ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಸರಣಿ ಸಾವು
ಬೆಂಗಳೂರು, ಜನವರಿ 30: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದ 18 ದಿನಗಳಲ್ಲಿ 5 ಕೈದಿಗಳು ಮೃತಪಟ್ಟಿದ್ದಾರೆ.
Recommended Video
ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಗಳು ಅನಾರೋಗ್ಯದಿಂದ ಬಳಲುತ್ತಿದ್ದರು.
ಕೈದಿಗಳ ಮಾನಸಿಕ ಖಿನ್ನತೆ ಪರಿಹಾರಕ್ಕೆ ಪರಪ್ಪನ ಅಗ್ರಹಾರದಲ್ಲಿ ಹೊಸ ವ್ಯವಸ್ಥೆ
ಈ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಕೈದಿಗಳಿಗೆ ಜೈಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯೋಪಾಚಾರ ನೀಡಿದ ಅಧಿಕಾರಿಗಳು , ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಕೈದಿಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಯಿತು. ಕೆಂಚಮ್ಮ ಮತ್ತು ಕಲ್ಲಪ್ಪ ಅವರು 75 ವರ್ಷ ವಯಸ್ಸಿನವರಾಗಿದ್ದು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯೂ ಕೂಡ ಅವರಿಗಿತ್ತು.
ಇನ್ನುಳಿದಂತೆ ವೀರೇಶ್ ಮತ್ತು ಮೊಹಮ್ಮದ್ ರಂಜಾನ್ ಸಹ ಮಧುಮೇಹ ಕಾಯಿಲೆಗೆ ತುತ್ತಾಗಿದ್ದರು. ಹಲವು ವರ್ಷಗಳಿಂದ ಅಬ್ದುಲ್ ಹಮೀದ್ ಅವರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು.
ಕಾಯಿಲೆಗಳಿಂದ ಬಳಲುತ್ತಿದ್ದ ಕೈದಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೇರೆ ಕಾರಾಗೃಹಗಳಿಂದ ವರ್ಗಾವಣೆಯಾಗಿ ಬಂದಿದ್ದವರು ಎಂದು ಕಾರಾಗೃಹದ ಮುಖ್ಯ ಅಧೀಕ್ಷರು ತಿಳಿಸಿದ್ದಾರೆ.
-ವೀರೇಶ್-ದರೋಡೆ-ವಿಜಯಪುರ-ಜ.11
-ಮಹಮ್ಮದ್
ರಂಜಾನ್-ದರೋಡೆ-ರಾಮನಗರ-ಜ.22
-ಅಬ್ದುಲ್
ಹಮೀದ್-ಕೊಲೆ-ವಿಜಯಪುರ-ಜ.28
-ಕಲ್ಲಪ್ಪ-ಕೊಲೆ
ಯತ್ನ-ವಿಜಯಪುರ-ಜ.25
-ಕೆಂಚಮ್ಮ-ಕೊಲೆ-ಚಿಕ್ಕಮಗಳೂರು-ಜ.27