ಕೊಡಗಿನ ಶಾಂತಿ ಅಪ್ಪಣ್ಣ ಕಥಾಸಂಕಲನಕ್ಕೆ ಛಂದ ಬಹುಮಾನ
ಬೆಂಗಳೂರು, ಡಿಸೆಂಬರ್ 14 : 2015ನೇ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀಮತಿ ಶಾಂತಿ ಕೆ ಅಪ್ಪಣ್ಣ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ.
ಮೂಲತಃ ಕೊಡಗಿನವರಾದ ಶಾಂತಿ, ಸದ್ಯಕ್ಕೆ ಚೆನ್ನೈನಲ್ಲಿ ಉದ್ಯೋಗ ಮಾಡುತ್ತಿದ್ದು, ತಮ್ಮ ಪತಿ ಬಾಲಚಂದ್ರ ಅವರೊಂದಿಗೆ ನೆಲೆಸಿದ್ದಾರೆ. ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಮಾಡಿದ್ದಾರೆ.
ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಸುಮಾರು 56 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಸುಮಂಗಲಾ, ನಾಗರಾಜ ವಸ್ತಾರೆ, ಶ್ರೀಕಾಂತ ಉಡುಪ ಮತ್ತು ನಾನು (ವಸುಧೇಂದ್ರ) ಮಾಡಿದ್ದೆವು. ಭಾಗವಹಿಸಿದ ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ. [ವಿಶೇಷ ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್]
ಛಂದ ಪುಸ್ತಕವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಇಪ್ಪತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಪರ್ಕಿಸಿ
ವಸುಧೇಂದ್ರ
(ಛಂದ
ಪುಸ್ತಕ)
ಐ-004,
ಮಂತ್ರಿ
ಪ್ಯಾರಡೈಸ್
ಬನ್ನೇರುಘಟ್ಟ
ರಸ್ತೆ
ಬೆಂಗಳೂರೂ
-
560076
ದೂ.
98444
22782
Comments
English summary
Shanthi Appanna's short story collection has won Chanda Book award, instituted by Chanda book publication by Kannada write Vasudhendra, Bengaluru. The award will be presented on February 14, on Valentine's Day.