ಕಾಂಗ್ರೆಸ್ ನಿಂದಲೇ ಸಿದ್ದರಾಮಯ್ಯನ ಗರ್ವಭಂಗ
ಬೆಂಗಳೂರು, ನವೆಂಬರ್ 21: ವಿಪಕ್ಷ ನಾಯಕ ಸಿದ್ದರಾಮಯ್ಯರ ಗರ್ವಭಂಗ ಮಾಡುವುದು ಕಾಂಗ್ರೆಸ್ ಮೂಲ ನಾಯಕರ ಪ್ರಮುಖ ಅಜೆಂಡಾ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯರ ಪಾಡು ಬೀದಿ ಪಾಡಾಗಿದೆ. ಸಿದ್ಧರಾಮಯ್ಯರ ಅಹಂಕಾರವನ್ನು ಇಳಿಸಲು ಕಾಂಗ್ರೆಸ್ ನ ಹಳೆಯ ನಾಯಕರು ಕೆಲಸ ಮಾಡ್ತಿದ್ದಾರೆ ಎಂದು ಬೆಂಗಳೂರಿನ ಉಪ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?
ಕಾಂಗ್ರೆಸ್ ನವರು ಕಾಟಾಚಾರಕ್ಕೆ ಅಭ್ಯರ್ಥಿಗಳನ್ನು ಹಾಕಿದೆ. ಸಿದ್ಧರಾಮಯ್ಯ ಕಾಂಗ್ರೆಸ್ ನಲ್ಲಿ ಒಂಟಿಸಲಗ, ಅವರು ಈಗ ಏಕಾಂಗಿಯಾಗಿದ್ದಾರೆ. ಯಾರೂ ಅವರ ಜೊತೆ ಕೈಜೋಡಿಸುತ್ತಿಲ್ಲ ಎಂದು ಟೀಕಿಸಿದರು. ಸಿದ್ದುವಿನ ಏಕಪಕ್ಷೀಯ ನಿರ್ಧಾರಗಳಿಂದ ಬೇಸತ್ತು ಮೂಲ ಕಾಂಗ್ರೆಸ್ಸಿಗರೇ ಅವರ ವಿರುದ್ಧ ಒಂದಾಗಿದ್ದಾರೆ. ಸದ್ಯದರಲ್ಲಿಯೇ ಮೂಲೆಗುಂಪಾಗಲಿದ್ದಾರೆ ಎಂದರು. ಉಪ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಗೆಲ್ಲುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಜೆಡಿಎಸ್ ಹೋಟೆಲ್ ಮುಂದಿನ ಬೋರ್ಡ್ ಇದ್ದಂತೆ
ಜೆಡಿಎಸ್ ಪಕ್ಷ ಒಂದು ರೀತಿ ಹೋಟೆಲ್ ಇದ್ದಂತೆ. ಯಾವಾಗ ಯಾರಿಗೆ ಬೆಂಬಲ ಕೊಡುತ್ತಾರೆ ಅನ್ನೋದು ಅವರಿಗೇ ಗೊತ್ತಿರುವುದಿಲ್ಲ ಎಂದು ಸಚಿವ ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು. 'ಟುಡೇಸ್ ಸ್ಪೇಶಲ್' ಅನ್ನೋತರ ಬೋರ್ಡ್ ಇರುತ್ತದೆ, ಒಂದು ದಿನ ಇಡ್ಲಿ ವಡೆ, ಇನ್ನೊಂದು ದಿನ ಖಾರಾಬಾತ್ ಅನ್ನೋ ಹಾಗೆ , ಒಮ್ಮೆ ಬಿಜೆಪಿಗೆ ಬೆಂಬಲ, ಇನ್ನೊಂದು ದುನ ಕಾಂಗ್ರೆಸ್ ಗೆ ಬೆಂಬಲ ಅಂತಾರೆ ಎಂದು ಹೀಯಾಳಿಸಿದರು.