ಪ್ರಧಾನಿ ಮೋದಿಗೆ ಯಡಿಯೂರಪ್ಪ ಬಗ್ಗೆ ದ್ವೇಷವೇ? ಸಿದ್ದು ಪ್ರಶ್ನೆ
Recommended Video
ಬೆಂಗಳೂರು, ಅಕ್ಟೋಬರ್ 01: ಬಿಹಾರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಕೂಡಲೇ ಸ್ಪಂದಿಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೊದಿ ಅವರದು ತಾರತಮ್ಯದ ನಡೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
"ಬಿಹಾರ
ಪ್ರವಾಹದ
ಬಗ್ಗೆ
ಮಿಡಿದ
ನರೇಂದ್ರ
ಮೋದಿ
ಅವರ
52
ಇಂಚಿನ
ಎದೆ,
ಕರ್ನಾಟಕದ
ನೆರೆ
ಸಂತ್ರಸ್ತರ
ಬಗ್ಗೆ
ಕಲ್ಲುಬಂಡೆ
ಆಗಿದ್ದು
ಯಾಕೆ?
ಇದು
25
ಸಂಸದರನ್ನು
ಆಯ್ಕೆ
ಮಾಡಿ
ಕಳಿಸಿದ
ಕರ್ನಾಟಕದ
ಬಗ್ಗೆ
ತಾತ್ಸಾರವೇ?
ಇಲ್ಲ
ಬಿ
ಎಸ್
ಯಡಿಯೂರಪ್ಪ
ಅವರ
ಬಗ್ಗೆ
ದ್ವೇಷವೇ?"
ಎಂದು
ಸಿದ್ದರಾಮಯ್ಯ
ಟ್ವೀಟ್
ಮಾಡಿದ್ದಾರೆ.
ಯಡಿಯೂರಪ್ಪರನ್ನು ನೋಡಿದರೆ ಅಯ್ಯೋ ಎನಿಸುತ್ತಿದೆ: ಸಿದ್ದರಾಮಯ್ಯ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೊದಿ ಅವರು ಟ್ವೀಟ್ ಮಾಡಿ, "ಬಿಹಾರದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಳಿ ಮಾತನಾಡಿದ್ದೇನೆ. ಸಂತ್ರಸ್ತರ ನೆರವಿಗೆ ಏಜೆನ್ಸಿಗಳು ಧಾವಿಸಿವೆ. ರಾಜ್ಯಕ್ಕೆ ಯಾವೆಲ್ಲ ಸೇವೆಯ ಅಗತ್ಯವಿದೆಯೇ ಅದನ್ನು ನೀಡಲು ಕೇಂದ್ರ ಸಿದ್ಧವಿದೆ" ಎಂದಿದ್ದರು.
ಉಪ ಚುನಾವಣೆಗೆ ಹೊಸ ದಿನ: ಚುನಾವಣಾ ಆಯೋಗದ ವಿರುದ್ಧ ಎಚ್ಡಿಕೆ, ಸಿದ್ದರಾಮಯ್ಯ ಕಿಡಿ
ಕಳೆದ ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಸುರಿದ ಸತತ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಅನುದಾನ ಕೇಳಲು ತೆರಳಿದ್ದ ರಾಜ್ಯದ ನಿಯೋಗ ಬರಿಗೈಲಿ ವಾಪಸ್ಸಸಾಗಿತ್ತು. ರಾಜ್ಯದ ನಾಯಕರೇ ಖುದ್ದಾಗಿ ಹೋಗಿ ಮೋದಿ ಅವರನ್ನು ಭೇಟಿಯಾಗಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಈಗ ಬಿಹಾರದಲ್ಲಿ ಪ್ರವಾಹ ಉಂಟಾದಾಗ ಮಾತ್ರ ಸ್ವತಃ ಮೋದಿ ಅವರೇ ನಿತೀಶ್ ಕುಮಾರ್ ಅವರಿಗೆ ಫೋನಾಯಿಸಿದ್ದು ರಾಜ್ಯದ ನಾಯಕರಿಗೆ ಭಾರೀ ಬೇಸರವನ್ನುಂಟು ಮಾಡಿದೆ.