ಜೂನ್ 30ಕ್ಕೆ ರಕ್ಷಾ ಫೌಂಡೇಷನ್ ಪುಸ್ತಕ ವಿತರಣೆ, ಕಾಮಿಡಿ ಷೋ
Recommended Video
ಬೆಂಗಳೂರು, ಜೂನ್ 28 : ಬಿಬಿಎಂಪಿಯ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಸ್ಥಾಪಿಸಿರುವ ರಕ್ಷಾ ಫೌಂಡೇಷನ್ ನಿಂದ ಇದೇ ಜೂನ್ ಮೂವತ್ತರ ಶನಿವಾರದಂದು ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಎಂಟನೇ ವರ್ಷದ ಕಾರ್ಯಕ್ರಮವಾಗಿದ್ದು, ಅಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
ಜಯನಗರ 11ನೇ ಮುಖ್ಯರಸ್ತೆಯ ಚಂದ್ರಗುಪ್ತ ಮೌರ್ಯ (ಶಾಲಿನಿ) ಆಟದ ಮೈದಾನದಲ್ಲಿ ಈ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಉಳಿದ ವಿವರ ಇಂತಿದೆ.
ಉದ್ಘಾಟನೆ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಪುಸ್ತಕ ವಿತರಣೆ- ಕೇಂದ್ರ ಸಚಿವ ಅನಂತಕುಮಾರ್
ಅಧ್ಯಕ್ಷತೆ- ಆರ್.ಅಶೋಕ್
ಮುಖ್ಯ ಅತಿಥಿಗಳು- ಮೇಯರ್ ಸಂಪತ್ ರಾಜ್, ಶಾಸಕ ಸತೀಶ್ ರೆಡ್ಡಿ, ನಟ ಧ್ರುವ ಸರ್ಜಾ, ನಟಿ ತಾರಾ, ತಿಪ್ಪೇಸ್ವಾಮಿ, ಬಿ.ಎನ್.ಪ್ರಹ್ಲಾದ್, ಸುಬ್ಬನರಸಿಂಹ, ಪಿ.ಎನ್.ಸದಾಶಿವ, ಮನೋಹರ ಟಿ ಭಂಡಾರಿ, ರಮೇಶ್, ಎಚ್.ಸಿ.ನಾಗರತ್ನಾ ರಾಮಮೂರ್ತಿ
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ತಂಡದವರಿಂದ ಕಾಮಿಡಿ ಷೋ.
ಎಂಟು ವರ್ಷಗಳ ಹಿಂದೆ ಸಿ.ಕೆ.ರಾಮಮೂರ್ತಿ ಆವರು ಆರಂಭಿಸಿದ ರಕ್ಷಾ ಫೌಂಡೇಷನ್ ಹಲವಾರು ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ, ಹಿಂದುಳಿದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರದ ವಿತರಣೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ.
ಇದರ ಜತೆಗೆ ವಿಕಲಚೇತನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಮತ್ತು ಉಚಿತವಾಗಿ ಕಂಪ್ಯೂಟರ್ ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನು ಹೊಂದಿದೆ.