ಈಜಿಪುರ-ಕೇಂದ್ರೀಯ ಸದನ ಜಂಕ್ಷನ್ ಫ್ಲೈಓವರ್ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು, ಜುಲೈ 24: ಈಜಿಪುರ ರಸ್ತೆ ಒಳವರ್ತುಲ ಜಂಕ್ಷನ್ ನಿಂದ ಕೇಂದ್ರೀಯ ಸದನ ಜಂಕ್ಷನ್ ವರೆಗೆ 'ಫ್ಲೈ ಓವರ್' ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
2020 ಕ್ಕೆ ಪೂರ್ಣವಾಗಲಿದೆ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಮೇಲ್ಸೇತುವೆ
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ 'ಮೇಲು ಸೇತುವೆ' ನಿರ್ಮಾಣ ಮಾಡಲಾಗುತ್ತಿದೆ.
ಮೇಲು ಸೇತುವೆ ನಿರ್ಮಾಣದಿಂದಾಗುವ ಲಾಭ
ಈ ಮೇಲು ಸೇತುವೆ ನಿರ್ಮಾಣದಿಂದ ಇಲ್ಲಿನ ಮೂರು ವೃತ್ತಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಈಜಿಪುರ ರಸ್ತೆ ಒಳವರ್ತುಲ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಹಾಗೂ ಕೇಂದ್ರೀಯ ಸದನ ಜಂಕ್ಷನ್ ಗಳಲ್ಲಿ ಟ್ರಾಫಿಕ್ ದೊಟ್ಟ ಮಟ್ಟಕ್ಕೆ ತಗ್ಗಲಿದೆ.
ಕೋನಪ್ಪನ ಅಗ್ರಹಾರದ ಬಳಿ ಮೇಲ್ಸೇತುವೆಯಲ್ಲಿ ಬಾಯಿಬಿಟ್ಟ ಕಬ್ಬಿಣದ ಕೊಂಡಿ
ಇನ್ನು ಫ್ಲೈ ಓವರ್ ನಿರ್ಮಾಣವಾದರೆ ಪ್ರಯಾಣಿಕರು ಹೊಸೂರು ರಸ್ತೆಯಿಂದ ದೊಮ್ಮಲೂರಿಗೆ ನೇರವಾಗಿ ಮೇಲು ಸೇತುವೆ ಮೂಲಕ ಪ್ರಯಾಣಿಸಬಹುದಾಗಿದೆ.
Comments
English summary
Chief minister Siddaramaiah laid the foundation stone for an upcoming flyover between Ejipura inner road junction to Kendriya Sadana junction in Hosur Road.
Story first published: Monday, July 24, 2017, 17:29 [IST]