ಸಾರಿಗೆ ನಿಗಮಗಳಿಗೆ ತೆರಿಗೆ ವಿನಾಯಿತಿ: ಎಚ್ಎಂ ರೇವಣ್ಣ ಸಿಎಂಗೆ ಮನವಿ
ಬೆಂಗಳೂರು, ಫೆಬ್ರವರಿ 03 :ಕೆಎಸ್ಆರ್ ಟಿಸಿ, ಬಿಎಂಟಿಸಿಗೆ ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.
ಸಾರಿಗೆ ನಿಗಮಗಳು ನಷ್ಟದಲ್ಲಿ ಇರುವುದರಿಂದ ಮೋಟಾರು ವಾಹನ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.
ಬಿಎಂಟಿಸಿ: ಗುಂಪಾಗಿ ಟಿಕೇಟ್ ಖರೀದಿಸಿದರೆ ಶೇ.15 ರಷ್ಟು ರಿಯಾಯಿತಿ!
ರೈತ ಸಾರಥಿ ವಿಸ್ತರಣೆ: ಚಾಲನಾ ಪರವಾನಗಿ ಹೊಂದಿರದೆ ಇರುವ ಟ್ರ್ಯಾಕ್ಟರ್ ಚಾಲಕರಿಗೆ ಚಾಲನಾ ಪರವಾನಗಿ ನೀಡುವ ರೈತ ಸಾರಥಿ ಯೋಜನೆಗೆ ಕಳೆದ ಬಜೆಟ್ ನಲ್ಲಿ2 ಕೋಟಿ ರೂ ಇರಿಸಲಾಗಿತ್ತು. ಈ ಯೋಜನೆ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಾರಿಗೆ ನಿಗಮಗಳ ನೌಕರರಿಗೂ ವಸತಿ ಸೌಲಭ್ಯ , ಮಹಿಳೆಯರಿಗೆ ಉಚಿತ ಚಾಲನಾ ತರಬೇತಿ ಹಾಗೂ ಪರವಾನಗಿ ನೀಡುವುದು, ಇಂದಿರಾ ಸಾರಿಗೆ, ಇಂದಿರಾ ಪಾಸ್, ಕೆಎಸ್ ಆರ್ ಟಿಸಿಗೆ ೧೫ ಡಬ್ಬಲ್ ಡೆಕ್ಕರ್ ಬಸ್ ಮೊದಲಾದ ಬೇಡಿಕೆ ಇರಿಸಿದ್ದು ಬಜೆಟ್ ನಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ ಎಂದರು.