ಕೆಂಗೇರಿ ಬಳಿ ರೌಡಿ ಶೀಟರ್ ಅರುಣ್ ಮೇಲೆ ಫೈರಿಂಗ್
ಬೆಂಗಳೂರು, ಆಗಸ್ಟ್ 21: ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕೆಂಗೇರಿ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಕೆಂಗೇರಿ ಬಳಿ ಇರುವ ವಿಶ್ವೇಶ್ವರ ಲೇಔಟ್ ಬಳಿ ಮಂಗಳವಾರ ಬೆಳಗಿನ ಜಾವ ರೌಡಿ ಶೀಟರ್ ಅರುಣ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ, ಆಗಸ್ಟ್ 15ರಂದು ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಪ್ರತಾಪ್ ಎಂಬಾತನನ್ನು ಆರೋಪಿ ಅರುಣ್ ಕೊಲೆ ಮಾಡಿದ್ದ, ಈ ಕುರಿತು ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆರೋಪಿ ಹುಡುಕಾಟಕ್ಕೆ 3 ವಿಶೇಷ ತಂಡವನ್ನು ರಚಿಸಲಾಗಿತ್ತು.
ಶಿವಮೊಗ್ಗದಲ್ಲಿ ಖತರ್ನಾಕ್ ರೌಡಿ ಸೊನಾಟಾ ಆಸೀಫ್ ಮೇಲೆ ಫೈರಿಂಗ್
ಪಿಎಸ್ ಐ ಮಲ್ಲಿಕಾರ್ಜುನ್ ತಂಡ ಮಂಗಳವಾರ ಬೆಳಗಿನ ಜಾವ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಅರುಣ್ನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ರೌಡಿ ಶೀಟರ್ ಅರುಣ್ ವಿರುದ್ಧ ಮೂರು ಕೊಲೆ ಪ್ರಕರಣಗಳ ದಾಖಲಾಗಿವೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.