ರಂಗಶಂಕರದಲ್ಲಿ ಗಿರೀಶ್ ಕಾರ್ನಾಡರ 'ತಲೆದಂಡ' ನಾಟಕ ಪ್ರದರ್ಶನ
ಬೆಂಗಳೂರು, ಜು.6: ರಂಗಸಿರಿ ಪ್ರೊಡಕ್ಷನ್ಸ್ ಅರ್ಪಿಸುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ರಚಿಸಿರುವ ಸಂದೀಪ್ ಪೈ ನಿರ್ದೇಶನದ ತಲೆದಂಡ ನಾಟಕ ಜು.15ರಂದು ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.
ಗಿರೀಶ್ ಕಾರ್ನಾಡ್ ಅವರು ಎಲ್ಲಾ ಸೀಮೆಯನ್ನು ಮೀರಿದ ಪ್ರತಿಭೆ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸು ಪ್ರಮುಖ ನಾಟಕ ಕೃತಿಗಳನ್ನು ರಚಿಸಿದ್ದಾರೆ.
ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ನಾಳೆ ಪ್ರದರ್ಶನ
ಜೆಪಿನಗರದ ಎರಡನೇ ಹಂತದಲ್ಲಿರುವ ರಂಗಶಂಕರದಲ್ಲಿ ಜು.15ರಂದು ಭಾನುವಾರ ಮಧ್ಯಾಹ್ನ 3.30ಹಾಗೂ ಸಂಜೆ 7.30ಕ್ಕೆ ನಡೆಯಲಿದೆ. ಆಸಕ್ತರು ಪಾಲ್ಗೊಳ್ಳಬಹುದಾಗಿದೆ.
Comments
English summary
Rangasiri Productions presents its new play Taledanda written by Girish Karnad and Directed by Sandeep Pai S on 15th of July at Rangashankara at 3.30 PM and 7 PM.
Story first published: Friday, July 6, 2018, 12:36 [IST]