ಓಲಾ, ಊಬರ್ ಕ್ಯಾಬ್ಗಳಿಗಾಗಿಯೇ ಪ್ರತ್ಯೇಕ ಪಾರ್ಕಿಂಗ್ ಬೇಕು
ಬೆಂಗಳೂರು, ಜುಲೈ 5: ನಗರದಲ್ಲಿ ಓಲಾ, ಊಬರ್ ಕ್ಯಾಬ್ಗಳ ಬಳಕೆದಾರರು ಶೇ.90ರಷ್ಟಿದ್ದಾರೆ. ಈ ಕ್ಯಾಬ್ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿಕೊಂಡಿರುತ್ತಾರೆ. ಹಾಗಾಗಿ ಪ್ರತ್ಯೇಕ ನಿಲುಗಡೆ ಬೇಕು ಎಂದು ಸಂಚಾರ ಪೊಲೀಸರು ಒತ್ತಾಯಿಸಿದ್ದಾರೆ.
ಪೊಲೀಸ್ ಅಸಿಸ್ಟೆಂಟ್ ಕಮಿನರ್ ಓಲಾ ಹಾಗೂ ಊಬರ್ಗೆ ಸಂಬಂಧಪಟ್ಟವರನ್ನು ಭೇಟಿಯಾದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ.
ಕೇಂದ್ರ ಕಾನೂನುಬದ್ಧಗೊಳಿಸದರೆ ಮಾತ್ರ ಕಾರು ಪೂಲಿಂಗ್ಗೆ ಅವಕಾಶ ಎಂದ ರಾಜ್ಯ
ಕರ್ನಾಟಕ ಸಾರಿಗೆ ಇಲಾಖೆಯು ಓಲಾ, ಊಬರ್ ಕ್ಯಾಬ್ನ ಶೇರ್ ಸೇವೆಯನ್ನು ನಿಷೇಧಿಸುವಂತೆ ನಿರ್ಧಾರ ತೆಗೆದುಕೊಂಡ ಬಳಿಕ ಈ ಸಭೆ ನಡೆದಿದೆ.
ಓಲಾ, ಊಬರ್ಗೆ ಪ್ರತ್ಯೇಕ ನಿಲುಗಡೆ ಕಲ್ಪಿಸಿಕೊಡಿ ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು.
ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಟ್ಸ್, ಕೋರಮಂಗಲ, ಜಯನಗರ ಇಂತಹ ಪ್ರದೇಶಗಳಲ್ಲಿ ನಿಲುಗಡೆ ಬೇಕಾಗಿದೆ. ಪ್ರಯಾಣಿಕರ ಭದ್ರತೆ ಕಡೆಗೂ ಒತ್ತು ನೀಡಬೇಕಾಗುತ್ತದೆ. ಪಾರ್ಕಿಂಗ್ ಪ್ರದೇಶ ನೀಡುವುದರಿಂದ ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ. ಎಲ್ಲೆಂದರಲ್ಲಿ ಕ್ಯಾಬುಗಳನ್ನು ನಿಲ್ಲಿಸುವ ಪರಿಸ್ಥಿತಿಯೂ ಬರುವುದಿಲ್ಲ.
ನಾವು ವಾಹನಗಳ ದಟ್ಟಣೆ ಕಡಿಮೆ ಮಾಡುವ ಹಾಗೂ ಪ್ರಯಾಣಿಕರಿಗೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಶೇರ್ ಸೇವೆ ಆರಂಭಿಸಿದ್ದೆವು. ಓಲಾ ಶೇರ್ ಹಾಗೂ ಓಲಾ ಬೈಕ್ಗಳು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತಿದ್ದವು.