ಬೆಂಗಳೂರು : ಪ್ರಗತಿ ಕಾಲೇಜು ಪ್ರಾಂಶುಪಾಲರ ಬಂಧನ
ಬೆಂಗಳೂರು, ಏ.2 : ಕಾಡುಗೋಡಿಯ ಪ್ರಗತಿ ಕಾಲೇಜಿನ ಹಾಸ್ಟೆಲ್ನಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿಗೆ ಸಂಬಂಧ ಪಟ್ಟಂತೆ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ಪ್ರಗತಿ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಸೋಮಸಿಂಗ್ ಅವರನ್ನು ಬಂಧಿಸಲಾಗಿತ್ತು.
ಗುರುವಾರ
ಬೆಳಗ್ಗೆ
ಕಾಡುಗೋಡಿ
ಪೊಲೀಸರು
ಕಾಲೇಜಿನ
ಪ್ರಾಂಶುಪಾಲ
ಎಸ್.ಪ್ರಶಾಂತ್
ಅವರನ್ನು
ಬಂಧಿಸಿದ್ದು,
ವಿಚಾರಣೆ
ನಡೆಸುತ್ತಿದ್ದಾರೆ.
ಮಂಗಳವಾರ
ರಾತ್ರಿ
ಪಗ್ರತಿ
ಕಾಲೇಜಿನ
ಹಾಸ್ಟೆಲ್ನಲ್ಲಿ
ನಡೆದ
ಗುಂಡಿನ
ದಾಳಿಯಲ್ಲಿ
ದ್ವಿತೀಯ
ಪಿಯುಸಿ
ವಿದ್ಯಾರ್ಥಿನಿ
ಗೌತಮಿ
ಮೃತಪಟ್ಟಿದ್ದಳು,
ಶಿರಿಷಾ
ಎಂಬ
ವಿದ್ಯಾರ್ಥಿನಿ
ಗಾಯಗೊಂಡಿದ್ದಳು.
[ದ್ವಿತೀಯ
ಪಿಯು
ವಿದ್ಯಾರ್ಥಿನಿ
ಗುಂಡಿಗೆ
ಬಲಿ]
ಕಾಲೇಜಿನ ಅಟೆಂಡರ್ ಮಹೇಶ್ ಕಾಲೇಜಿನ ಆವರಣದಲ್ಲಿರುವ ಹಾಸ್ಟೆಲ್ಗೆ ನುಗ್ಗಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಅಟೆಂಡರ್ ಮಹೇಶ್ನನ್ನು ಬುಧವಾರ ಮಧ್ಯಾಹ್ನ ಬಂಧಿಸಲಾಗಿದ್ದು, ಮಹೇಶ್ನನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.[ಗುಂಡಿನ ದಾಳಿ ಮಾಡಿದ್ದ ಮಹೇಶ್ ಬಂಧನ]
ಇಂದು ಅಂತ್ಯಕ್ರಿಯೆ : ಗುಂಡಿನ ದಾಳಿಯಲ್ಲಿ ಮೃತಪಟ್ಟ ತುಮಕೂರು ಜಿಲ್ಲೆಯ ಪಾವಗಡ ಮೂಲದ ಗೌತಮಿ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ. ಬುಧವಾರ ರಾತ್ರಿಯೇ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗಿದೆ. ಗುಂಡಿನ ದಾಳಿಗೆ ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಇಂದು ಪಾವಗಡ ಬಂದ್ಗೆ ಕರೆ ನೀಡಿವೆ.
ಗುಂಡಿನ ದಾಳಿ ನಡೆಸಿದ ಮಹೇಶ್ ಬಂಧನ ವಿಡಿಯೋ