟಿ
ರೂ.ಗಳ
ವೆಚ್ಚದಲ್ಲಿ
ಒಟ್ಟು
1810
ಎಕರೆ
ಭೂ
ಸ್ವಾಧೀನಪಡಿಸಿ
ಕೊಂಡು
ಫೆರಿಫೆರಲ್
ರಸ್ತೆ
ನಿರ್ಮಾಣಕ್ಕೆ
ಸಂಪುಟದ
ಒಪ್ಪಿಗೆ.