Breaking news: ಉಲ್ಲಾಳ ಉಪನಗರದಲ್ಲಿ ಭಾರೀ ಮಳೆಗೆ ಇಬ್ಬರು ಕಾರ್ಮಿಕರು ಬಲಿ
ಬೆಂಗಳೂರು , ಮೇ18: ಕಾವೇರಿ ಐದನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಪೈಪ್ ಲೈನ್ ನಿರ್ಮಾಣ ಕಾರ್ಯದಲ್ಲಿ ತೊಡಿದ್ದ ಕಾರ್ಮಿಕರು ಅತೀ ಹೆಚ್ಚು ನೀರು ಹರಿದ ಪರಿಣಾಮ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಮೂವರು ಕಾರ್ಮಿಕರು ಕೊಚ್ಚಿ ಹೋಗುವ ವೇಳೆ ಓರ್ವನನ್ನು ರಕ್ಷಿಸಲಾಗಿದೆ.
ಉಲ್ಲಾಳ ಉಪನಗರದ ಸಮೀಪದಲ್ಲಿ ನಡೆದಿರುವ ಘಟನೆಯಲ್ಲಿ ಬಿಹಾರ ಮೂಲದ ದೇವದತ್ತ್, ಉತ್ತರ ಪ್ರದೇಶ ಮೂಲದ ಅಂಕಿತ್ ಕುಮಾರ್ ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ.
Recommended Video
ಈ ಇಬ್ಬರು ಕಾರ್ಮಿಕರು ಕಾವೇರಿ ಐದನೇ ಹಂತದ ಕಾಮಗಾರಿಯಲ್ಲಿ ಹಲವಾರು ತಿಂಗಳಿಂದ ಕೆಲಸವನ್ನು ಮಾಡುತ್ತಿದ್ದರು. ನಿನ್ನೆ ಪೈಪ್ ಲೈನ್ ಅಳವಡಿಸುವ ವೇಳೆ ಭಾರೀ ಮಳೆ ಬಂದು ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿ ನೀರಿನಲ್ಲಿ ಕೊಚ್ಚಿಹೋಗಿದ್ದು ಅಗ್ನಿಶಾಮಕ ಸಿಬ್ಬಂದಿ ಇಬ್ಬರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಉಲ್ಲಾಳದಲ್ಲಿ
ಮೃತಪಟ್ಟವರ
ಕುಟುಂಬಕ್ಕೆ
ತಲಾ
5
ಲಕ್ಷ
ರೂ.
ಪರಿಹಾರ
:
ಉಲ್ಲಾಳದಲ್ಲಿ
ಜಲಮಂಡಳಿಯ
ಕಾಮಗಾರಿ
ನಡೆಯುತ್ತಿದ್ದು,
ಇಬ್ಬರು
ನಾಗರಿಕರು
ಸಾವನ್ನಪ್ಪಿರುವುದಕ್ಕೆ
ಪ್ರತಿಕ್ರಿಯೆ
ನೀಡಿ,
ಮೃತಪಟ್ಟ
ವ್ಯಕ್ತಿಗಳ
ಕುಟುಂಬಕ್ಕೆ
ತಲಾ
5
ಲಕ್ಷ
ರೂ.
ಪರಿಹಾರವನ್ನು
ನೀಡಲು
ತೀರ್ಮಾನಿಸಲಾಗಿದೆ
ಎಂದರು.
ರಾಜಕಾಲುವೆ, ಕೆರೆ ಒತ್ತುವರಿ ಪ್ರದೇಶವನ್ನು ಗುರುತಿಸಲಾಗಿದ್ದು,ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಳಚರಂಡಿ, ಗ್ಯಾಸ್ ಲೈನ್, ನೀರು ಸರಬರಾಜು, ಟೆಲಿಕಾಂ ಕೇಬಲ್, ವಿದ್ಯುಚ್ಛಕ್ತಿ ಕೇಬಲಿಂಗ್ , ಹಲವಾರು ಕಾಮಗಾರಿಗಳು ಒಟ್ಟಿಗೆ ಪ್ರಾರಂಭವಾಗಿದೆ. ಆದ್ದರಿಂದ ಟಾಸ್ಕ್ ಫೋರ್ಸ್ನ್ನು ರಚಿಸಲಾಗಿದ್ದು, ಈ ಎಲ್ಲ ಕಾಮಗಾರಿಗಳು ಮುಗಿದ ನಂತರ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು