ದೊಡ್ಡಬಳ್ಳಾಪುರ: 5 ತಿಂಗಳ ಭ್ರೂಣವನ್ನು ಚರಂಡಿಗೆ ಎಸೆದ ಪಾಪಿಗಳು
ಬೆಂಗಳೂರು, ಮಾರ್ಚ್ 24: ಇನ್ನು ಅಮ್ಮನ ಅಪ್ಪುಗೆಯನ್ನು ಕಾಣದ, ಕಣ್ಣೇ ತೆರೆಯದ 5 ತಿಂಗಳ ಭ್ರೂಣವನ್ನು ಆಸ್ಪತ್ರೆ ಸಿಬ್ಬಂದಿ ಚರಂಡಿಗೆ ಎಸೆದಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಜನರನ್ನು ರಕ್ಷಣೆ ಮಾಡುವ ವೈದ್ಯರಿಂದಲೇ ಇಂತಹ ಘಟನೆ ನಡೆದಿರುವುದು, ಸಮಾಜಕ್ಕೆ ಒಂದು ಕಳಂಕವಾಗಿದೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಮನಕಲಕುವ ಈ ಧಾರುಣ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆ ತ್ಯಾಜ್ಯ ಹೊರಗೆ ಹೋಗುವ ಕೊಳವೆಯಲ್ಲಿ ಭ್ರೂಣ ಪತ್ತೆಯಾಗಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ 5 ತಿಂಗಳ ಭ್ರೂಣ ಚರಂಡಿ ಪಾಲಾಗಿದೆ.
ಭ್ರೂಣ ಹತ್ಯೆ ನಿಷೇಧ ಇದ್ದರೂ ಸಹ ಕಾನೂನು ಬಾಹಿರವಾಗಿ ವೈದ್ಯರು ಭ್ರೂಣ ಹತ್ಯೆ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಈ ಖಾಸಗಿ ಆಸ್ಪತ್ರೆ ಜನನಿಬಿಡ ಪ್ರದೇಶದಲ್ಲಿದ್ದು, ಘಟನೆಯ ಬಗ್ಗೆ ಪೊಲೀಸರು ಮತ್ತು ಆಸ್ಪತ್ರೆ ವೈದ್ಯರ ನಡುವೆ 1 ಗಂಟೆಯ ಕಾಲ ಮಾತುಕತೆ ನಡೆದಿದ್ದು, ಈ ಬಗ್ಗೆ ಅನುಮಾನಗಳು ಸಾರ್ವಜನಿಕರನ್ನ ಕಾಡುತ್ತಿದೆ.
ದೊಡ್ಡಬಳ್ಳಾಪುರ ಡಿವೈಎಸ್ಪಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.