ಶಿವಸೇನಾ ಅಭ್ಯರ್ಥಿಗಳ ಪಟ್ಟಿ ಪ್ರಕಟ: 19 ಕ್ಷೇತ್ರಗಳಲ್ಲಿ ಸ್ಪರ್ಧೆ
ಬೆಂಗಳೂರು, ಏಪ್ರಿಲ್ 14: ಮಹಾರಾಷ್ಟ್ರದ ಶಿವಸೇನಾ ಪಕ್ಷ ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಆದರೆ ಅಚ್ಚರಿ ಎಂದರೆ, ಶಿವಸೇನಾ ಪಕ್ಷದಿಂದ ಸ್ಪರ್ಧಿಸುವುದಾಗಿ ಹೇಳಿದ್ದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರ ಹೆಸರು ಪಟ್ಟಿಯಲ್ಲಿ ಕಣ್ಮರೆಯಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಶಿವಸೇನಾ ರಾಜ್ಯ ಘಟಕ ಶನಿವಾರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಇನ್ನಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಪಕ್ಷ ತಿಳಿಸಿದೆ.
ಅಭ್ಯರ್ಥಿಗಳ ವಿವರ ಇಂತಿದೆ: ಕಲಘಟಗಿ-ಈರಣ್ಣ ಕಾಳೆ, ಧಾರವಾಡ ಶಹರ-ಈಶ್ವರಗೌಡ ಪಾಟೀಲ್, ನರಗುಂದ- ದಾನು ದಾನಪ್ಪಗೌಡರ, ಹಾಸನ-ಹೇಮಂತ ಜಾನಕೆರೆ, ಶೃಂಗೇರಿ-ಮಹೇಶಕುಮಾರ್ ಕೊಪ್ಪ, ಉಡುಪಿ-ಮಧುಕರ ಮುದರಡ್ಡಿ, ಮಂಗಳೂರು-ಆನಂದ ಶೆಟ್ಟಿ ಅಡ್ಡಿಯಾರ, ಹೆಬ್ಬಾಳ-ಟಿ.ಜಯಕುಮಾರ, ತಿಪಟೂರು- ಸಂತೋಷಕುಮಾರ ಬೈರಟ್ಟಿ, ಕನಕಗಿರಿ- ಕೆ.ಬಾಲಪ್ಪ, ಜಮಖಂಡಿ- ವಾಸುದೇವ ಪಾರಸ್, ಯಾದಗಿರಿ-ವಿಜಯಕುಮಾರ ಪಾಟೀಲ್, ಸುರಪುರ(ಎಸ್ಟಿ ಮೀಸಲು)-ರಾಜಾ ಪಿಡ್ಡನಾಯಕ, ರಾಯಚೂರು-ರಾಜಾಚಂದ್ರ ರಾಮನಗೌಡರ, ಶಿರಸಿ-ಆಕಾಶ, ಸವದತ್ತಿ-ಜಯಶಂಕರ ವಣ್ಣೂರ, ಕುಡಚಿ- ತಾವರ್ಸಿಂಗ್ ಠಾಕೂರ್, ಹುಕ್ಕೇರಿ-ಸುಭಾಸಬಾಮು ಕಾಸರಕರ್, ಭಾಲ್ಕಿ- ವೆಂಕಟರಾವ್ ಬಿರಾದಾರ್ ಸ್ಪರ್ಧಿಸಲಿದ್ದಾರೆ.