ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಆರ್ ನಗರ ಮತದಾರರಿಗೆ ಕೊರೊನಾ ವೈರಸ್ ಭಯ?

|
Google Oneindia Kannada News

ಬೆಂಗಳೂರು, ನ. 03: ಅತ್ತೆಯ ಬೆಂಬಲ ಸಿಗುತ್ತಲೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಇಡೀ ಆರ್ ಆರ್ ನಗರ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಇಂದು ಮತದಾನ ನಡೆಯುತ್ತಿರುವ ಮತ ಕೇಂದ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಆರ್ ಆರ್ ನಗರದ ಪ್ರತಿ ವಾರ್ಡ್‌ಗಳಿಗೂ ಕುಸುಮಾ ಅವರು ಭೇಟಿ ಕೊಡುತ್ತಿದ್ದಾರೆ. ನಿನ್ನೆಯಷ್ಟೇ ಸೊಸೆಯ ಕಣ್ಣೀರಿಗೆ ಕರುಗಿದ ದಿ. ಐಎಎಸ್ ಅಧಿಕಾರಿ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು ಸೊಸೆ ಕುಸುಮಾ ಅವರ ಪರವಾಗಿ ಮಾತನಾಡಿದ್ದರು.

ಕೆಲ ಹೊತ್ತಿನ ಹಿಂದೆ ಆರ್ ಆರ್ ನಗರದ ಲಗ್ಗೆರೆ ವಾರ್ಡ್‌ನ ಮತದಾನ ಕೇಂದ್ರಗಳಿಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಕುಸುಮಾ ಅವರು ಮಾತನಾಡಿದ್ದಾರೆ.

ಬೆಳಿಗ್ಗೆಯಿಂದ ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡುತ್ತಿದ್ದೇನೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಮತದಾನ ಮಾಡಬೇಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಹೇಳಿಕೆ ನೀಡಿದ್ದಾರೆ.

Rr Nagar Congress Candidate Kusuma H Visiting Polling Booths

ಮತದಾರರಲ್ಲಿ ನಾನು ಒಂದು ವುತಂಯಿತನ್ನು ಮಾಡಿಕೊಳ್ಳುತ್ತೇನೆ, ದಯವಿಟ್ಟು ನಿಮ್ಮ ಮತದಾನದ ಹಕ್ಕನ್ನು ಉಪಯೋಗಿಸಿಕೊಳ್ಳಿ. ಬೆಳಿಗ್ಗೆ ನಾನು ಮತ ಹಾಕಿ ಅಂತ ಎಲ್ಲೂ ಕೇಳಿಕೊಂಡಿಲ್ಲ. ಗೆಲ್ಲುವ ವಿಶ್ವಾಸ ಯಾವಾಗಲೂ ಇದ್ದೇ ಇದೆ. ಕೊರೊನಾ ವೈರಸ್ ಭಯದಿಂದ ಕೆಲವರು ಬಂದು ಮತ ಹಾಕಿಲ್ಲ. ಸಂಜೆ ಆರು ಗಂಟೆಯ ವರೆಗೂ ಕಾಲಾವಕಾಶವಿದೆ. ಚುನಾವಣಾ ಆಯೋಗ ಸುರಕ್ಷಿತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಿದೆ. ದಯವಿಟ್ಟು ಬಂದು ನಿಮ್ಮ ಅಧಿಕಾರ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

Recommended Video

RR Nagar ನಲ್ಲಿ ಗೆದ್ದೇ ಗೆಲ್ತೀನಿ ಅಂದ್ರು H Kusuma | Oneindia Kannada

ಎಲ್ಲಾ ಮತದಾರರೂ ಬಂದು ಮತದಾನದ ಹಕ್ಕನ್ನು ಉಪಯೋಗಿಸಿಕೊಳ್ಳಿ ಎಂದು ಕುಸುಮಾ ಅವರು ಮನವಿ ಮಾಡಿದ್ದಾರೆ.

English summary
RR Nagar congress canidate Kusuma H visiting polling booths. And she requsting RR Nagara voters do come and vote. And aslo Kusuma clarifeid that, i am not campaigning today, but voters should use their right she said. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X