ಬೆಂಗಳೂರು ವಾಸಿ ಉತ್ತರ ಕರ್ನಾಟಕ ಮಂದಿಗೆ ಏನಾಗಿದೆ?
ಕಳೆದ ಏಳೆಂಟು ವರ್ಷಗಳಲ್ಲಿ ಕಾವೇರಿ ಸಮಸ್ಯೆ ಬಂದಾಗಲೆಲ್ಲ ಬೆಂಗಳೂರಿನಲ್ಲಿ ಐಟಿ-ಬಿಟಿ ವಲಯದಲ್ಲಿ ಕೆಲಸ ಮಾಡುವ ಮೈಸೂರು-ಮಂಡ್ಯ ಭಾಗದ ಯುವಜನತೆ ತಾವೇತಾವಾಗಿ ಸಂಘಟನೆ ಮಾಡಿಕೊಂಡು ಬೆಂಗಳೂರಿನಲ್ಲಿ ಹೋರಾಟಕ್ಕೆ ಇಳಿಯುತ್ತಾರೆ.
ಕಳೆದ ಎರಡು ವರ್ಷಗಳಿಂದ ಕೋಲಾರ-ಚಿಕ್ಕಬಳ್ಳಾಪುರದ ಯುವಕ/ಯುವತಿಯರು "ಯುವಶಕ್ತಿ" ಹೆಸರಿನಲ್ಲಿ ಸಂಘಟಿತರಾಗಿ "ಶಾಶ್ವತ ನೀರಾವರಿ" ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಸಭೆ-ಸಮಾವೇಶಗಳನ್ನು ಸಂಘಟಿಸುತ್ತಿದ್ದಾರೆ.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]
ಆದರೆ,
ಬೆಂಗಳೂರಿನಲ್ಲಿರುವ
ಈ
ಉತ್ತರ
ಕರ್ನಾಟಕದ
ಯುವಜನತೆಗೆ
ಏನಾಗಿದೆ?
ಬೆಂಗಳೂರಿನಲ್ಲಿ
ಕೇವಲ
"ಜೋಳದ
ರೊಟ್ಟಿ
ಮತ್ತು
ಎಣ್ಣೆಗಾಯಿ
ಪಲ್ಯ"
ಸಿಗುವ
ಖಾನಾವಳಿಗಳನ್ನು
ಹುಡುಕಾಡುವುದಕ್ಕೇ
ಸೀಮಿತವಾಗಿದೆಯೇ
ಅವರ
ಕ್ರಿಯಾಶೀಲತೆ?
[ಗ್ಯಾಲರಿ:
ಮಹದಾಯಿ
ತೀರ್ಪು
ಖಂಡಿಸಿ
ರೈತರ
ಆಕ್ರೋಶ]
ಅದು ಕೃಷ್ಣಾ-ಆಲಮಟ್ಟಿ ಯೋಜನೆ ಇರಬಹುದು, ಈಗ ಮಹದಾಯಿ-ಕಳಸಾಬಂಡೂರಿ ವಿಷಯ ಇರಬಹುದು, ಈ ಸಮಸ್ಯೆಯ ಬಾಧೆ ತಟ್ಟದ ದಕ್ಷಿಣ ಕರ್ನಾಟಕದವರನ್ನು ಬಿಡಿ, ಆದರೆ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವ ಉತ್ತರ ಕರ್ನಾಟಕದ ಲಕ್ಷಾಂತರ ಯುವಜನತೆ ತಮ್ಮ ಮಣ್ಣಿನ ಋಣವನ್ನು ತೀರಿಸುವ ಸಂದರ್ಭಗಳನ್ನು ಕಳೆದುಕೊಂಡರೆ, ಅದು ಕ್ಷಮಾರ್ಹವಲ್ಲ. ಯೋಚಿಸಿ.[ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ]
ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ನರಗುಂದ-ನವಲಗುಂದಗಳಿಗೆ ಹೋಗಿಬಂದು, ಅಲ್ಲಿಯ ಬಡ, ನಿರುದ್ಯೋಗಿ, ಬಹುತೇಕ ಅವಿದ್ಯಾವಂತ ರೈತರು ಸ್ವಯಂಪ್ರೇರಿತವಾಗಿ ಹೋರಾಟ ಮತ್ತು ಚಳವಳಿಗಳಲ್ಲಿ ಪಾಲ್ಗೊಂಡಿದ್ದನ್ನು ಕಂಡಿರುವ ನಾನು, ಅದೇ ತರಹದ ಕಾಳಜಿ ಮತ್ತು ಹೋರಾಟ ಮನೋಭಾವವನ್ನು ಹೊಟ್ಟೆ ತುಂಬಿದ ಈ ಯುವಜನತೆಯಲ್ಲಿ ಕಾಣದಿರುವ ಕಾರಣಕ್ಕೆ ಇಷ್ಟು ಕಟುವಾಗಿ, ಬಹಳ ಜವಾಬ್ದಾರಿ ಮತ್ತು ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. [ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?]
ಇದು ವಾಟ್ಸ್ಯಾಫ್, ಫೇಸ್ಬುಕ್, ಟ್ವಿಟ್ಟರ್ಗಳ ಯುಗ. ಸಮಯ ಬಂದಾಗ ಹೋರಾಟ ಕಟ್ಟುವುದು ಅಷ್ಟು ಕಷ್ಟವಲ್ಲ. ಮಣ್ಣಿನ ಋಣಬಾಧೆ ಬಾಧಿಸಬೇಕು ಅಷ್ಟೆ.