ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲಾರ್ ಹಗರಣ: ಬೆಂಗಳೂರು ಕೋರ್ಟಿನಿಂದ ಚಾಂಡಿಗೆ ಶುಭ ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 08 : ಕೇರಳದ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ನ್ಯಾಯಾಲಯದಿಂದ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ಶುಭ ಸುದ್ದಿ ಸಿಕ್ಕಿದೆ. ಹಿರಿಯ ಕಾಂಗ್ರೆಸ್ ನಾಯಕ ಚಾಂಡಿ ಅವರನ್ನು ಪ್ರಕರಣದಿಂಡ ಆರೋಪ ಮುಕ್ತಗೊಳಿಸಲಾಗಿದೆ.

ಸರಿತಾ, ಬಿಜುಗೆ ಮೂರು ವರ್ಷ ಜೈಲು!ಸರಿತಾ, ಬಿಜುಗೆ ಮೂರು ವರ್ಷ ಜೈಲು!

ಬೆಂಗಳೂರಿನ ಕೋರಮಂಗಲ ನಿವಾಸಿ ಉದ್ಯಮಿ ಎಂ.ಕೆ.ಕುರುವಿಲ್ಲಾಗೆ ಕೋಟ್ಯಂತರ ರುಪಾಯಿ ವಂಚಿಸಿದ ಪ್ರಕರಣದಲ್ಲಿ ಚಾಂಡಿ ಅವರು ಐದನೇ ಆರೋಪಿಯಾಗಿದ್ದರು.

Solar Scam Case : Kerala Former CM Oommen Chandy acquitted

ಏನಿದು ಪ್ರಕರಣ: ಉದ್ಯಮಿ ಎಂ.ಕೆ.ಕುರುವಿಲ್ಲಾ ಎಂಬುವರಿಂದ ಸೋಲಾರ್ ಘಟಕ ಸ್ಥಾಪನೆಗಾಗಿ 1.36 ಕೋಟಿ ರೂ. ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಆದರೆ ವ್ಯವಹಾರದಲ್ಲಿ ವ್ಯತ್ಯಯ ಉಂಟಾದ ಕಾರಣ ಹಣ ವಾಪಸ್ ನೀಡುವಂತೆ ಕುರುವಿಲ್ಲಾ ಅವರು ಕೋರ್ಟ್ ಮೊರೆ ಹೋಗಿದ್ದರು

ಮಾಜಿ ಸಿಎಂ ಚಾಂಡಿ ವಿರುದ್ಧ ತನಿಖೆಗೆ ಆದೇಶಮಾಜಿ ಸಿಎಂ ಚಾಂಡಿ ವಿರುದ್ಧ ತನಿಖೆಗೆ ಆದೇಶ

ಕಳೆದ ವರ್ಷ ಅಕ್ಟೋಬರ್ ನಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಚಾಂಡಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಘೋಷಿಸಿ 1.65 ಕೋಟಿ ರೂ. ಜೊತೆಗೆ ಶೇ.12ರಷ್ಟು ಬಡ್ಡಿ ಸೇರಿಸಿ ಹಿಂತಿರುಗಿಸಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಚಾಂಡಿ ಅವರು ಆದೇಶ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 2015ರಿಂದ ಈ ಪ್ರಕರಣದ ವಿಚಾರಣೆ ನಡೆದಿತ್ತು.

ಪ್ರಕರಣದ ಪ್ರಮುಖ ಆರೋಪಿ ಆಂಡ್ರೂಸ್ ಮೂಲಕ ಸೋಲಾರ್ ಘಟಕ ಸ್ಥಾಪನೆಗೆ ಪ್ಯಾನಲ್ ಗುತ್ತಿಗೆ ಡೀಲ್ ಕುದುರಿಸಿದ್ದರು. ನಂತರ ಸರಿತಾ ಮೂಲಕ ಚಾಂಡಿ ಕಚೇರಿಯ ಸಂಪರ್ಕ ಸಿಕ್ಕಿತ್ತು. ಚಾಂಡಿ ಖಾತೆಗೆ ಹಣ ಸಂದಾಯವಾಗಿತ್ತು.

2013ರಿಂದ ಸೋಲಾರ್ ಹಗರಣದ ತನಿಖೆಯನ್ನು ಜಸ್ಟೀಸ್ ಶಿವರಾಜನ್ ಅವರು ತನಿಖೆ ನಡೆಸಿ ವರದಿಯನ್ನು ಸಿಎಂ ಪಿಣರಾಯಿ ವಿಜಯನ್ ಗೆ ನೀಡಿದ್ದಾರೆ.

English summary
Bengaluru court acquitted former Kerala chief minister Oommen Chandy in a case related to Solar Scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X