ಮಳೆ ತಂದ ಅವಾಂತರ: ಎರಡು ಎಕರೆ ದ್ರಾಕ್ಷಿ ಬೆಳೆ ನಾಶ
ಬೆಂಗಳೂರು, ಏಪ್ರಿಲ್ 30: ಬುಧವಾರ ಸುರಿದ ಭಾರೀ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಸುಮಾರು ಎರಡು ಎಕರೆ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿದೆ.
Recommended Video
ಈ ಕೊರೊನಾ ವೈರಸ್ ಎಫೆಕ್ಟ್ ಮಧ್ಯೆ ರೈತರಿಗೆ ನ್ಯಾಯಯುತ ಬೆಲೆ ಸಿಗದೇ ಸಂಕಟ ಪಡುತ್ತಿರುವ ಸಂದರ್ಭದಲ್ಲಿಯೇ ದ್ರಾಕ್ಷಿ ಬೆಳೆ ನಾಶವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಳೆ ತಂದ ಅವಾಂತರ: ದೇವನಹಹಳ್ಳಿಯಲ್ಲಿ ಎರಡು ಎಕರೆ ದ್ರಾಕ್ಷಿ ಬೆಳೆ ನಾಶBS Yediyurappa Siddaramaiah
Posted by Bengaluru Zone onThursday, 30 April 2020
ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಗ್ರಾಮದ ದೇವರಾಜಪ್ಪ ಎಂಬ ರೈತ ಕಳೆದ ಐದಾರು ವರ್ಷಗಳಿಂದ ಸಾಕಿ ಬೆಳೆಸಿದ್ದ, 15 ರಿಂದ 20 ಲಕ್ಷ ರೂ. ಮೌಲ್ಯದ ದ್ರಾಕ್ಷಿ ತೋಟ ಈಗ ಕಟಾವಿಗೆ ಸಿದ್ದವಾಗಿತ್ತು.
ಸುಮಾರು 50 ರಿಂದ 60 ಟನ್ ದ್ರಾಕ್ಷಿ ಬೆಳೆ ಬಂದಿತ್ತು. ಬುಧವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಗೆ ಮಕಾಡೆ ಮಲಗಿ ಚಾಪೆಯಂತಾಗಿದೆ. ರೈತ ದೇವರಾಜಪ್ಪ ದಂಪತಿ ತಮಗೆ ಆಗಿರುವ ನಷ್ಟವನ್ನು ತಾಲ್ಲೂಕು ಆಡಳಿತ ಹಾಗೂ ಸರ್ಕಾರ ಮಾನವೀಯ ದೃಷ್ಟಿಯಿಂದ ಪರಿಹಾರ ಕೊಡುವ ಮೂಲಕ ಆಸರೆಯಾಗಬೇಕೆಂದು ಕೇಳಿಕೊಂಡಿದ್ದಾರೆ.
ಗಾಳಿ-ಮಳೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ದ್ರಾಕ್ಷಿ, ಹೂವು, ಹಣ್ಣು, ಟೊಮ್ಯಾಟೊ, ತರಕಾರಿ ಬೆಳೆಗಳು ನಾಶವಾಗಿ ಹೋಗಿವೆ. ರೈತರ ಗೋಳು ಕೇಳುವವರಾರು ಇಲ್ಲದಂತಾಗಿದೆ.