ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂಗಳನ್ನು ಅವಮಾನಿಸುವವರನ್ನು ಗುಂಡಿಕ್ಕಿ ಕೊಲ್ಲಿ: ಈಶ್ವರಪ್ಪ

|
Google Oneindia Kannada News

ಬೆಂಗಳೂರು,ಜು.5: ಕಾಳಿ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್‌ನ ವಿವಾದಾತ್ಮಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರು ಹಿಂದೂಗಳನ್ನು ಅವಮಾನಿಸುವವರನ್ನು ಗಲ್ಲಿಗೇರಿಸಬೇಕು ಇಲ್ಲವೇ ಗುಂಡಿಕ್ಕಿ ಕೊಲ್ಲಬೇಕು ಎಂದು ಮಂಗಳವಾರ ಹೇಳಿದ್ದಾರೆ.

ಕಾಳಿ ದೇವಿಗೆ ಅವಮಾನ ಮಾಡಿರುವ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. ಕಾಳಿ ಮಾತೆ ನಮ್ಮೆಲ್ಲರ ಪೂಜ್ಯನೀಯ ಮತ್ತು ಶಕ್ತಿ ಮಾತೆಯೂ ಹೌದು. ಕಾಳಿ ಮಾತೆ ಭಾರತೀಯ ಸಂಸ್ಕೃತಿಯ ಪ್ರತಿನಿಧಿ. ಆದರೆ ಸಾಕ್ಷ್ಯ ಚಿತ್ರಕ್ಕಾಗಿ ವ್ಯಕ್ತಿಯೊಬ್ಬರು ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ಹಾಕಿದ್ದಾರೆ. ದೇಶಾದ್ಯಂತ ಇರುವ ಹಿಂದೂ ಜನರು ಕೋಪಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕಾಳಿ ಪೋಸ್ಟರ್‌ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್‌ ಆಗ್ರಹಕಾಳಿ ಪೋಸ್ಟರ್‌ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್‌ ಆಗ್ರಹ

ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಕೆಲವು ಟೀಕೆಗಳನ್ನು ಮಾಡಿದಾಗ, ಪ್ರಪಂಚದಾದ್ಯಂತದ ಮುಸ್ಲಿಮರು ಅದರ ವಿರುದ್ಧ ಪ್ರತಿಭಟಿಸಿದರು. ಅದೇ ರೀತಿ ಹಿಂದೂಗಳು ತಮ್ಮ ದೇವರು ಮತ್ತು ದೇವತೆಗಳನ್ನು ಅವಮಾನಿಸುವುದರ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.

shoot and kill those who insult Hindus says Eshwarappa said

ಮಣಿಮೇಕಲೈ ಅವರು ತಮ್ಮ ಸಾಕ್ಷ್ಯಚಿತ್ರ 'ಕಾಳಿ' ಯ ಪೋಸ್ಟರ್‌ಗಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಟೀಕೆಗಳಿಗೆ ಪ್ರತಿಕ್ರಿಯಿಸಿದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ತಮ್ಮ ಜೀವನವನ್ನು ಸಮರ್ಪಿಸಲು ಸಿದ್ಧದ್ದೇನೆ. ನನಗೆ ಕಳೆದುಕೊಳ್ಳಲು ಏನೂ ಇಲ್ಲ, ನಾನು ಬದುಕುವವರೆಗೂ, ನಾನು ನಂಬಿದ್ದನ್ನು ನಿರ್ಭಯವಾಗಿ ಮಾತನಾಡುವ ಧ್ವನಿಯೊಂದಿಗೆ ಬದುಕಲು ಬಯಸುತ್ತೇನೆ. ಅದಕ್ಕೆ ಬೆಲೆ ನನ್ನ ಜೀವವಾಗಿದ್ದರೆ, ಅದನ್ನು ನೀಡಲು ಸಿದ್ಧನಿದ್ದೇನೆ ಎಂದು ಮಣಿಮೇಕಲೈ ಟ್ವೀಟ್ ಮಾಡಿದ್ದಾರೆ.

shoot and kill those who insult Hindus says Eshwarappa said

ಸಾಕ್ಷ್ಯಚಿತ್ರವು ಒಂದು ಸಂಜೆ ಟೊರೊಂಟೊ ನಗರದ ಬೀದಿಗಳಲ್ಲಿ ಕಾಳಿಯು ವಿಹರಿಸುವಾಗ ನಡೆದ ಘಟನೆಗಳ ಕುರಿತಾದ ಚಿತ್ರವಾಗಿದೆ. ಅವರು ಚಲನಚಿತ್ರವನ್ನು ವೀಕ್ಷಿಸಿದರೆ, ಟೀಕಕಾರರು "ಲೀನಾ ಮಣಿಮೇಕಲೈಯನ್ನು ಬಂಧಿಸಿ" ಬದಲಿಗೆ "ಲವ್ ಯು ಲೀನಾ ಮಣಿಮೇಕಲೈ" ಎಂಬ ಹ್ಯಾಶ್‌ಟ್ಯಾಗ್ ಅನ್ನು ಹಾಕುತ್ತಾರೆ" ಎಂದು ಅವರು ಉತ್ತರದಲ್ಲಿ ಬರೆದಿದ್ದಾರೆ.

ಏತನ್ಮಧ್ಯೆ, ಬಿಜೆಪಿ ನಾಯಕ ಶಿವಂ ಛಾಬ್ರಾ ಅವರು ತಮ್ಮ ಸಾಕ್ಷ್ಯಚಿತ್ರ 'ಕಾಳಿ' ಯ ಪೋಸ್ಟರ್ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಮಣಿಮೇಕಲೈ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ವಕೀಲರಾದ ವಿನೀತ್ ಜಿಂದಾಲ್ ಕೂಡ ಲೀನಾ ವಿರುದ್ಧ ದೂರು ದಾಖಲಿಸಿದ್ದರು ಮತ್ತು ಸಾಕ್ಷ್ಯಚಿತ್ರದ ಆಕ್ಷೇಪಾರ್ಹ ಪೋಸ್ಟರ್ ಮತ್ತು ಕ್ಲಿಪ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

Recommended Video

ಆಧಾರ್ ಕಾರ್ಡ್ ನಿಂದ 2 ವರ್ಷಗಳಾದ್ಮೇಲೆ ಹೆತ್ತವರನ್ನು ಸೇರಿದ ಯುವತಿಯ ಕಥೆ ಹೇಳಿದ PM ಮೋದಿ | OneIndia Kannada

English summary
Regarding the controversy surrounding the controversial poster of the Kali documentary, BJP leader K.S. Eshwarappa said on Tuesday that those who insult Hindus should be hanged or shot dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X