ಈ ಕ್ಷಣವೇ ರಾಜೀನಾಮೆ ಕೊಡಿ: ಬಿಎಸ್ ವೈ ವಿರುದ್ಧ ಸಿದ್ದು ಆಕ್ರೋಶ
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕದ ಬಿಜೆಪಿ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಒಪ್ಪಿಕೊಂಡ ನಂತರ ಒಂದು ಕ್ಷಣ ಕೂಡ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ, ಈ ಕ್ಷಣವೇ ರಾಜೀನಾಮೆ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಜುಲೈ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಭಾರೀ ಪ್ರವಾಹದ ನಂತರ ಇದೀಗ ಪರಿಹಾರ ನೀಡುವ ವಿಷಯ ಸಾಕಷ್ಟು ಚರ್ಚೆಯಲ್ಲಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಕೇಂದ್ರದಿಂದ ಪರಿಹಾರ ಪಡೆಯುವಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ವಿಫಲವಾಗಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
"ಸನ್ಮಾನ್ಯ
ಬಿ
ಎಸ್
ಯಡಿಯೂರಪ್ಪನವರೇ,
ನಿಮ್ಮ
ಸರ್ಕಾರ
ಆರ್ಥಿಕವಾಗಿ
ದಿವಾಳಿಯಾಗಿದೆ
ಎಂದು
ಒಪ್ಪಿಕೊಂಡ
ನಂತರ
ಒಂದು
ಕ್ಷಣ
ಕೂಡಾ
ಅಧಿಕಾರದಲ್ಲಿ
ಮುಂದುವರಿಯುವ
ಅರ್ಹತೆ
ನಿಮಗಿಲ್ಲ.
ದಯವಿಟ್ಟು
ರಾಜೀನಾಮೆ
ಕೊಟ್ಟು
ಹೊರಟುಬಿಡಿ.
ನಿಮ್ಮ
ಅಸಾಮರ್ಥ್ಯಕ್ಕಾಗಿ
ರಾಜ್ಯದ
ಜನರನ್ನು
ಶಿಕ್ಷಿಸಬೇಡಿ"
ಎಂದು
ಸಿದ್ದರಾಮಯ್ಯ
ಟ್ವೀಟ್
ಮಾಡಿ,
ಯಡಿಯೂರಪ್ಪ
ಮತ್ತು
ನರೇಂದ್ರ
ಮೋದಿ
ಸರ್ಕಾರವನ್ನು
ತರಾಟೆಗೆ
ತೆಗೆದುಕೊಂಡಿದ್ದಾರೆ.
ಬರ ಪರಿಹಾರ: ಬಿಎಸ್ವೈ ಸಿಎಂ ಆಗಿದ್ದು ಮೋದಿ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕಾರಣವೇ?
ಬೆಳಗಾವಿಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು.