ಗಮನಿಸಿ ಈ ಮಾರ್ಗದಲ್ಲಿ ಮೇ 29ರಿಂದ 31ರವರೆಗೆ ಮೆಟ್ರೊ ರೈಲು ಸಂಚಾರ ಇಲ್ಲ
ಬೆಂಗಳೂರು, ಮೇ 28 : ಮೇ 29ರಿಂದ 31ರವರೆಗೆ ರಾಜಾಜಿನಗರ-ಸಂಪಿಗೆರಸ್ತೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.
ನಮ್ಮ ಮೆಟ್ರೊ ಉತ್ತರ-ದಕ್ಷಿಣ ಕಾರಿಡಾರ್ ನ ಯಲಚೇನಹಳ್ಳಿ-ಸಂಪಿಗೆ ರಸ್ತೆ ಮಾರ್ಗದ ಸುರಕ್ಷತಾ ತಪಾಸಣೆ ನಡೆಯುವುದರಿಂದ ಮೆಟ್ರೊ ರೈಲು ಸ್ಥಗಿತಗೊಳಿಸಲಾಗುತ್ತಿದೆ.[ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿಯವರೆಗೆ ಓಡಲಿದೆ ನಮ್ಮ ಮೆಟ್ರೋ]
ಮೆಟ್ರೊ ರೈಲು ಸುರಕ್ಷತಾ ಆಯುಕ್ತ ಕೆ.ಎ.ಮನೋಹರನ್ ಅವರು ಯೆಲಚೇನಹಳ್ಳಿ- ಸಂಪಿಗೆ ರಸ್ತೆ ಮಾರ್ಗದ ತಪಾಸಣೆ ನಡೆಸಲಿದ್ದಾರೆ. ಈ 3 ದಿನಗಳಲ್ಲಿ ಶ್ರೀರಾಂಪುರ, ಕುವೆಂಪು ರಸ್ತೆ ಹಾಗೂ ಸಂಪಿಗೆ ರಸ್ತೆ ನಿಲ್ದಾಣಗಳಲ್ಲಿ ಮಾತ್ರ ಮೆಟ್ರೊ ಸೇವೆ ಇರುವುದಿಲ್ಲ.['ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ]
ಆದರೆ, ನಾಗಸಂದ್ರ ನಿಲ್ದಾಣದಿಂದ ರಾಜಾಜಿನಗರ ನಿಲ್ದಾಣದವರೆಗೆ ಎಂದಿನಂತೆ ಸೇವೆ ಮುಂದುವರಿಯಲಿದೆ. ರಾಜಾಜಿನಗರ ಮೆಟ್ರೊ ನಿಲ್ದಾಣದಿಂದ ಮೆಜೆಸ್ಟಿಕ್ ಕೆಂಪೇಗೌಡ ನಿಲ್ದಾಣದವರೆಗೆ ಸಂಪರ್ಕ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತದೆ ಎಂದು ಮೆಟ್ರೊ ರೈಲು ನಿಗಮ ತಿಳಿಸಿದೆ.