ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗಕ್ಕೆ ಯಡಿಯೂರಪ್ಪ, ಬಾದಾಮಿಗೆ ಸಿದ್ದರಾಮಯ್ಯ ಕ್ಷೇತ್ರ ಭೇಟಿ

By Manjunatha
|
Google Oneindia Kannada News

ಬೆಂಗಳೂರು, ಜುಲೈ 17: ನಾಳೆ (ಜುಲೈ 18) ರಂದು ರಾಜ್ಯದ ಇಬ್ಬರು ಪ್ರಮುಖ ನಾಯಕರು ತಮ್ಮ-ತಮ್ಮ ಕ್ಷೇತ್ರದ ಪರ್ಯಟನೆ ಮಾಡುತ್ತಿದ್ದು, ಜನ ಸಂಪರ್ಕ ಮಾಡಲಿದ್ದಾರೆ.

ನಾಳೆ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ಬಾದಾಮಿಗೆ ತೆರಳಿ ಜನರ ಅಹವಾಲು ಕೇಳಲಿದ್ದರೆ, ಶಿವಮೊಗ್ಗಕ್ಕೆ ತೆರಳಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಜು.28ಕ್ಕೆ ಅಮಿತ್ ಶಾ ಆಗಮನ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?ಜು.28ಕ್ಕೆ ಅಮಿತ್ ಶಾ ಆಗಮನ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ?

ಪ್ರಸ್ತುತ ದೆಹಲಿಯಲ್ಲಿರುವ ಸಿದ್ದರಾಮಯ್ಯ ನಾಳೆ ಬೆಂಗಳೂರಿನಿಂದ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಬಾದಾಮಿಗೆ ಹೋಗಲಿದ್ದಾರೆ. ಚುನಾವಣೆ ಮುಗಿದ ನಂತರ ಬಾದಾಮಿಗೆ ಇದು ಅವರ ಎರಡನೇ ಭೇಟಿ.

Siddaramaiah visiting to Badami and Yeddyurappa visiting Shivamogga

ಬಾದಾಮಿ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ಕುಮಾರಸ್ವಾಮಿ ಅವರೊಂದಿಗೆ ಪತ್ರ ಸಮರ ಪ್ರಾರಂಭಿಸಿರುವ ಸಿದ್ದರಾಮಯ್ಯ ಅವರು ನಾಳೆ ನೇರವಾಗಿ ಬಾದಾಮಿಯ ಜನರನ್ನೇ ಭೇಟಿಯಾಗಿ ಅವರ ಅಹವಾಲು ಸ್ವೀಕರಿಸಲಿದ್ದಾರೆ.

ಸಂಪುಟ ವಿಸ್ತರಣೆ ಆಗುತ್ತಾ? ಪರಮೇಶ್ವರ್, ಸಿದ್ದರಾಮಯ್ಯ ಜು.18ಕ್ಕೆ ದೆಹಲಿಗೆಸಂಪುಟ ವಿಸ್ತರಣೆ ಆಗುತ್ತಾ? ಪರಮೇಶ್ವರ್, ಸಿದ್ದರಾಮಯ್ಯ ಜು.18ಕ್ಕೆ ದೆಹಲಿಗೆ

ಶಿವಮೊಗ್ಗಕ್ಕೆ ತೆರಳಲಿರುವ ಯಡಿಯೂರಪ್ಪ ಅವರು ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರೊದಗಿಸಿ, ಸುತ್ತಮುತ್ತಲಿನ ರೈತರ ಜಮೀನನ್ನು ಸದಾ ಹಸಿರಾಗಿಡುವ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ಮೊದಲಿಗೆ ಶಿವಮೊಗ್ಗದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಸಭೆ ನಡೆಸಲಿರುವ ಅವರು, ಆ ನಂತರ ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಮೂರು ಗಂಟೆಯ ನಂತರ ಹಲವು ಸ್ಥಳೀಯ ಕಾರ್ಯಕ್ರಮದಲ್ಲಿ ಭಗಿಯಾಗಲಿದ್ದಾರೆ.

English summary
Former CM Siddaramaiah visiting his constituency Badmi on July 18 where BJP's former chief minister Yeddyurappa visiting his district Shivamogga and participating in many development programs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X