ಬಾಹ್ಯಾಕಾಶ ವಿಜ್ಞಾನಿ ಡಾ ಯು ಆರ್ ರಾವ್ : ನಡೆದುಬಂದ ದಾರಿ
ಬೆಂಗಳೂರು, ಜುಲೈ 24: 'ನನಗೆ ಇದು ಮರಣೋತ್ತರವಾಗಿ ಸಿಗಬಹುದು ಅಂದುಕೊಂಡಿದ್ದೆ...' ಇದು ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಯು. ಆರ್. ರಾವ್(85), ಕಳೆದ ಜನವರಿಯಲ್ಲಿ(2017) ತಮಗೆ ಪದ್ಮವಿಭೂಷಣ ಪ್ರಶಸ್ತಿ ಬಂದಾಗ ನೀಡಿದ್ದ ಪ್ರತಿಕ್ರಿಯೆ!
ಮಹಾನ್ ವ್ಯಕ್ತಿಗಳಿಗೆ ತಮ್ಮ ಸಾವಿನ ಸೂಚನೆ ಮುಂಚಿತವಾಗಿಯೇ ಸಿಕ್ಕುತ್ತೆ ಎಂಬ ಮಾತಿಗೆ ಇದು ಪುರಾವೆಯಾ? ಏನೋ ಗೊತ್ತಿಲ್ಲ, ಆದರೆ ಕನ್ನಡನಾಡು ಬಾಹ್ಯಾಕಾಶ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಲ್ಲಿ ನಿಸ್ಸಂದೇಹವಾಗಿ ಯು.ಆರ್. ರಾವ್ (ಮಾರ್ಚ್ 10, 1932- ಜುಲೈ 24, 2017) ಸಹ ಒಬ್ಬರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು (ಜುಲೈ 24) ಬೆಳಗ್ಗಿನ ಜಾವ 2.55 ರ ಸುಮಾರಿಗೆ ಬೆಂಗಳೂರಿನ ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾರು. ಅವರ ಸಂಕ್ಷಿಪ್ತ ವ್ಯಕ್ತಿಚಿತ್ರಣ ಇಲ್ಲಿದೆ. ಉಡುಪಿ ರಾಮಚಂದ್ರ ರಾವ್ ಎಂಬುದು ಅವರ ಪೂರ್ಣ ಹೆಸರು. ಆದರೆ ವಿಶ್ವದಾದ್ಯಂತ ಅವರು ಪ್ರಸಿದ್ಧರಾಗಿದ್ದೇ ಯು.ಆರ್.ರಾವ್ ಎಂಬ ಹೆಸರಿನಿಂದ.
ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ನಿಧನ
*
ಮಾರ್ಚ್
10,
1932
ರಲ್ಲಿ
ಉಡುಪಿ
ಜಿಲ್ಲೆಯ
ಮಾರ್ಪಳ್ಳಿಯ
ಕೃಷಿಕ
ಕುಟುಂಬದಲ್ಲಿ
ಜನನ.
*
ತಂದೆ
ಲಕ್ಷ್ಮೀನಾರಾಯಣರಾವ್,
ತಾಯಿ
ಕೃಷ್ಣವೇಣಿಯಮ್ಮ
*
ಉಡುಪಿ,
ಅನಂತಪುರ,
ಮದ್ರಾಸ್,
ಬನಾರಸ್
ಗಳಲ್ಲಿ
ವಿದ್ಯಾಭ್ಯಾಸ.
*
1952
ರಲ್ಲಿ
ಮದ್ರಾಸ್
ವಿಶ್ವವಿದ್ಯಾಲಯದಿಂದ
ಬಿಎಸ್ಸಿ
ಪದವಿ,
1954ರಲ್ಲಿ
ಬನಾರಸ್
ಹಿಂದು
ವಿಶ್ವವಿದ್ಯಾಲಯದಿಂದ
ಎಂಎಸ್ಸಿ
ಪದವಿ.
*
ಪತ್ನಿ
ಯಶೋಧ
ರಾವ್,
ಪುತ್ರ
ಮಧನ್
ರಾವ್,
ಪುತ್ರಿ
ಮಾಲಾ
ರಾವ್.
*
ವಿಕ್ರಂ
ಸಾರಾಭಾಯಿ
ಅವರ
ಮಾರ್ಗದರ್ಶನದಲ್ಲಿ
ವಿಶ್ವವಿಕಿರಣಗಳ
ಬಗೆಗೆ
ಮಾಡಿದ
ಸಂಶೋಧನಾತ್ಮಕ
ಅಧ್ಯಯನಕ್ಕೆ
1960
ರಲ್ಲಿ
ಗುಜರಾತ್
ವಿಶ್ವವಿದ್ಯಾಲಯದಿಂದ
ಪಿಎಚ್
ಡಿ
ಪದವಿ.
*
ನಂತರ
ಅಮೆರಿಕದ
ಮೆಸಾಚುಸೆಟ್ಸ್
ಉನ್ನತ
ವ್ಯಾಸಂಗ.
ಟೆಕ್ಸಾಸ್
ವಿಶ್ವವಿದ್ಯಾಲಯದಲ್ಲಿ
ಸಂಶೋಧಕರಾಗಿ,
ಉಪನ್ಯಾಸಕರಾಗಿ
ಸೇವೆ.
*
ತಿರುವನಂತಪುರದ
ಇಂಡಿಯನ್
ಇನ್ಸ್
ಟಿಟ್ಯೂಟ್
ಫಾರ್
ಸ್ಪೇಸ್
ಸೈನ್ಸ್
ಟೆಕ್ನಾಲಜಿ(ಐಐಎಸ್
ಟಿ)ಯ
ಉಪಕುಲಪತಿಯಾಗಿಯೂ
ಕಾರ್ಯನಿರವಹಿಸಿದ್ದರು.
*ಅಹಮದಾಬಾದ್
ನ
ಭೌತಶಾಸ್ತ್ರ
ಸಂಶೋಧನಾ
ಪ್ರಯೋಗಾಲಯ
ಮತ್ತು
ಬೆಂಗಳೂರಿನ
ನೆಹರೂ
ಪ್ಲಾನೆಟೆರಿಯಂ
ನ
ಅಧ್ಯಕ್ಷರೂ
ಆಗಿದ್ದರು.
*
ಇಸ್ರೋದಲ್ಲಿ
ವಿವಿಧ
ಹುದ್ದೆಗಳನ್ನು
ಅಲಂಕರಿಸಿ,
1985
ರಲ್ಲಿ
ಇಸ್ರೋ
ಅಧ್ಯಕ್ಷರಾಗಿ
ಆಯ್ಕೆ.
*
ಪಿಎಸ್
ಎಲ್
ವಿ,
ಎಎಸ್
ಎಲ್
ವಿ,
ಜಿಎಸ್
ಎಲ್
ವಿಗಳ
ಯಶಸ್ವೀ
ಉಡ್ಡಯನದ
ಹಿಂದೆ
ರಾವ್
ಅವರ
ಅವಿರತ
ಶ್ರಮವಿದೆ.
*
ಭಾರತದ
ಮೊದಲ
ಉಪಗ್ರಹ
ಎಂಬ
ಖ್ಯಾತಿ
ಗಳಿಸಿದ್ದ'ಆರ್ಯಭಟ'
ಉಪಗ್ರಹದ
ಹಿಂದೆಯೂ
ರಾವ್
ಅವರ
ಕನಸಿತ್ತು.
*
ಭಾಸ್ಕರ,
ಆಯಪಲ್,
ರೋಹಿಣಿ,
ಇನ್ಸಾಟ್-1,
ಇನ್ಸಾಟ್-2,
ಐಆರ್
ಎಸ್-1
ಮುಂತಾದ
18
ಉಪಗ್ರಹಗಳ
ನಿರ್ಮಾಣದಲ್ಲಿ
ರಾವ್
ಮುಖ್ಯ
ಮಾರ್ಗದರ್ಶಕರಾಗಿದ್ದರು.
ಪ್ರಶಸ್ತಿಗಳು
ಯು
ಆರ್
ರಾವ್
ಅವರಿಗೆ
ಸಂದ
ಪ್ರಶಸ್ತಿಗಳ
ಪಟ್ಟಿ
ದೊಡ್ಡದಿದೆ.
ಅವುಗಳಲ್ಲಿ
ಪ್ರಮುಖವಾದವು
ಇಲ್ಲಿವೆ.
*
1975
ರಲ್ಲಿ
ಕರ್ನಾಟಕ
ರಾಜ್ಯೋತ್ಸವ
ಪ್ರಶಸ್ತಿ.ಭಾರತದ
ಮೊದಲ
ಉಪಗ್ರಹ
ಎಂಬ
ಖ್ಯಾತಿ
ಗಳಿಸಿದ್ದ'ಆರ್ಯಭಟ'
*
1975
ಹರಿ
ಓಂ
ವಿಕ್ರಮ
ಸಾರಾಭಾಯಿ
ಪ್ರಶಸ್ತಿ
*
1976
ರಲ್ಲಿ
ಪದ್ಮಭೂಷಣ
ಪ್ರಶಸ್ತಿ
*
1983
ರಲ್ಲಿ
ಮತ್ತೊಮ್ಮೆ
ಕರ್ನಾಟಕ
ರಾಜ್ಯೋತ್ಸವ
ಪ್ರಶಸ್ತಿ
*
1994
ರಲ್ಲಿ
ಎಲೆಕ್ಟ್ರಾನಿಕ್ಸ್
ಮ್ಯಾನ್
ಆಫ್
ದಿ
ಇಯರ್
ಪ್ರಶಸ್ತಿ
*
2001
ರಲ್ಲಿ
ನಾಡೋಜ
ಪ್ರಶಸ್ತಿ
*
2002
ಸರ್
ಎಂ
ವಿಶ್ವೇಶ್ವರಯ್ಯ
ಮೆಮೋರಿಯಲ್
ಪ್ರಶಸ್ತಿ
*
2004
ರಲ್ಲಿ
ಕರ್ನಾಟಕ
ಮಾಧ್ಯಮ
ಅಕಾಡೆಮಿ
*
2017
ರಲ್ಲಿ
ಭಾರತದ
ಉನ್ನತ
ನಾಗರಿಕ
ಪ್ರಶಸ್ತಿ
ಪದ್ಮವಿಭೂಷಣ
*
2013
ರಲ್ಲಿ
ವಾಷಿಂಗ್ಟನ್
ನ
ಸೊಸೈಟಿ
ಆಫ್
ಸೆಟಲೈಟ್
ಪ್ರೊಫೆಷನಲ್ಸ್
ಇಂಟರ್ನ್ಯಾಷನಲ್
ವತಿಯಿಂದ
ಕೊಡಮಾಡುವ
'ಪ್ರತಿಷ್ಠಿತ
ಸ್ಯಾಟಲೈಟ್
ಹಾಲ್
ಆಫ್
ಫೇಮ್'
ಗೌರವಕ್ಕೂ
ಪಾತ್ರರಾಗಿದ್ದರು.