ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ, ಓವೈಸಿ ಪಕ್ಷ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ: ಸಿಎಂ

|
Google Oneindia Kannada News

ಬೆಂಗಳೂರು, ಜನವರಿ 29 : ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿಯು ಓವೈಸಿ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಓವೈಸಿ ಹಾಗೂ ಬಿಜೆಪಿ ಎರಡೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓವೈಸಿ ಹಾಗೂ ಬಿಜೆಪಿ ಒಂದಾದರೆ ಸಮಾಜದ ಗತಿಯೇನು, ಮುಸ್ಲಿಮರನ್ನು ಬಿಜೆಪಿ ಪಕ್ಷ ವಿರೋಧಿಸುತ್ತಲ್ಲವಾ ಅದು ಹೇಗೆ ಮುಸ್ಲಿಮರ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಓಟ್ ಡೈವರ್ಷನ್ ಮಾಡೀಕೆ ಈ ರೀತಿ ಮಾಡುತ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದರು.

ಓವೈಸಿ ಪಕ್ಷದ ಜತೆ ಬಿಜೆಪಿ ಗುಪ್ತ ಸಭೆ: ರಾಮಲಿಂಗಾರೆಡ್ಡಿ ಆರೋಪಓವೈಸಿ ಪಕ್ಷದ ಜತೆ ಬಿಜೆಪಿ ಗುಪ್ತ ಸಭೆ: ರಾಮಲಿಂಗಾರೆಡ್ಡಿ ಆರೋಪ

ಓವೈಸಿಯಿಂದ ರಾಜ್ಯಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ

ಓವೈಸಿಯಿಂದ ರಾಜ್ಯಕ್ಕೆ ಧಕ್ಕೆ ಮಾಡಲು ಸಾಧ್ಯವಿಲ್ಲ

ರಾಜ್ಯಕ್ಕೆ ಯಾವ ಓವೈಸಿ ಬಂದರೂ ಏನೂ ಮಾಡಲು ಸಾಧ್ಯವಿಲ್ಲ. ಕರ್ನಟಕದ ಮುಸ್ಲಿಮರು ತುಂಬಾ ಬುದ್ಧಿವಂತರು, ಬಿಜೆಪಿಯ ಇಂತಹ ತಂತ್ರಗಳನ್ನು ಅರಿತಿದ್ದಾರೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.

ಓವೈಸಿ ಜತೆಗೆ ಬೆಜೆಪಿ ಹೊಂದಾಣಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಮುಸ್ಲಿಮರು ತುಂಬಾ ಬುದ್ಧಿವಂತರು, ಬಿಜೆಪಿಯ ತಂತ್ರಗಳನ್ನು ಚೆನ್ನಾಗಿ ಅರಿತಿದ್ದಾರೆ. ನಾನು ಜೆಡಿಎಸ್ ನಲ್ಲಿದ್ದಾ ಮುಸ್ಲಿಂ ಮತಗಳನ್ನು ಪಡೆಯುವುದು ಕಷ್ಟವಾಗಿತ್ತು. ಆದರೆ ಕಾಂಗ್ರೆಸ್ ನಲ್ಲಿ ಅಂತಹ ವಾತಾವರಣವಿಲ್ಲ, ಎಲ್ಲಾ ಮುಸ್ಲಿಮರು ಕಾಂಗ್ರೆಸ್ ನ್ನು ಬೆಂಬಲಿಸಲಿದ್ದಾರೆ ಎಂದರು.

ಶಕ್ತಿ ಭವನದಲ್ಲಿ ಸಿಎಂ ಭೇಟಿ ಮಾಡಿದ ಬಂಡಾಯ ಶಾಸಕರು

ಶಕ್ತಿ ಭವನದಲ್ಲಿ ಸಿಎಂ ಭೇಟಿ ಮಾಡಿದ ಬಂಡಾಯ ಶಾಸಕರು

ಸಿಎಂ ಭೇಟಿಗೆ ಬಂದ ಜೆಡಿಎಸ್ ಬಂಡಾಯ ಶಾಸಕರು, ಜಮೀರ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸ ಮೂರ್ತಿ, ಕಾಂಗ್ರೆಸ್‌ನಿಂದ ಟಿಕೆಟ್ ನೀಡಿಕೆ ವಿಚಾರದಲ್ಲಿ ಗೊಂದಲ, ನಿಮಗೆ ಯಾರು ಹೇಳಿದ್ದು ಗೊಂದಲ ಇದೆ ಅಂತಾ, ಟಿಕೆಟ್ ವಿಚಾರ ಚರ್ಚೆ ಬೇಡ, ಅದನ್ನು ಪಕ್ಷ ವೇ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಓವೈಸಿ ಜತೆಗೆ ಬಿಜೆಪಿ ಗುಪ್ತ ಸಭೆ

ಓವೈಸಿ ಜತೆಗೆ ಬಿಜೆಪಿ ಗುಪ್ತ ಸಭೆ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಓವೈಸಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಗುಪ್ತ ಮಾತುಕತೆ ನಡೆಸಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಸೋಮವಾರ ನಗರದ ಶಕ್ತಿ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಓವೈಸಿ ಪಕ್ಷದೊಂದಿಗೆ ಮುಂಬರುವ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹೈದರಾಬಾದ್ ನಲ್ಲಿ ಗುಪ್ತ ಸಭೆ ನಡೆಸಿದೆ. ಈ ಕುರಿತು ನಮಗೆ ಖಚಿತ ಮಾಹಿತಿ ಲಭ್ಯವಾಗಿದೆ ಎಂದರು.

ಬಿಜೆಪಿಯ ನಿಜ ಬಣ್ಣ ಬಯಲು

ಬಿಜೆಪಿಯ ನಿಜ ಬಣ್ಣ ಬಯಲು

ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳ ಜತೆಗೆ ಕಾಂಗ್ರೆಸ್ ಗೆ ಸಂಪರ್ಕವಿದೆ ಎಂದು ಆರೋಪಿಸುವ ಬಿಜೆಪಿ ಇದೀಗ ಓವೈಸಿ ಮಾಡುಕತೆ ನಡೆಸುವ ಮೂಲಕ ತಮ್ಮ ನಿಜ ಬಣ್ಣವನ್ನು ಬಯಲು ಮಾಡಿಕೊಂಡಂತಾಗಿದೆ ಎಂದು ದೂರಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಸೆಳೆಯಲು ಕೆಲ ಸಂಘಟನೆಗಳ ಜತೆಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಕರ್ನಾಟಕದಲ್ಲೂ ಅದೇ ರೀತಿ ಕೆಲ ಸಂಘಟನೆಗಳೊಂದಿಗೆ ಅದರಲ್ಲೂ ಆತಂಕಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಇದರ ಬಗ್ಗೆ ನಮ್ಮ ಬಳಿ ಖಚಿತವಾದ ಆಧಾರವಿದ್ದು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

English summary
Chief minister Siddaramaiah has been accused the BJP and Owaisi doing the same job who dividing the society and country as well. He was talking to reporters in Bengaluru that the BJP had already alliance with Owaisi in Uttar Pradesh and Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X