ರಂಗಪಯಣಕ್ಕೆ 10ನೇ ವರ್ಷದ ಸಂಭ್ರಮ , ಕಲಾಕ್ಷೇತ್ರದಲ್ಲಿ ಗುಲಾಬಿ ಗ್ಯಾಂಗ್ 2
ಬೆಂಗಳೂರು, ಜುಲೈ 29: ರಂಗಪಯಣಕ್ಕೆ 10ನೇ ವರ್ಷದ ಸಂಭ್ರಮ, 2009 ಜುಲೈ 31ರಂದು ಅಧಿಕೃತವಾಗಿ ತನ್ನ ಸಾಂಸ್ಕೃತಿಕ ಚಟುವಟಿಕೆ ಆರಂಭಿಸಿದ 'ರಂಗಪಯಣ' ತಂಡಕ್ಕೀಗ 10ನೇ ವರ್ಷದ ಸಂಭ್ರಮ. "ಪ್ರತಿ ವರ್ಷ ಒಂದೊಂದು ಹೊಸ ನಾಟಕದೊಂದಿಗೆ ವರ್ಷವನ್ನು ಆರಂಭಿಸುವ ರೂಢಿ ನಮ್ಮ ರಂಗಪಯಣ ತಂಡದ್ದು. ಅದರಂತೆ ಈ ವರ್ಷವು ನಾವು ಹೊಸ ನಾಟಕದೊಂದಿಗೆ 10ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷ ಜುಲೈ 31ರಂದು ರವೀಂದ್ರ ಕಲಾಕ್ಷೇತ್ರ ಗುಲಾಬಿ ಗ್ಯಾಂಗ್ 2 ಪ್ರದರ್ಶನವಿರಲಿದೆ" ಎಂದು ತಂಡದ ಮುಖ್ಯಸ್ಥರಾದ ನಯನಾ ಸೂಡ ಹೇಳಿದರು.
ರವೀಂದ್ರ ಕಲಾಕ್ಷೇತ್ರ ಬಂದ್ ಆಗುತ್ತಾ? ಸಮಸ್ಯೆ ಏನು?
ರಂಗಪಯಣದ ಬಗ್ಗೆ ಮಾತನಾಡುತ್ತಾ, "ಎಂದಿನಂತೆ ಅದೇ ನಿರೀಕ್ಷೆ ಹುಮ್ಮಸ್ಸು ನಮ್ಮದು. ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿಕೊಂಡ ರಂಗಪಯಣ ಅಲ್ಲಿನ ಮಕ್ಕಳ ಶಿಬಿರ, ನಾಟಕಗಳ ಮೂಲಕ ಸಕ್ರಿಯವಾಗಿತ್ತು. 8 ಜನರಲ್ಲಿ ಪ್ರಾರಂಭವಾದ ತಂಡ ಇದೀಗ 60ಕ್ಕೂ ಹೆಚ್ಚು ಕಲಾವಿದರು ಒಡಗೂಡಿ ಸಾಮಾಜಿಕವಾಗಿ ನಾಟಕಗಳನ್ನು ಪ್ರಯೋಗಿಸಿಕೊಂಡು ಬಂದಿದೆ. ಮಕ್ಕಳ ವಿದ್ಯಾಭ್ಯಾಸ ಕಲಾವಿದರ ಆರೋಗ್ಯ ಸಮಸ್ಯೆ ಇಂತಹ ಕೈಂಕರ್ಯಕ್ಕೆ ತಂಡವು ಟಿಕೆಟ್ ಶೋಗಳ ಮೂಲಕ ಅವರ ಜೊತೆಗಿರುವುದಕ್ಕೆ ನಮಗೆ ಖುಷಿ ಮತ್ತು ಹೆಮ್ಮೆ ಇದೆ" ಎಂದರು.
ರಂಗಪಯಣದ ಹಲವು ಯಶಸ್ವಿ ಪ್ರಯೋಗಗಳು
ಇದಕ್ಕೂ ಮುಂಚೆ 'ಶ್ರದ್ಧಾ', 'ಚಂದ್ರಗಿರಿ ತೀರದಲ್ಲಿ', 'ಮಾದರಿ ಮಾದಯ್ಯ', 'ಭೂಮಿ', 'ಒಂದಾನೊಂದು ಕಾಲದಲ್ಲಿ', 'ಬದುಕು ಜಟಕಾ ಬಂಡಿ' ಇನ್ನು ಮುಂತಾದ ನಾಟಕಗಳು/ಬೀದಿ ನಾಟಕಗಳನ್ನು ಪ್ರಯೋಗಿಸಿದ್ದ ರಂಗಪಯಣ ಇಲ್ಲಿಯವರೆಗೂ ಹಲವಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ. ರಂಗಭೂಮಿಯೆಂಬ ಕ್ರಿಯಾಶೀಲವಾದ ವೇದಿಕೆಯನ್ನು, ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವಂತೆ ಬಳಸುವ ಉದ್ದೇಶ ಈ ಹಿಂದೆ ಸಾಕಷ್ಟು ಹಿರಿಯರು ಮಾಡಿದ್ದಾರೆ.
32 ಪ್ರದರ್ಶನ ಕಂಡಿರುವ ಗುಲಾಬಿ ಗ್ಯಾಂಗ್
ಆ
ಪರಂಪರೆಯನ್ನು
ಕಾಪಾಡುವ
ಹಾಗೂ
ಮುಂದುವರೆಸುವ
ಸಣ್ಣ
ಜವಾಬ್ದಾರಿ
ನಮ್ಮದು
ಎಂಬ
ಭಾವನೆ
ಮತ್ತು
ನಮ್ಮ
ಸ್ಪೂರ್ತಿ.
ಈ
ಹಿಂದೆ
ಅಂದರೆ
2017ರಲ್ಲಿ
ಮಹಿಳಾವಾದಿ
ಹಾಗೂ
ಪ್ರಗತಿಪರ
ಹೋರಾಟಗಾರ್ತಿ
ಸಂಪತ್
ಪಾಲ್
ದೇವಿ
ಅವರ
ಸಂಘಟನೆ
ಗುಲಾಬಿ
ಗ್ಯಾಂಗ್ನಿಂದ
ಪ್ರಭಾವಿತರಾದ
ನಾವು
ಇವರ
ಹೋರಾಟವನ್ನು
ಕನ್ನಡ
ನಾಡಿನ
ಜನಕ್ಕೂ
ತಲುಪಿಸುವ
ಪ್ರಯತ್ನದಲ್ಲಿ
ಹಾಗೂ
ನಮ್ಮಲ್ಲಿನ
ಶೋಷಿತ
ಮಹಿಳೆಯರಲ್ಲಿ
ಸ್ಪೂರ್ತಿ
ತುಂಬಿದ
ಉದ್ದೇಶವನ್ನು
ನಮ್ಮ
ತಂಡಹೊಂದಿದ್ದು,
ಗುಲಾಬಿ
ಗ್ಯಾಂಗ್
ಹೆಸರಿನಲ್ಲಿ
ನಾಟಕವನ್ನು
ಪ್ರಯೋಗಿಸಿ
32ಕ್ಕೂ
ಹೆಚ್ಚು
ಪ್ರದರ್ಶನಗಳನ್ನು
ನೀಡಿ
ಯಶಸ್ವಿಯಾದೆವು
ಬಾಂಡ ಜಿಲ್ಲೆಯ ಒಬ್ಬ ಅನಕ್ಷರಸ್ಥ ಮಹಿಳೆ
ಈಗ ಗುಲಾಬಿ ಗ್ಯಾಂಗ್ ಭಾಗ -2 ನಾಟಕವನ್ನು ಸಿದ್ಧಪಡಿಸಿ ಪ್ರಯೋಗಿಸಲು ಹೊರಟ್ಟಿದ್ದೇವೆ.
ಸಂಪತ್ ಪಾಲ್ ದೇವಿ ಉತ್ತರ ಪ್ರದೇಶ ರಾಜ್ಯದ, ಬಾಂಡ ಜಿಲ್ಲೆಯ ಒಬ್ಬ ಅನಕ್ಷರಸ್ಥ ಮಹಿಳೆ. ತನ್ನ ಸುತ್ತಮುತ್ತಲಿನ ಸ್ತ್ರೀ ಶೋಷಣೆಯ ವಿರುದ್ಧ ತಿರುಗಿ ಬಿದ್ದ ಈಕೆ, ಮುಂದೆ ತನ್ನ ಸುತ್ತಮುತ್ತಲಿನ ಅನೇಕ ಸ್ತ್ರೀಯರಿಗೆ ಸ್ಪೂರ್ತಿಯಾದರು. ಹಾಗೆ ಇವರ ಈ ಹೆಜ್ಜೆ ಮುಂದೆ ಗುಲಾಬಿ ಗ್ಯಾಂಗ್ ಎಂಬ ಸಶಕ್ತ ಸಂಘಟನೆಯೊಂದರ ಬೆಳವಣಿಗೆಗೂ ಕಾರಣವಾಯಿತು.
ರಾಜ್ಗುರು ಹೊಸಕೋಟೆ ನಿರ್ದೇಶನ
ಸತತ ಮೂರು ದಶಕಗಳಿಂದ ಮಹಿಳಾಪರವಾದ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸಂಪತ್ ಪಾಲ್ ದೇವಿಯವರ ಆಶಯವನ್ನು ಕನ್ನಡ ನಾಡಿಗೂ ತಲುಪಿಸಿ ಮಹಿಳಾ ಸಬಲೀಕರಣಕ್ಕೆ ಕಿರಿದಾದ ಕೊಡುಗೆಯಾಗುವತ್ತ ಸಣ್ಣ ಹೆಜ್ಜೆ ಈ ನಾಟಕದ್ದು. ಈ ನಾಟಕದ ರಂಗರೂಪ ಪ್ರವೀಣ್ ಸೂಡ ಅವರದ್ದು, ರಂಗ ವಿನ್ಯಾಸ-ಸಂಗೀತ-ನಿದೇರ್ಶನ ರಾಜ್ಗುರು ಹೊಸಕೋಟೆ ಅವರದ್ದು, ನಿರ್ಮಾಣ ಹಾಗೂ ಅಭಿನಯ ರಂಗಪಯಣ ತಂಡದ್ದು. ಎಂದಿನಂತೆ ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ ರಂಗಪಯಣ.