ಪ್ರಾಣಿ-ಪಕ್ಷಿಗಳ ಸಂರಕ್ಷಣೆಗೆ ಬಿಬಿಎಂಪಿಯಿಂದ ಆಂಬುಲೆನ್ಸ್ ಖರೀದಿ
ಬೆಂಗಳೂರು, ಜನವರಿ 4: ಪ್ರಾಣಿಗಳ ರಕ್ಷಣೆಗಾಗಿ ಆಂಬುಲೆನ್ಸ್ ಖರೀದಿಸಲು ಬಿಬಿಎಂಪಿ ಮುಂದಾಗಿದೆ. ಅಪಘಾತ ಇಲ್ಲವೇ ಕಾಯಿಲೆಗೆ ತುತ್ತಾಗಿ ತುರ್ತು ಪರಿಸ್ಥಿತಿಯಲ್ಲಿರುವ ಪ್ರಾಣಿಗಳನ್ನು ಹತ್ತಿರದ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ನಾಲ್ಕು ಆಂಬುಲೆನ್ಸ್ಗಳನ್ನು ಖರೀದಿ ಮಾಡಲು ಮುಂದಾಗಿದೆ.
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರ ನಿಖರ ಮಾಹಿತಿ ಕೇಳಿದ ಎಚ್ಡಿಕೆ
ಪಾಲಿಕೆಯ ಎಂಟು ವಲಯಗಳ ಪೈಕಿ ಪ್ರತಿ ಎರಡು ವಲಯಗಳಿಗೆ ಒಂದೊಂದು ಆಂಬ್ಯುಲೆನ್ಸ್ ನಿಗದಿ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ಮೇಯರ್ ಗಂಗಾಂಬಿಕೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ಆಸ್ತಿ ಮೌಲ್ಯಗಳಿಗೆ ಹೊಸ ಮಾರ್ಗಸೂಚಿ ದರ ಪ್ರಕಟಿಸಿದ ಸರ್ಕಾರ
ಪಶು ಸಂಗೋಪನಾ ಇಲಾಖೆಯಲ್ಲಿ ಲಭ್ಯ ಅನುದಾನ ಬಳಸಿ ನಾಲ್ಕು ಆಂಬುಲೆನ್ಸ್ ಖರೀದಿಸಿ ತುರ್ತು ಪರಿಸ್ಥಿತಿಯಲ್ಲಿ ಪ್ರಾಣಿ-ಪಕ್ಷಿಗಳನ್ನು ರಕ್ಷಿಸಲು ಚಿಕಿತ್ಸೆ ನೀಡಲು ಹಾಗೂ ಮೃತದೇಹ ಸಾಗಿಸಲು ಬಳಸುವಂತೆ ಸೂಚಿಸಿದ್ದಾರೆ.
ಬಿಬಿಎಂಪಿಯ ಕಂಟ್ರೋಲ್ ರೂಂ ಸಹಾಯವಾಣಿಗೆ ಪ್ರತಿ ದಿನ ಸಾರ್ವಜನಿಕರು ಕರೆ ಮಾಡಿ ಅಪಘಾತ ಆಗಿರುವ ಹಸು, ಬೀದಿ ನಾಯಿ ಮತ್ತಿತರೆ ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವಂತೆ ಮಾಹಿತಿ ನೀಡುತ್ತಾರೆ.