ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲು

|
Google Oneindia Kannada News

ಬೆಂಗಳೂರು, ಮೇ 3: ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳಿಸಲು ವಿಶೇಷ ರೈಲು ಸೇವೆಯ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರದ ಮನವಿಗೆ ಭಾರತೀಯ ರೈಲ್ವೆ ಇಲಾಖೆ‌ ಗ್ರೀನ್ ಸಿಗ್ನಲ್ ನೀಡಿದೆ. ಇದರ ಫಲವಾಗಿ ಇಂದು ಬೆಂಗಳೂರು ಸೇರಿದಂತೆ ದೇಶದಲ್ಲಿ ಶ್ರಮಿಕ ಸ್ಪೆಷಲ್ ಟ್ರೈನ್ ಸಂಚಾರ ಆರಂಭವಾಗಿದೆ.

ವಿವಿಧ ರಾಜ್ಯದಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳ ನೆರವಿಗಾಗಿ ವಿಶೇಷ ರೈಲುಗಳು ಸಂಚರಿಸುತ್ತಿವೆ. ರಾಜ್ಯ ಸರ್ಕಾರಗಳ ಮನವಿಗೆ ರೈಲ್ವೆ ಓಡಿಸಲು‌ ನಿರ್ಧಾರ ಕೈಗೊಂಡಿದ್ದು, ಕೆಲವು ಷರತ್ತುಗಳೊಂದಿಗೆ ಸಂಚರಿಸಲಿವೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಲು ಎರಡು ರಾಜ್ಯಗಳ ಒಪ್ಪಿಗೆ‌‌ ಇರಬೇಕು.

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧುಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ಶ್ರಮಿಕ ಟ್ರೈನ್ ಗಳು ನಾನ್ ಸ್ಟಾಪ್ ರೈಲುಗಳಾಗಿದ್ದು..ಒಂದೇ ಸ್ಥಳದಲ್ಲಿ ನಿಲ್ಲುತ್ತವೆ. 22 ಕೋಚ್ ಗಳಿರಲಿದ್ದು, ಪ್ರತಿ ಕೋಚ್ ನಲ್ಲಿ 54 ಪ್ರಯಾಣಿಕರಿಗೆ ಪ್ರಯಾಣದ ಅವಕಾಶವಿರುತ್ತದೆ. ಯಾವುದೇ ಸ್ಟೇಷನ್ ನಡುವೆ ನಿಲುಗಡೆ ಇರುವುದಿಲ್ಲ.

ನಿಬಂಧನೆಗೆ ಬದ್ಧರಾಗಿರಬೇಕು

ನಿಬಂಧನೆಗೆ ಬದ್ಧರಾಗಿರಬೇಕು

ರೈಲಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು,ಮದ್ಯ ಸೀಟ್ ಖಾಲಿ ‌ಇರಬೇಕು, ರೈಲ್ವೆ ಸಂಚಾರಕ್ಕೂ‌ ಮುನ್ನಾ ಸ್ಕ್ರೀನಿಂಗ್ ನಡೆಸಬೇಕು. ಪ್ಯಾಸೆಂಜರ್ ಸಂಪೂರ್ಣ ವಿಳಾಸ ಹಾಗೂ ಪೋನ್ ನಂಬರ್ ಪಡೆಯಬೇಕು.

ಕೋವಿಡ್ 19 ರೋಗದ ಲಕ್ಷಣವಿದ್ದರೆ ಪ್ರಯಾಣವಿಲ್ಲ

ಕೋವಿಡ್ 19 ರೋಗದ ಲಕ್ಷಣವಿದ್ದರೆ ಪ್ರಯಾಣವಿಲ್ಲ

ಕೋವಿಡ್ 19 ರೋಗದ ಲಕ್ಷಣಗಳು ಇದ್ರೆ ಪ್ರಯಾಣಕ್ಕೆ ಅವಕಾಶ ಇಲ್ಲ ಎಂಬ ನಿಬಂಧನೆಗಳನ್ನು ಹಾಕಲಾಗಿದೆ. ಇನ್ನೂ ರೈಲ್ವೆ ಟಿಕೆಟ್ ಅನ್ನು ರೈಲ್ವೆ ‌ಇಲಾಖೆ ಪ್ರಿಂಟ್ ‌ಮಾಡಿ ರಾಜ್ಯ ಸರ್ಕಾರಕ್ಕೆ ನೀಡುತ್ತದೆ.ರಾಜ್ಯ ‌ಸರ್ಕಾರ ಪ್ಯಾಸೆಂಜರ್ ಗೆ ನೀಡಬೇಕು. ಪ್ರಯಾಣಿಕರು ಮಾಸ್ಕ್ ಧರಿಸಲೇಬೇಕು.

ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ

ಬೆಂಗಳೂರಿನಲ್ಲಿ ಹೇಗಿದೆ ವ್ಯವಸ್ಥೆ

ಬೆಂಗಳೂರಿನಲ್ಲಿ ಹೇಗಿದೆ ವ್ಯವಸ್ಥೆ

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಬಿಬಿಎಂಪಿ, ಬಿಎಂಟಿಸಿ ಮತ್ತು ರೈಲ್ವೆ ಇಲಾಖೆಯು ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ಸರಿಯಾಗಿ ತಪಾಸಣೆಯ ನಂತರ ಒಡಿಶಾಗೆ ಹಿಂತಿರುಗಲು ಅವಕಾಶ ಮಾಡಲಾಗಿದೆ.

ಎರಡು ಶ್ರಮಿಕ ರೈಲುಗಳು ಇಂದು ಪ್ರಯಾಣ

ಎರಡು ಶ್ರಮಿಕ ರೈಲುಗಳು ಇಂದು ಪ್ರಯಾಣ

ರೈಲ್ವೆ ಇಲಾಖೆಯು ಇಂದು ವಲಸೆ ಕಾರ್ಮಿಕರಿಗೆ ಬೆಂಗಳೂರಿನಿಂದ ತೆರಳಲು ತಲಾ 2 ರೈಲುಗಳನ್ನು ಪಾಟ್ನಾ ಮತ್ತು ಭುವನೇಶ್ವರ ಹಾಗೂ 1 ರೈಲನ್ನು ಹಟಿಯಾಗೆ ವ್ಯವಸ್ಥೆ ಮಾಡಿದೆ. ಬಿಎಂಟಿಸಿ, ಬಿಬಿಎಂಪಿಯಿಂದ ಟಿಕೆಟಿಂಗ್ ಪ್ರಕ್ರಿಯೆಯ ನಂತರ, ಪೋಲಿಸರು 6,000 ಪ್ರಯಾಣಿಕರನ್ನು ತಪಾಸಣೆ ನಡೆಸಿ ಚಿಕ್ಕ ಬಾಣಾವರ ಹಾಗೂ ಮಾಲೂರು ನಿಲ್ದಾಣಕ್ಕೆ 250 ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

English summary
Shramik special Train running from Chikka Banavara Station took stranded migrants their home from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X