ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಈರುಳ್ಳಿ ಚೀಲದಲ್ಲಿ ಬಟಾಣಿಯಂತೆ ಸಿಕ್ಕಿದ್ದು 4.12 ಕೋಟಿ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಜನವರಿ 31: ಕೇರಳ ಮೂಲದ ಮೂವರು ವ್ಯಕ್ತಿಗಳ ಚಲನ-ವಲನ ಅನುಮಾನಾಸ್ಪದವಾಗಿದೆ ಎಂಬ ದೂರು ಬಂದ ಕಾರಣಕ್ಕೆ ಬೆಂಗಳೂರು ಪೊಲೀಸರು ದಾಳಿ ನಡೆಸಿದಾಗ ಆಲೂಗಡ್ಡೆ, ಈರುಳ್ಳಿ ಮಧ್ಯೆ 4.12 ಕೋಟಿ ರುಪಾಯಿಯನ್ನು ಪತ್ತೆ ಹಚ್ಚಿದ್ದಾರೆ. ಮೊಹ್ಮದ್ ಅಫ್ಜಲ್, ಅಬ್ದುಲ್ ನಾಸರ್ ಮತ್ತು ಶಂಶುದ್ದೀನ್ ಬಂಧಿತರು.

ಈ ಮೂವರು ಕೇರಳ ಮೂಲದವರು. ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಮಿನಿ ಲಾರಿಯಲ್ಲಿ ಅಕ್ರಮವಾಗಿ ಹೊಸ ನೋಟುಗಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಬಲೆಗೆ ಕೆಡವಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಸತಿ ಕಟ್ಟಡದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.[ಜೆಟ್ಏರ್ ವೇಸ್ ಟಾಯ್ಲೆಟ್ ನಲ್ಲಿ ಚಿನ್ನದ ಗಂಟು..!]

Rs 4.12 crore stuffed in veggie bags, 3 held in Bengaluru

ಅದನ್ನು ಅನುಸರಿಸಿ ಸೋಮವಾರ ದಾಳಿ ನಡೆಸಿದಾಗ 35 ಚೀಲ ಈರುಳ್ಳಿ ಹಾಗೂ ಹತ್ತು ಚೀಲ ಆಲೂಗಡ್ಡೆ ಮಧ್ಯೆ 4,12,78,300 ರುಪಾಯಿ ಸಿಕ್ಕಿದೆ. ಎಲ್ಲವೂ ಹೊಸ ನೋಟುಗಳಾಗಿದ್ದವು. ಈ ರೀತಿ ತರಕಾರಿ ಮೂಟೆಯಲ್ಲಿ ಹಣ ಸಾಗಿಸಲು ಮುಂದಾಗಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನಷ್ಟು ವಿಚಾರಣೆ ನಡೆಸಿದಾಗ, ಈ ಮೂವರ ಬಳಿ ಯಾವುದೇ ದಾಖಲೆ ಹಾಗೂ ಸಾಕ್ಷ್ಯ ಇರಲಿಲ್ಲ. ತರಕಾರಿ ಸಾಗಿಸುವ ಸೋಗಿನಲ್ಲಿ ಲೆಕ್ಕಕ್ಕೆ ಸಿಗದ ಹಣವನ್ನು ಕೇರಳಕ್ಕೆ ಒಯ್ಯುವವರಿದ್ದರು. ಈ ಸಂಬಂಧ ದೂರು ದಾಖಲಾಗಿದ್ದು, ಈ ಹಣ ಯಾರಿಗೆ ಸೇರಿದ್ದು, ಕೇರಳದಲ್ಲಿ ಯಾರಿಗೆ ಈ ಹಣ ತಲುಪಿಸಲು ಯೋಜನೆ ಹಾಕಿಕೊಂಡಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಒನ್ಇಂಡಿಯಾ ನ್ಯೂಸ್

English summary
Tracking suspicious activities of a Kerala origin trio led the city crime branch police in Bengaluru to discover Rs 4.12 crore stashed away with onions and potatoes. Mohamed Afzal, Abdul Naser and Shamshuddin arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X