'ಕೆಜಿಎಫ್ 2' ಚಿತ್ರಕ್ಕೆ ಮತ್ತೆ ವಿಘ್ನ: ತಂಗಂ ತಾಯಿಯಿಂದ ದಾವೆ
ಬೆಂಗಳೂರು, ಸೆಪ್ಟೆಂಬರ್ 29: ಬಹುನಿರೀಕ್ಷಿತ ಕೆಜಿಎಫ್ 2 ಸಿನೆಮಾಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ರೌಡಿ ತಂಗಂ ತಾಯಿ ಕೆಜಿಎಫ್ 2 ಸಿನಿಮಾ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
'ತಮ್ಮ ಮಗ ರೌಡಿ ತಂಗಂ ಕುರಿತು ಉತ್ತಮವಾಗಿ ತೋರಿಸುತ್ತೇವೆಂದು ಸಿನಿಮಾದವರು ಹೇಳಿದ್ದರು, ಆದರೆ ಕೆಜಿಎಫ್ ಮೊದಲ ಚಿತ್ರದಲ್ಲಿ ಸಿನಿಮಾದಲ್ಲಿ ಆತನನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ' ಎಂದು ರೌಡಿ ತಂಗಂ ತಾಯಿ ಪೌಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಕೆಜಿಎಫ್ 2 ಚಿತ್ರಕ್ಕೆ ನಿರಾಳ ನೀಡಿದ ಹೈಕೋರ್ಟ್ ಆದೇಶ
ಎರಡನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಬಿಜಿಎಂಎಲ್ ಕಂಪೆನಿಗೆ ನ್ಯಾಯಾಲಯವು ನೊಟೀಸ್ ನೀಡಿದೆ.
ಈ ಹಿಂದೆ 'ಕೋಲಾರ' ಎಂಬ ಚಿತ್ರದ ಮೇಲೆಯೂ ರೌಡಿ ತಂಗಂ ತಾಯಿ ದಾವೆ ಹೂಡಿದ್ದರು. 'ಕೋಲಾರ' ಚಿತ್ರದ ತಂಡವು ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಹೇಳಿ ಕೊನೆಗೆ ನಾಲ್ಕು ಲಕ್ಷ ಹಣ ಮಾತ್ರ ನೀಡಿದ್ದರು ಎಂದು ತಂಗಂ ತಾಯಿ ಪೌಳಿ ಆರೋಪಿಸಿದ್ದರು.
ಕೆಜಿಎಫ್ 2 ವಿರುದ್ಧ ಕೆಲವು ದಿನಗಳ ಹಿಂದಷ್ಟೆ ಪ್ರಕರಣವೊಂದು ದಾಖಲಾಗಿ, ಚಿತ್ರತಂಡವು ಕೆಜಿಎಫ್ನ ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣ ಮಾಡದಂತೆ ತಡೆಯಲಾಗಿತ್ತು. ಆದರೆ ನಂತರ ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿತು.
ಲೆವೆಲ್ಲೆ ಯಾರು? ಅವರಿಗೂ ಕೆಜಿಎಫ್ಗೂ ಎಲ್ಲಿಂದೆಲ್ಲಿಯ ಸಂಬಂಧ?
ಕೆಜಿಎಫ್ ಚಿತ್ರ ಸರಣಿಯನ್ನು ಕೆಜಿಎಫ್ನ ಕುಖ್ಯಾತ ರೌಡಿ ತಂಗಂ ಜೀವನ ಸಂಬಂಧಿಸಿದ ಕತೆ ಇದೆ ಎನ್ನಲಾಗಿದೆ. 'ಕೋಲಾರ' ಚಿತ್ರವೂ ಸಹ ರೌಡಿ ತಂಗಂ ಬದುಕನ್ನೇ ಆಧಾರವಾಗಿಸಿಕೊಂಡು ಮಾಡಿದ್ದ ಸಿನಿಮಾವಾಗಿತ್ತು.