ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್ ನನಗೆ ಬಾಲ್ಯ ಸ್ನೇಹಿತರು: ಬಿಜೆಪಿ ಅಭ್ಯರ್ಥಿ ಮುನಿರತ್ನ!

|
Google Oneindia Kannada News

ಬೆಂಗಳೂರು, ಅ. 14: ನನಗೆ ನನ್ನ ಮನೆಗೆ ಬಂದಷ್ಟು ಖುಷಿಯಾಗುತ್ತಿದೆ. ಇಲ್ಲಿರುವ ಒಗ್ಗಟ್ಟು ನನಗೆ ಹಿಂದಿನ ಚುನಾವಣೆಗಳಲ್ಲಿ ಕಾಣಿಸಿರಲಿಲ್ಲ. ಈ ಚುನಾವಣೆ ಅಭಿವೃದ್ದಿಪರವಾದ ಚುನಾವಣೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮದೇ ಪಕ್ಷವಿದೆ. ಅಭಿವೃದ್ದಿ ಕೆಲಸಗಳನ್ನು ಮಾಡುವವರು ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಜನ ನನ್ನ ಕೈ ಬಿಡೋದಿಲ್ಲ ಎಂದು ಆರ್‌ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಹೇಳಿಕೆ ಕೊಟ್ಟಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟು ಬಂದಾಗ ಎಲ್ಲ ಕಾರ್ಪೋರೇಟರ್ ಗಳು ನನ್ನ ಜತೆ ಗಟ್ಟಿಯಾಗಿ ನಿಂತರು. ಹಾಗಾಗಿ ಅವರ ಬೆಂಬಲಿಗರು ಅವರ ಮೇಲೆ ಅಭಿಮಾನ ಇರೋದು ಸಹಜ. ಆದರೆ ಈ ಪಕ್ಷ ಒಂದು ಮನೆ ಇದ್ದಂತೆ. ಕೂತು ಮಾತನಾಡೋಣ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆ ಹರಿಸಿಕೊಳ್ಳೋಣ ಎಂದರು.

Rr Nagar Bjp Candidate Munirats Statement That He Will Win By One Lakh Votes

Recommended Video

Sriramulu ಎರಡು ವರುಷ ಇಂದ ಕೇಳ್ತಿದಿನಿ | Oneindia Kannada

ಕುಮಾರಸ್ವಾಮಿ ಹಾಗು ನನ್ನ ನಡುವೆ ಚಿತ್ರ ರಂಗದ ನಂಟು ಸ್ನೇಹ ಇದೆ. ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್ ನನಗೆ ಬಾಲ್ಯ ಸ್ನೇಹಿತರು 22ನೇ ವಯಸ್ಸಿನಿಂದ ನನಗೆ ಡಿ.ಕೆ. ಶಿವಕುಮಾರ್ ಸ್ನೇಹಿತರು. ಸ್ನೇಹ ವ್ಯವಹಾರಗಳೇ ಬೇರ ಚುನಾವಣೆಯೇ ಬೇರೆ. ಜ್ಯೋತಿಷಿಗಳ ಮಾತು ಕೇಳಿ ಹೆಣ್ಣು ಮಗಳನ್ನು ನನ್ನ ವಿರುದ್ದ ನಿಲ್ಲಿಸಿದ್ದಾರೆ. ಕುಸುಮಾ ಅವರಿಗೆ ಇದು ಮೊದಲ ಚುನಾವಣೆ ರಾಜಕೀಯದ ಅನುಭವ ಇಲ್ಲ. ನನಗೂ ನನ್ನ ಜ್ಯೋತಿಷಿಗಳು ಹೇಳಿದ್ದಾರೆ ನೀನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀಯಾ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಮುನಿರತ್ನ ಅವರು ಹೇಳಿದರು.

English summary
RR Nagar BJP candidate Munirat's statement that he will win by one lakh votes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X