Power Cut : ಈ ವಾರ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತವಾಗಲಿದ್ದು, ನಿಮ್ಮ ಏರಿಯಾವೂ ಪಟ್ಟಿಯಲ್ಲಿದೆಯೇ ಚೆಕ್ ಮಾಡಿಕೊಳ್ಳಿ
ಕೆಟಿಪಿಸಿಎಲ್ ಹಲವಾರು ಕಾಮಗಾರಿಗಳನ್ನು ನಡೆಸುತ್ತಿರುವುದರಿಂದ ಈ ವಾರ ಬೆಂಗಳೂರು ಸೇರಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ. 24: ಕರ್ನಾಟಕ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಟಿಪಿಸಿಎಲ್) ಸಿಲಿಕಾನ್ ಸಿಟಿಯಲ್ಲಿ ಹಲವು ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಹಿನ್ನೆಲೆ ಹಲವು ಪ್ರದೇಶಗಳಲ್ಲಿ ಈ ವಾರ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ, ಬೀಳಲಿರುವ ಮರಗಳ ಕೊಂಬೆಗಳನ್ನು ಕತ್ತರಿಸುವುದು, ಕೆಳಗೆ ಬಿದ್ದಿರುವ ತಂತಿಗಳನ್ನು ರಿಪೇರಿ ಮಾಡುವುದು ಸೇರಿದಂತೆ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ನಡೆಸಲಿದೆ. ಹೀಗಾಗಿ ಜನವರಿ 28ರ ವರೆಗೂ ಹಲವು ಪ್ರದೇಶಗಳು ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ. ಜೊತೆಗೆ ರಾಜ್ಯದ ಹಲವೆಡೆಯೂ ವಿದ್ಯುತ್ ವ್ಯತ್ಯಯವಾಗಲಿದೆ.
ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಮೃತಪಟ್ಟ ನೌಕರ, ಬೆಸ್ಕಾಂ ನಿರ್ಲಕ್ಷ್ಯ ಕಾರಣ ಎಂದ ಕುಟುಂಬ
*ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳ ಪಟ್ಟಿ ಹೀಗಿದೆ*
ಜನವರಿ 25ರ ಬುಧವಾರದಂದು ಕಂದಗಲ್ಲು ಗ್ರಾಮಾಂತರ, ಶ್ಯಾಗಳೆ, ಕೋಡಿಹಳ್ಳಿ ಗ್ರಾಮಾಂತರ, ಗೋಣಿವಾಡ ಗ್ರಾಮಾಂತರ, ಇಟ್ಟಿಗೆ, ಅಸ್ತಾಪನಹಳ್ಳಿ, ಹಿರೇಮಳಲಿ, ಸೂಳೇಕೆರೆ ನೀರು ಸರಬರಾಜು, ಅರಶಿನಘಟ್ಟ, ಎಸ್ ಎಸ್ ಹಳ್ಳಿ, ಜಿ.ಕೆ ಹಳ್ಳಿ, ನಲ್ಲೂರು, ಹಾಲೇಶಪುರ, ಗಾಳಿಹಳ್ಳಿ, ಬುಲಸಾಗರ, ಬುಳಸಾಗರ, ಬುಳಸಾಗರ, ಬೈರನಹಳ್ಳಿ, ಆರ್ಬಿಐ ಲೇಔಟ್, ಕೊತ್ತನೂರು, ಜೆಪಿ ನಗರ 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್, ನೃಪತುಂಗ ನಗರ, ಜಂಬೂಸವಾರಿ ದಿನ್ನೆ, ಚುಂಚುಘಟ್ಟ, ಬ್ರಿಗೇಡ್ ಮಿಲೇನಿಯಂ ಮತ್ತು ಬ್ರಿಗೇಡ್ ಗಾರ್ಡೇನಿಯಾ ಅಪಾರ್ಟ್ಮೆಂಟ್ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
*ಜನವರಿ 27ರ ಶುಕ್ರವಾರ*
ಕಾವೇರಿನಗರ, ಹುಳಿಮಾವು, ಅಕ್ಷಯನಗರ, ಹೊಂಗಸಂದ್ರ, ಬಿಟಿಎಸ್ ಲೇಔಟ್, ವಿರಾಟ್ ನಗರ, ಕಾಳೇನ ಅಗ್ರಹಾರ, ವೇಗ ನಗರ, ಅರೆಕೆರೆ ಬಿಡಿಎ, ನ್ಯಾನಪನಹಳ್ಳಿ, ಸತ್ಯಸಾಯಿ ಬಿಡಿಎ, ಕೋಡಿಚಿಕ್ಕನಹಳ್ಳಿ, ವಿಜಯಾ ಬ್ಯಾಂಕ್ ಲೇಔಟ್, ವಿಶ್ವಪ್ರಿಯ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
*ಜನವರಿ 28ರ ಶನಿವಾರ*
ಗುಬ್ಬಿ, ಕಡಬ, ಕೆ ಜಿ ದೇವಸ್ಥಾನ, ಕಲ್ಲೂರು, ದೊಡ್ಡಗುಣಿ, ಸೋಮಲಪುರ, ನಿಟ್ಟೂರು, ಕೋಡಿಹಳ್ಳಿ, ಯಲ್ಲಾಪುರ, ಸಾಗರನಹಳ್ಳಿ, ಎಂ.ಎಸ್.ಹಳ್ಳಿ, ಹೇಮಾವತಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಳವಟ್ಟ, ಮತ್ತಿಗಟ್ಟ, ಬಂಡಿಹಳ್ಳಿ, ಎಂ.ಎನ್. ಕೋಟೆ, ಎಂ.ಎನ್. ನೀರು ಸರಬರಾಜು, ಸಿ.ಎನ್. , ಬೊಮ್ಮನಹಳ್ಳಿ, ಸಿ.ಎಸ್.ಪುರ (ಗ್ರಾಮೀಣ), ಪೆದ್ದನಹಳ್ಳಿ (ಗ್ರಾಮೀಣ), ಕಡಬ (ಗ್ರಾಮೀಣ), ಬ್ಯಾಡಿಗೆರೆ (ಗ್ರಾಮೀಣ), ಕಲ್ಲೂರು (ನಗರ), ಹಿಂಡಿಸ್ಕೆರೆ (ಗ್ರಾಮೀಣ), ಕೆ.ಕಲ್ಲಹಳ್ಳಿ (ಗ್ರಾಮೀಣ), ಅಂಕಲಕೊಪ್ಪ (ಗ್ರಾಮೀಣ), ಮಂಚಿಹಳ್ಳಿ (ಗ್ರಾಮೀಣ) , ಕುರುಬರಹಳ್ಳಿ (ಗ್ರಾಮೀಣ), ಬೆನಕನಗುಣಿ (ನಗರ), ಬಿ.ಜಿ.ಹಳ್ಳಿ, ಮಾದಪಟ್ಟಣ, ಮಲ್ಲೇನಹಳ್ಳಿ, ಟಿ.ಪಾಳ್ಯ, ಪೆಂಡ್ರನಹಳ್ಳಿ, ಪಡುಗುಡಿ, ಕೋಡಿಹಳ್ಳಿ, ಕಾಡಶೆಟ್ಟಿಹಳ್ಳಿ, ಬೆಳವಠ, ಎಚ್.ಎಸ್.ಹಳ್ಳಿ, ಬೆಣ್ಣೂರು, ಬಿ.ಮಲ್ಲೇನಹಳ್ಳಿ, ಗಂಗಾಸಂದ್ರ, ಬೆಳ್ಳೇನಹಳ್ಳಿ, ಬೈಲಹಳ್ಳಿ, ಗಂಗಸಂದ್ರ, ಬೈಲಹಳ್ಳಿ, ಬೈಲಹಳ್ಳಿ ಎಚ್ಎಎಲ್ ನೀರು ಸರಬರಾಜು, ತೊಗರಿಘಟ್ಟ, ಹೊಸೂರು, ಗುಡ್ಡದಹಳ್ಳಿ, ಕಗ್ಗೆರೆ, ಬಿದರೆ, ರಂಗನಾಥಪುರ, ಗೌರಿಪುರ, ಜೈನಿಗರಹಳ್ಳಿ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ತೋವಿನಕೆರೆ, ಸರಿಗೇಹಳ್ಳಿ, ಬ್ಯಾಡರಹಳ್ಳಿ, ರಾಮಡಿಹಳ್ಳಿ, ಮಲ್ಲೇನಹಳ್ಳಿ, ಸಂಪಿಗೆ, ರಾಮಡಿಹಳ್ಳಿ, ಮಲ್ಲೇನಹಳ್ಳಿ, ಸಂಪಿಗೆನಹಳ್ಳಿ, ಅಣಗಾರಾಪುರ ಲಿ, ದೊಡ್ಡಹಟ್ಟಿ, ಬಿ.ಸಿ.ಕಾವಲ್, ಯಲ್ಲದಭಾಗಿ, ತಾಳಿಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರ್ಕಸಂದ್ರ, ಜಲಗುಣಿ, ಎಚ್.ಪಾಳ್ಯ, ನಿಂಬೆಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಹರಿವಾಯಸಂದ್ರ, ನಲ್ಲೂರು, ಕೊಡಿಯಾನರ ಪಂಚಾಯಿತಿ, ಕಲ್ಲುಗುಡಿ, ಅಂಕಸಂದ್ರ, ರಂಗನಹಳ್ಳಿ, ಬ್ಯಾಡರಹಳ್ಳಿ, ದೇವರಹಳ್ಳಿ, ಸರಿಗೆಪಾಳ್ಯ, ಯರಬಳ್ಳಿ, ಕಲ್ಲನಹಳ್ಳಿ, ಹಾಗಲವಾಡಿ, ಮಂಚಲಕುಪ್ಪೆ, ಹೂವಿನಕಟ್ಟೆ, ಶಿವಪುರ, ಹೊಸಕೆರೆ, ಅಳ್ಳಿಘಟ್ಟ, ಬೆಟ್ಟದಹಳ್ಳಿ, ಕಾಳಿಂಗನಹಳ್ಳಿ, ಸೋಮಲಾಪುರ, ಕೆ. ಟಮಕ, ಯಳದೂರು, ದಳಸನೂರು, ಡಿಆರ್ಡಿಒ, ಟಿ.ಡಿ.ಹಳ್ಳಿ, ಸುಗುಟೂರು, ಎಸ್ಎಂ ಮಂಗಳ, ಬಂಗಾರಪೇಟೆ, ವೆಮಗಲ್, ತಾಳಗುಂದ, ಕ್ಯಾಳನೂರು, ನರಸಾಪುರ, ವೊಕ್ಕಲೇರಿ, ಕೋಲಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳು ಬಾಧಿತವಾಗಲಿವೆ.