ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ
ಬೆಂಗಳೂರು, ಅಕ್ಟೋಬರ್ 28: "ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸುವುದಕ್ಕೆ ಆಗದ ಬೇಸರದಿಂದ ಆರೆಸ್ಸೆಸ್ ನ ವ್ಯಕ್ತಿಯೊಬ್ಬರು ಒಂದು ಹೋಲಿಕೆ ಮಾಡಿ ಹೇಳಿದ್ದರು. ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ ನರೇಂದ್ರ ಮೋದಿ. ನೀವು ಬರೀ ಕೈನಿಂದ ಅದನ್ನು ಸರಿಸುವುದಕ್ಕೆ ಆಗಲ್ಲ ಮತ್ತು ಚಪ್ಪಲಿಯಿಂದ ಹೊಡೆಯಲು ಕೂಡ ಸಾಧ್ಯವಿಲ್ಲ" ಎಂದು ಸಂಸದ ಶಶಿ ತರೂರ್ ಇಲ್ಲಿ ಭಾನುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಬಗ್ಗೆ ತಾವು ಬರೆದ ಪುಸ್ತಕದ ಬಗೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್, ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ಆರೆಸ್ಸೆಸ್ ನ ಹಲವರಿಗೆ ಮೋದಿ ನಡೆ ಇಷ್ಟವಿಲ್ಲ. ಆದರೆ ಅವರನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಿದೆ. ಈ ಬಗ್ಗೆ ಆ ಸಂಘಟನೆಯವರೇ ಹೇಳಿಕೊಂಡಿದ್ದಾರೆ ಎಂದಿದ್ದಾರೆ.
ಮೋದಿ ಬಗ್ಗೆ ಶಶಿ ತರೂರ್ ಪುಸ್ತಕ, ಇಂಗ್ಲೀಷ್ ಕಠಿಣ ಪದ ಟ್ವೀಟ್
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಈ ಹೇಳಿಕೆ ಬಂದ ಕೆಲ ಗಂಟೆಗಳಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ. "ರಾಹುಲ್ ಗಾಂಧಿಯವರೇ ನಿಮ್ಮನ್ನು ಶಿವಭಕ್ತ ಅಂತ ಕರೆದುಕೊಳ್ತೀರಿ. ಮಹಾದೇವನಿಗೆ ಮಾಡಿದ ಈ ಅವಮಾನಕ್ಕೆ ನಿಮ್ಮ ಪ್ರತಿಕ್ರಿಯೆ ನೀಡಿ" ಎಂದಿದ್ದಾರೆ.
#WATCH Shashi Tharoor in Bengaluru, says, "There's an extraordinarily striking metaphor expressed by an unnamed RSS source to a journalist, that, "Modi is like a scorpion sitting on a Shivling, you can't remove him with your hand & you cannot hit it with a chappal either."(27.10) pic.twitter.com/E6At7WrCG5
— ANI (@ANI) October 28, 2018
ನರೇಂದ್ರ ಮೋದಿಗೆ ಮುಸ್ಲಿಮರನ್ನು ಕಂಡರಾಗದು: ಶಶಿ ತರೂರ್
ಕಳೆದ ತಿಂಗಳು ಶಶಿ ತರೂರ್ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದ ಸಂವಿಧಾನವನ್ನು ಹರಿದುಹಾಕಿ, ಹೊಸದು ಬರೆದು ಬಿಡುತ್ತಾರೆ ಎಂದು ಆರೋಪಿಸಿದ್ದರು.