ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದೇಶ್ವರ ಶ್ರೀಗಳಿಂದ ಪದ್ಮಶ್ರೀ ಪುರಸ್ಕಾರ ವಿನಮ್ರ ನಿರಾಕರಣೆ

|
Google Oneindia Kannada News

ಬೆಂಗಳೂರು ಜನವರಿ 27 : ಕೇಂದ್ರ ಸರ್ಕಾರ ಘೋಷಿಸಿರುವ ಪದ್ಮಶ್ರೀ ಪುರಸ್ಕಾರವನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ.

ಈ ಕುರಿತು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಪತ್ರ ಬರೆದಿರುವ ಅವರು ನಾನೊಬ್ಬ ಸಾಮಾನ್ಯ, ಆಧ್ಯಾತ್ಮದೆಡೆಗೆ ಒಲವಿರುವ ವ್ಯಕ್ತಿ, ನನಗಿಂತ ಸಾಧನೆ ಮಾಡಿದ ಅನೇಕ ಸಾಧಕರಿದ್ದು ಅವರನ್ನು ಗುರುತಿಸಿ ಪುರಸ್ಕಾರ ನೀಡಿ, ನನಗೆ ಈ ಪ್ರಶಸ್ತಿಬೇಡ ಎಂದು ತಮ್ಮ ನಿಲುವನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪದ್ಮ ಪ್ರಶಸ್ತಿ ಗೆದ್ದ ಕರ್ನಾಟಕದ ಸಾಧಕರಿವರುಪದ್ಮ ಪ್ರಶಸ್ತಿ ಗೆದ್ದ ಕರ್ನಾಟಕದ ಸಾಧಕರಿವರು

ಪ್ರವಚನ ಕಾರ್ಯಕ್ರಮ ನಿಮಿತ್ತ ಕಳೆದ 15 ದಿನಗಳಿಂದ ಕಲಬುರಗಿಯಲ್ಲಿ ವಾಸ್ತವ್ಯಹೂಡಿರುವ ಅವರು ಶುಕ್ರವಾರ ಅಲ್ಲಿಂದಲೇ ಪ್ರಧಾನಿಗೆ ಪತ್ರ ಬರೆದು ಈ ನಿಲುವು ತಿಳಿಸಿದ್ದಾರೆ. ಪತ್ರದಲ್ಲಿ ಶ್ರೀಗಳು, ದೇಶದ ಅತ್ಯುನ್ನತ ಗೌರವ ಪುರಸ್ಕಾರವಾದ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಆದರೆ, ನನಗೆ ಈ ಪುರಸ್ಕಾರ ಬೇಡ ಎಂದು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ.

Siddeshwara swamiji rejects Padmashree award

ಈ ಹಿಂದೆ ಒಲಿದು ಬಂದಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಶ್ರೀಗಳು ನಿರಾಕರಿಸಿದ್ದರು.

English summary
Siddeshwara swamiji of Vijayapura has been rejected Padmashree award and written a letter to prime minister Narendra modi citing that being Sanyasi he is not interested in receiving any awards
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X