ರಾಜೀವ್ ಗಾಂಧಿ ಹತ್ಯೆ ಕುರಿತ ಪುಸ್ತಕ ಬಿಡುಗಡೆ ಮಾಡಿದ ಕುಮಾರಸ್ವಾಮಿ
ಬೆಂಗಳೂರು, ಜನವರಿ 10: ಡಾ.ಡಿ.ವಿ.ಗುರುಪ್ರಸಾದ್ ಕನ್ನಡಕ್ಕೆ ಭಾವಾನುವಾದ ಮಾಡಿರುವ ಡಿ.ಆರ್.ಕಾರ್ತಿಕೇಯನ್ ರಚಿತ "ರಾಜೀವ್ ಗಾಂಧಿ ಭೀಕರ ಹತ್ಯೆ" ಮಾದರಿ ತನಿಖೆಯೆ ಸೂಕ್ಷ್ಮ ಮಜಲುಗಳು ಪುಸ್ತಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ರಾಷ್ಟ್ರದ ಪ್ರಧಾನಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣವನ್ನು ತನಿಖೆ ಮಾಡಿ, ಆ ಬಗೆಗಿನ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದಕ್ಕಾಗಿ ಡಿ.ಆರ್.ಕಾರ್ತಿಕೇಯನ್ ಹಾಗೂ ಕನ್ನಡಕ್ಕೆ ಭಾವಾನುವಾದ ಮಾಡಿರುವ ಡಾ:ಡಿ.ವಿ.ಗುರುಪ್ರಸಾದ್ ಅವರನ್ನು ಅಭಿನಂದಿಸಿದರು.
ನಿಗಮ-ಮಂಡಳಿ ನೇಮಕಕ್ಕೆ ತಡೆ, ಸಿಎಂ ಕುಮಾರಸ್ವಾಮಿ ಹೇಳಿದ್ದೇನು?
ರಾಜ್ಯದ ಪೋಲಿಸ್ ಅಧಿಕಾರಿಗಳು ಅತ್ಯಂತ ಯಶಸ್ವಿಯಾಗಿ ಈ ಗಂಭೀರ ಪ್ರಕರಣದ ಯಶಸ್ವಿ ತನಿಖೆ ನಡೆಸಿದ್ದು ಶ್ಲಾಘನೀಯ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಉತ್ತಮ ಅಧಿಕಾರಿಗಳು ಕಾರಣ. ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಮೈತ್ರಿ ಸರ್ಕಾರ ಗುರುತಿಸಿ ಉತ್ತೇಜನ ನೀಡುತ್ತದೆ ಎಂದರು.
ಆಡಳಿತ
ನನ್ನ
ಕೈಯಲಿಲ್ಲ,
ಕಾಂಗ್ರೆಸ್
ಕೈಯಲ್ಲಿದೆ:
ಕುಮಾರಸ್ವಾಮಿ
ಅಸಮಾಧಾನ
ಗೃಹ
ಸಚಿವ
ಎಂ.ಬಿ.ಪಾಟೀಲ್,
ಮಾಜಿ
ಕೇಂದ್ರ
ಸಚಿವ
ಎಂ.ವಿ.ರಾಜಶೇಖರನ್,
ಡಾ:ಡಿ.ಆರ್.ಕಾರ್ತಿಕೇಯನ್,
ಡಾ:ಡಿ.ವಿ.ಗುರುಪ್ರಸಾದ್,
ಮುಖ್ಯ
ಕಾರ್ಯದರ್ಶಿ
ಟಿ.ಎಂ.ವಿಜಯಭಾಸ್ಕರ್
ಮತ್ತಿತರರು
ಉಪಸ್ಥಿತರಿದ್ದರು.